ಹಳದಿ ಎಲೆರೋಗ ಪರಿಹಾರ ಕೊಡಿಸುವ ಜವಾಬ್ದಾರಿ ಅಧ್ಯಯನ ಸಮಿತಿ ವಹಿಸುವಂತೆ ಕ್ಯಾಂಪ್ಕೊ ಒತ್ತಾಯ |

November 5, 2022
7:29 PM

ಕ್ಯಾಂಪ್ಕೋ ಹಾಗೂ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ನೇತೃತ್ವದಲ್ಲಿ ಮಂಗಳೂರಿನ  ಓಶನ್‌ ಪರ್ಲ್‌ ನಲ್ಲಿ ಶುಕ್ರವಾರ ನಡೆದ ಅಡಿಕೆಯ  ಹಳದಿ ಎಲೆರೋಗ ಮತ್ತು ಎಲೆಚುಕ್ಕಿ ರೋಗದ ಬಗ್ಗೆ ಒಂದು ದಿನದ ವಿಚಾರ ಸಂಕಿರಣ ನಡೆಯಿತು.

Advertisement
Advertisement

ವಿಚಾರ ಸಂಕಿರಣದ  ಸಮಾರೋಪದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್‌  ಕೊಡ್ಗಿ ಮಾತನಾಡಿ, ರೋಗಕ್ಕೆ ಶೀಘ್ರ ಔಷಧಿ ಕಂಡು ಹಿಡಿದು ರೋಗದಿಂದ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಕೊಡಿಸುವ ಜವಾಬ್ದಾರಿಯನ್ನು ಕೇಂದ್ರದಿಂದ ನೇಮಿಸಲ್ಪಟ್ಟ ಅಧ್ಯಯನ ಸಮಿತಿ ವಹಿಸಬೇಕು ಎಂದು ಒತ್ತಾಯಿಸಿದರು.

Advertisement

ಕ್ಯಾಂಪ್ಕೊ ಈಗಾಗಲೇ ಅಡಿಕೆ ಆಮದಿಗೆ ಕನಿಷ್ಠ ಆಮದು ಬೆಲೆಯನ್ನು ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಆ ಮನವಿಗೆ ಸಕರಾತ್ಮಕವಾಗಿ ಶಿಫಾರಸ್ಸು ಮಾಡುವಂತೆ ಡಾ.ಹೋಮಿಚೆರಿಯನ್ ಅವರಲ್ಲಿ ಮನವಿ ಮಾಡಿದರು. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಅಡಿಕೆ ರೋಗದ ಬಗ್ಗೆಅಧ್ಯಯನ ನಡೆಸಲು ಸಮತಿ ರಚನೆ ಮಾಡಿದೆ. ಕೇಂದ್ರದಿಂದ ರಚಿಸಲ್ಪಟ್ಟ ಅಧ್ಯಯನ ಸಮಿತಿಯ ಸದಸ್ಯರು ಮತ್ತು ಅಡಿಕೆ ಮತ್ತು ಸಾಂಬಾರ ಮಂಡಳಿ  ನಿರ್ದೇಶಕರಾದ ಡಾ.ಹೋಮಿಚೆರಿಯನ್ ಅವರು ವಿಜ್ಞಾನಿಗಳ ಮುಂದಾಳುತ್ವ ವಹಿಸಿದ್ದರು. ಕೃಷಿವಿಶ್ವವಿದ್ಯಾಲಯ, ನವಿಲೆಯ ವಿಜ್ಞಾನಿಗಳು ,ಕೃಷಿತಜ್ಞರು ಮತ್ತು ರೋಗಪೀಡಿತ ಪ್ರದೇಶದ ರೈತರ ವಿಚಾರ ಸಂಕಿರಣ ನಡೆಯಿತು.

ಕಾರ್ಯಕ್ರಮದಲ್ಲಿ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣ ಕುಮಾರ್‌ ಪ್ರಾಸ್ತಾವಿಕವಾಗಿ ಮಾಡಿನಾಡಿ ರೈತರ ಕಷ್ಟ ಮತ್ತು ಸಂಶೋಧನೆಯ ಅಗತ್ಯತೆಯ ಬಗ್ಗೆ ವಿವರಿಸಿದರು. ಬಳಿಕ  ವಿಜ್ಞಾನಿಗಳಾದ ಡಾ.ವಿನಾಯಕಹೆಗಡೆ, ಡಾ.ಇಂದ್ರಾಣಿಕರುಣಸಾಗರ್, ಡಾ.ಕೇಶವ ಭಟ್‌ ಮತ್ತು ಪ್ರೊಫೆಸರ್‌ ಗಂಗಾಧರ ನಾಯಕ್‌  ಹಳದಿರೋಗದ ಇತಿಹಾಸ, ಗುಣಲಕ್ಷಣಗಳು, ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳು ಮತ್ತು ಔಷಧ ಸಂಶೋಧನೆಯ ಪ್ರಗತಿಯ ಬಗ್ಗೆ ವಿಚಾರ ಮಂಡನೆ ಮಾಡಿದರು.

Advertisement

ಖಾಸಗಿ ಸಂಶೋಧನ ಸಂಸ್ಥೆ ಐಸಿರಿಯ ಡಾ.ನಂದಿನ ಘಂಟೆ  ವಿಚಾರ ಮಂಡನೆ ಮಾಡಿದರು. ರೈತರು ತಮ್ಮತಮ್ಮ ಅನುಭವ ಮತ್ತು ಸರಕಾರ ಹಾಗೂ ಸಹಕಾರಿ ಸಂಸ್ಥೆಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ವಿಜ್ಞಾನಿಗಳು ಸಂಶೋಧನೆ ನಡೆಸುವಾಗ ಸಂಕಷ್ಟಕ್ಕೆ ಒಳಗಾದ ರೈತರು ಮತ್ತು ಕೃಷಿ ತಜ್ಞರ ಅನುಭವ ಮತ್ತು ಮಾರ್ಗದರ್ಶನದ ಆಧಾರದಲ್ಲಿ ರೋಗ ಪರಿಹಾರದ ಸಂಶೋಧನೆ ನಡೆಸುವಂತೆ ಸಲಹೆ ನೀಡಿದರು. ಡಾ.ಹೋಮಿಚೆರಿಯನ್‌  ಮಾತನಾಡಿ ಸಂಶೋಧನೆಗೆ ಹೆಚ್ಚಿನ ಪ್ರಮಾಣದ ಹಣಕಾಸಿನ ಅವಶ್ಯಕತೆ ಇದೆ. ವಿಜ್ಞಾನಿಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಪರಿಹಾರ ಕಂಡುಕೊಳ್ಳಲು ಸಾಧ್ಯ ಇದೆ ಎಂದು  ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಯಾಂಪ್ಕೊದ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣ ಕುಮಾರ್‌ ,  ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು.

Advertisement

ಮಾಜಿ ಅಧ್ಯಕ್ಷರುಗಳಾದ ಕೊಂಕೊಡಿ ಪದ್ಮನಾಭ,  ,ನಾಗರಾಜ ಶೆಟ್ಟಿ, , ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕರಾದ ಎಸ್‌ ಆರ್‌ ಸತೀಶ್ಚಂದ್ರ, ರಾಜ್ಯ ಅಡಿಕೆ ಮಹಾಮಂಡಲದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ಮ್ಯಾಮ್ಕೊಸ್ ಉಪಾಧ್ಯಕ್ಷ ಮಹೇಶ್, ತುಮಕೋಸ್ ಅಧ್ಯಕ್ಷ ಆರ್‌ ಎಂ ರವಿ, ಸಿರಸಿಯ ಟಿಎಸ್ಎಸ್ ಪ್ರತಿನಿಧಿ,  ಕ್ಯಾಂಪ್ಕೊದ ಮಾಜಿ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ಮತ್ತು ಮಾಜಿ ನಿರ್ದೇಶಕರು ಭಾಗವಹಿಸಿದ್ದರು.

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |
April 25, 2024
3:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror