Advertisement
MIRROR FOCUS

ಮಂಗಳೂರಿನಲ್ಲಿ ಅಡಿಕೆ ಕುರಿತ ಸಮಗ್ರ ಸಂಶೋಧನಾ ಕೃತಿ ‘ARECA NUT’ ಬಿಡುಗಡೆ

Share

ಅಡಿಕೆಯ ಇತಿಹಾಸ, ರಾಸಾಯನಿಕ ಸಂಯೋಜನೆ ಮತ್ತು ಆರೋಗ್ಯ ಸಂಬಂಧಿತ ಅಂಶಗಳನ್ನು ಒಳಗೊಂಡ ಮಹತ್ವದ ಸಂಶೋಧನಾ ಕೃತಿ ARECA NUT: History, Constituents, Cancer & Beyond ನ ಬಿಡುಗಡೆ ಸಮಾರಂಭವನ್ನು ಅಡಿಕೆ ಬೆಳೆಗಾರರ ಪ್ರಮುಖ ಸಂಸ್ಥೆಯಾದ ಕ್ಯಾಂಪ್ಕೋ (CAMPCO) ಆಯೋಜಿಸಿದೆ.

Advertisement

ಎನ್‌.ಐ.ಟಿ. ಕರ್ನಾಟಕ (NITK) ಸುರತ್ಕಲ್‌ನ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ. ಪ್ರಸನ್ನ ಬೇಳೂರು ಅವರು ಈ ಕೃತಿಯನ್ನು ರಚಿಸಿದ್ದು, ಸಮಾರಂಭವು ಫೆಬ್ರವರಿ 18, 2026 ಬುಧವಾರ ಸಂಜೆ 4 ಗಂಟೆಗೆ ಮಂಗಳೂರಿನ ಮಿಷನ್ ಸ್ಟ್ರೀಟ್‌ನಲ್ಲಿರುವ ವಾರಣಾಸಿ ಟವರ್ಸ್‌ನ ಕ್ಯಾಂಪ್ಕೋ ಪ್ರಧಾನ ಕಚೇರಿಯ 4ನೇ ಮಹಡಿಯಲ್ಲಿ ನಡೆಯಲಿದೆ.

ಈ ಕೃತಿ ಅಡಿಕೆಯ ಇತಿಹಾಸದಿಂದ ಹಿಡಿದು ಅದರ ವೈಜ್ಞಾನಿಕ ಮತ್ತು ಆರೋಗ್ಯ ಸಂಬಂಧಿತ ಅಂಶಗಳವರೆಗೆ ಸಮಗ್ರವಾಗಿ ವಿಶ್ಲೇಷಿಸುತ್ತದೆ. ಏಷ್ಯಾದ ಸಂಸ್ಕೃತಿಯಲ್ಲಿ ಅಡಿಕೆ ಮಹತ್ವದ ಪಾತ್ರ ವಹಿಸಿದೆ.  ಈ ಇತಿಹಾಸದ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಜೊತೆಗೆ ಅಡಿಕೆಯ ರಾಸಾಯನಿಕ ಸಂಯೋಜನೆ ಮತ್ತು ಪ್ರಾಚೀನ ಔಷಧ ಪದ್ಧತಿಗಳಲ್ಲಿ ಅದರ ಬಳಕೆಯನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ವಿವರಿಸಲಾಗಿದೆ.  ಅಡಿಕೆಗೆ ‘ಕ್ಯಾನ್ಸರ್ ಕಾರಕ’ ಎಂಬ ಹಣೆಪಟ್ಟಿ ಇರುವ ಹಿನ್ನೆಲೆಯಲ್ಲಿ ಅದರ ಆರೋಗ್ಯ ಪರಿಣಾಮಗಳ ಬಗ್ಗೆ ಚರ್ಚಿಸುವುದರ ಜೊತೆಗೆ, ಆಹಾರ ಉದ್ಯಮದಲ್ಲಿ ಅಡಿಕೆ ಬಳಕೆಯ ಸಾಧ್ಯತೆಗಳನ್ನೂ ಈ ಕೃತಿ ವಿಶ್ಲೇಷಿಸುತ್ತದೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಎನ್‌.ಐ.ಟಿ.ಕೆ ಸುರತ್ಕಲ್ ನಿರ್ದೇಶಕರಾದ ಪ್ರೊ. ಬಿ. ರವಿ, ಕ್ಯಾಂಪ್ಕೋ ಲಿಮಿಟೆಡ್ ಅಧ್ಯಕ್ಷರಾದ ಎಸ್‌.ಆರ್‌. ಸತೀಶ್ಚಂದ್ರ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಮಹೇಶ್ ಪುಚ್ಚಪ್ಪಾಡಿ ಮತ್ತು ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ. ವಿಘ್ನೇಶ್ವರ ವರ್ಮುಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

CAMPCO will host the release of the research book “ARECA NUT: History, Constituents, Cancer & Beyond” by NITK Surathkal Professor Dr. Prasanna Belur on February 18, 2026, in Mangaluru. The book explores arecanut’s history, chemical composition, health impacts, and potential industrial applications. Several dignitaries including NITK Director Prof. B. Ravi and CAMPCO President S.R. Satishchandra will attend the event.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಹವಾಮಾನ ವರದಿ | 18-02-2026 | ಫೆ.20 ರಂದು ಕರ್ನಾಟಕದಲ್ಲಿ ಮಳೆ ಸಾಧ್ಯತೆ

ಶ್ರೀಲಂಕಾ ಸಮೀಪ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಫೆಬ್ರವರಿ 20ರಿಂದ ಕರಾವಳಿ, ಮಲೆನಾಡು…

7 hours ago

ರೋಸ್ಟೆಡ್ ಅಡಿಕೆ ವರ್ಗೀಕರಣ ಸ್ಪಷ್ಟ | ಹೈಕೋರ್ಟ್ ತೀರ್ಪಿನ ಬಳಿಕ ಹೊಸ ಆದೇಶಕ್ಕೆ CAAR ನಿರಾಕರಣೆ

ರೋಸ್ಟೆಡ್ ಅಡಿಕೆ (Roasted Arecanut) ಅನ್ನು Chapter 20 ಅಡಿಯಲ್ಲಿ ವರ್ಗೀಕರಿಸಬೇಕು ಎಂದು…

22 hours ago

ಅಂಚೆ ಇಲಾಖೆ ಭಾವನೆಗಳ ಸೇತುವೆ : ಜಿತೇಂದ್ರ ಗುಪ್ತಾ

ಮೈಸೂರಿನಲ್ಲಿ ನಡೆದ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನದಲ್ಲಿ ಅಂಚೆ ಸೇವೆಗಳ…

22 hours ago

ಸಾಧನೆಗಿಂತ ದೊಡ್ಡದು ಸಂಯಮ

ಸಾಧನೆ ಮನುಷ್ಯನಿಗೆ ಎತ್ತರ ಕೊಡಬಹುದು, ಆದರೆ ಸಂಯಮ ಮತ್ತು ವಿನಯ ಮಾತ್ರ ಗೌರವವನ್ನು…

2 days ago

ತೆಂಗಿನ ರೈತರಿಗೆ ಆಶಾಕಿರಣ | ರೋಗ ನಿಯಂತ್ರಣ ಮತ್ತು ಹೊಸ ತಳಿ ಯೋಜನೆ

ತೆಂಗಿನ ತೋಟಗಳಲ್ಲಿ ರೋಗ ಮತ್ತು ಕಡಿಮೆ ಇಳುವರಿ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ…

2 days ago

ಎಳನೀರು ಸಂಕಷ್ಟ | ಉತ್ಪಾದನೆ ಕುಸಿತದಿಂದ ಸರಬರಾಜಿಗೆ ಹೊಡೆತ..!

ಭಾರತದ ತೆಂಗಿನ ನಗರಿ ಎಂದು ಕರೆಯುವ ಪೊಳ್ಳಾಚಿ-ಅಣ್ಣಾಮಲೈ ಭಾಗದಲ್ಲಿ ಎಳನೀರು ಉತ್ಪಾದನೆ 40%…

2 days ago