#Arecanut | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬಣ್ಣದ ಸೀರೆ | ಕಿನ್ನಿಗೋಳಿಯಲ್ಲಿ ಬಿಡುಗಡೆಗೊಂಡ ನೈಸರ್ಗಿಕ ಬಣ್ಣದ ಸೀರೆ |

July 31, 2023
11:27 PM
ಅಡಿಕೆ ಚೊಗರಿನ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರು ಮಾಡಿದ ಸೀರೆಯು ಕಿನ್ನಿಗೋಳಿಯಲ್ಲಿ ಬಿಡುಗಡೆಗೊಂಡಿತು.  ತಾಳಿಪಾಡಿ ನೇಕಾರರ ಸೊಸೈಟಿಯಲ್ಲಿ ಅಡಿಕೆಯ ಚೊಗರು ಮತ್ತು ಇತರ ನೈಸರ್ಗಿಕ ಬಣ್ಣಗಳಿಂದ ಬಣ್ಣಬಣ್ಣದ ಜಿಐ ಟ್ಯಾಗ್‌  ಹೊಂದಿರುವ ಉಡುಪಿ ಸೀರೆಯು ಬಿಡುಗಡೆಯಾಯಿತು.

ಅಡಿಕೆ ಚೊಗರಿನ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರು ಮಾಡಿದ ಸೀರೆಯ ಕಿನ್ನಿಗೋಳಿಯಲ್ಲಿ ಬಿಡುಗಡೆಗೊಂಡಿತು. ತಾಳಿಪಾಡಿ ನೇಕಾರರ ಸೊಸೈಟಿಯಲ್ಲಿ ಅಡಿಕೆಯ ಚೊಗರು ಮತ್ತು ಇತರ ನೈಸರ್ಗಿಕ ಬಣ್ಣಗಳಿಂದ  ಜಿಐ ಟ್ಯಾಗ್‌  ಹೊಂದಿರುವ ಉಡುಪಿ ಸೀರೆಯು ಬಿಡುಗಡೆಯಾಯಿತು.

Advertisement
Advertisement
ನೈಸರ್ಗಿಕ ಬಣ್ಣದ ನೂಲು

ಕಿನ್ನಿಗೋಳಿಯ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಕದಿಕೆ ಟ್ರಸ್ಟ್ ಮಾರ್ಗದರ್ಶನದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಅಡಿಕೆ ಚೊಗರು ಇತರ ನೈಸರ್ಗಿಕ ಬಣ್ಣಗಳಿಂದ ತಯಾರಾದ ಉಡುಪಿ ಸೀರೆ ಬಿಡುಗಡೆ ನಡೆಯಿತು.

Advertisement
ನೈಸರ್ಗಿಕ ಬಣ್ಣದ ಉಡುಪಿ ಸೀರೆ ಬಿಡುಗಡೆ

ಕಾರ್ಯಕ್ರಮದಲ್ಲಿ ಮಾತನಾಡಿದ ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿ, ಅಡಿಕೆಯ ಬಣ್ಣ ಹಾಗೂ ನೈಸರ್ಗಿಕ ಬಣ್ಣದಿಂದ ತಯಾರು ಮಾಡಿದ ಬಟ್ಟೆಗಳ ಅನಿವಾರ್ಯತೆ ಬಗ್ಗೆ ಮಾತನಾಡಿದರು. ಜಪಾನ್‌ನ ರಾಜಮನೆತನಗಳು 1,200 ವರ್ಷಗಳ ಹಿಂದೆ ಅಡಿಕೆ ಬಣ್ಣವನ್ನು ಬಳಸುತ್ತಿದ್ದರು. ಅಂದರೆ ಅಂದು ಅಡಿಕೆಯ ಬಣ್ಣ ಪ್ರತಿಷ್ಟೆಯ ಪ್ರತೀಕವಾಗಿತ್ತು. ಜಪಾನಿನ ರಾಜಮನೆತನದವರು ಇಂಡೋನೇಷ್ಯಾದಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದ್ದರು  ಶ್ರೀ ಪಡ್ರೆ ಹೇಳಿದರು. ಇಂದು ರಾಸಾಯನಿಕ ರಹಿತವಾದ ಬಣ್ಣಗಳ ಅನಿವಾರ್ಯತೆ ಇದೆ. ರಾಸಾಯನಿಕ ಬಣ್ಣಗಳ ಕಾರಣದಿಂದ ಮಾಲಿನ್ಯಗಳು ಹೆಚ್ಚಾಗುತ್ತಿವೆ, ಈ ಕಾರಣದಿಂದ ನೈಸರ್ಗಿಕ ಬಣ್ಣಗಳ ಬಳಕೆ ಅಗತ್ಯವಿದೆ ಎಂದರು.

ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಮಾತನಾಡಿದರು

ಕದಿಕೆ ಟ್ರಸ್ಟ್‌ನ ಅಧ್ಯಕ್ಷೆ ಮಮತಾ ರೈ ಮಾತನಾಡಿ, ನೈಸರ್ಗಿಕ ಬಣ್ಣಗಳಿಂದ ಕೂಡಿದ ಸೀರೆಗಳು ಪರಿಸರ ಸ್ನೇಹಿಯಾಗಿದ್ದು, ನೇಕಾರರಿಕೆ ಹಾಗೂ ನೇಕಾರರಿಗೂ ಗೌರವ ಸಿಗುವ ಕೆಲಸ ಆಗಬೇಕಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಸೆಲ್ಕೊ ಇಂಡಿಯಾದ ಡಿಜಿಎಂ ಗುರುಪ್ರಕಾಶ್ ಶೆಟ್ಟಿ ,ಶಿರ್ವಾದ ಇಕೋ ಗ್ರೋಫಾರ್ಮ್‌ನ ಎಂ ಆರ್‌ ಪೈ, ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಉಪಸ್ಥಿತರಿದ್ದರು. ಕದಿಕೆ ಟ್ರಸ್ಟ್‌ ನ ಬಿ ಸಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಬಣ್ಣ ಹಾಗೂ ನೈಸರ್ಗಿಕ ಬಣ್ಣದ ಮೂಲವಸ್ತುಗಳು

2018 ರಲ್ಲಿ ಉಡುಪಿ ಸೀರೆ ಚರಿತ್ರೆಯಲ್ಲೇ ಮೊದಲ ಬಾರಿ ಸಹಜ ಬಣ್ಣದ ಸೀರೆಗಳನ್ನು ತಾಳಿಪಾಡಿ ಸಂಘದಲ್ಲಿ ಚರಕ ಸಂಸ್ಥೆಯ ನೆರವಿನೊಂದಿಗೆ ಕದಿಕೆ ಟ್ರಸ್ಟ್ ಸಹಯೋಗದಲ್ಲಿ ತಯಾರಿಸಲಾಗಿತ್ತು. ಈಗ ಸೆಲ್ಕೋ ಇಂಡಿಯಾ ಗ್ರಾಂಟ್ ನಿಂದ ದೊರಕಿದ ಸಹಜ ಬಣ್ಣ ತಯಾರಿಯ ಉಪಕರಣಗಳಿಂದ , ಮಾಮಿ ಸ್ಕೂಲ್ ಹೌಸ್ ಆಫ್ ನ್ಯಾಚುರಲ್ ಡಯಿಂಗ್ ಕೆನಡಾ ಇವರು ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಗೆ ಕೊಡಮಾಡಿದ ಆನ್ಲೈನ್ ಸ್ಕಾಲರ್ಸ್ ಶಿಪ್ ಮಾರ್ಗದರ್ಶನದಲ್ಲಿ ಸಹಜ ಬಣ್ಣ ಸೀರೆಗಳನ್ನು ತಾಳಿಪಾಡಿ ಸಂಘದ ಬಣ್ಣಗಾರರು ಮತ್ತು ನೇಕಾರರು ತಯಾರಿಸಿದ್ದಾರೆ.

Advertisement

ಅಡಿಕೆ ಚೊಗರು , ಮಂಜಿಷ್ಟ , ನೀಲಿ, ಗೊಂಡೇಹೂ , ದಾಳಿಂಬೆ ಸಿಪ್ಪೆ, ಕಾಡು ಬಾದಾಮಿ ಇತ್ಯಾದಿ ಸಸ್ಯ ಮೂಲ ಬಣ್ಣಗಳನ್ನು ಇದಕ್ಕೆ ಬಳಸಲಾಗಿದೆ. ಸಹಜ ಬಣ್ಣದ ಸೀರೆಗಳು ಪರಿಸರ ಸ್ನೇಹಿಯಾಗಿವೆ. ಉತ್ತಮ ಬೇಡಿಕೆ ಇದೆ. ನೇಕಾರರು ಮತ್ತು ಬಣ್ಣ ಮಾಡುವರಿಗೆ ಹೆಚ್ಚುವರಿ ವೇತನ ದೊರೆಯುತ್ತದೆ. ತಯಾರಿಸುವವರು ಮತ್ತು ತೊಡುವವರ ಆರೋಗ್ಯಕ್ಕೂ ಒಳ್ಳೆಯದಾಗಿದೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿಯಲ್ಲಿ ಯುವ ರೈತನ ಸಾಧನೆ : 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ
May 18, 2024
12:18 PM
by: The Rural Mirror ಸುದ್ದಿಜಾಲ
ನೀವು ನಿರಂತರವಾಗಿ ಹೆಡ್‌ಫೋನ್ ಬಳಸುತ್ತಿದ್ದರೆ ಜಾಗರೂಕರಾಗಿರಿ..! | ಕಿವಿಯ ಮೇಲೆ ಪರಿಣಾಮಗಳು…..
May 17, 2024
4:19 PM
by: The Rural Mirror ಸುದ್ದಿಜಾಲ
ಸೆಗಣಿಯಲ್ಲಡಗಿದೆ ಬೆಳೆಗೆ ಅವಶ್ಯಕ ಪೋಷಕಾಂಶಗಳು | ನೈಸರ್ಗಿಕ ಕೃಷಿಯಲ್ಲಿ ದೇಸೀ ಗೋವಿನ ಮಹತ್ವ ಬಹಳ ಮುಖ್ಯ |
May 17, 2024
3:31 PM
by: The Rural Mirror ಸುದ್ದಿಜಾಲ
ಗದಗ ಜಿಮ್ಸ್ ಆಸ್ಪತ್ರೆಗೆ ತಟ್ಟಿದ ಬರದ ಬಿಸಿ | ನೀರಿಲ್ಲದೆ ರೋಗಿಗಳ ಪರದಾಟ | ದಾರಿಕಾಣದಾದ ಸಿಬ್ಬಂದಿಗಳು
May 17, 2024
2:55 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror