Advertisement
MIRROR FOCUS

Arecanut | ಅಡಿಕೆಯಿಂದ ತಯಾರಾಗುತ್ತಿದೆ ಎನರ್ಜಿ ಡ್ರಿಂಕ್…!‌ |

Share

ವಿಶ್ವದಲ್ಲಿ ಅಡಿಕೆ ಹೆಚ್ಚು ಬೆಳೆಯುವ ದೇಶ ಭಾರತ. ಹಾಗಿದ್ದರೂ ಇಂದಿಗೂ ಅಡಿಕೆ ಹಾನಿಕಾರಕ ಎಂಬ ಹಣೆಪಟ್ಟಿಯಿಂದ ಹೊರಬಂದಿಲ್ಲ. ಸರ್ಕಾರ, ಇಲಾಖೆ, ಅಧಿಕಾರಿಗಳ ನಡುವೆ ತಾಕಲಾಟ ನಡೆಯುತ್ತಲೇ ಇದೆ. ಆದರೆ ಪುಟ್ಟ ದೇಶ ವಿಯೆಟ್ನಾಂನಲ್ಲಿ ಅಡಿಕೆಯಿಂದ ಎನರ್ಜಿ ಡ್ರಿಂಕ್‌ ತಯಾರಾಗಿ ಮಾರಾಟವಾಗುತ್ತಿದೆ . ಒಂದಲ್ಲ ಮೂರು ಬಗೆಯ ಎನರ್ಜಿ ಡ್ರಿಂಕ್‌ ಅಡಿಕೆಯಿಂದಲೇ ತಯಾರಾಗುತ್ತಿದೆ.

Advertisement
Advertisement
Advertisement
Advertisement

ವಿಯೆಟ್ನಾಂ ದೇಶದಲ್ಲಿ ವಿವಿಧ ಬಗೆಯ ಕೃಷಿ ಉತ್ಪನ್ನಗಳು ತಯಾರಾಗುತ್ತಿದೆ. ಅದರಲ್ಲಿ ಅಡಿಕೆಯ ಎನರ್ಜಿ ಡ್ರಿಂಕ್‌ ಕೂಡಾ ಒಂದು. ಎಳೆ ಅಡಿಕೆಯಿಂದ ಈ ಡ್ರಿಂಕ್‌ ತಯಾರು ಮಾಡಲಾಗುತ್ತಿದೆ. 250 ಎಂಎಲ್‌ ನ ಬಾಟಲಿಯಲ್ಲಿ ವಿಯೆಟ್ನಾಂನಲ್ಲಿ ಈ ಡ್ರಿಂಕ್‌ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. 24 ತಿಂಗಳು ಬಾಳ್ವಿಕೆಯನ್ನು ಈ ಡ್ರಿಂಕ್‌ ಹೊಂದಿದೆ.ಕಳೆದ ಒಂದರಡು ವರ್ಷಗಳಿಂದ ಈ ಡ್ರಿಂಕ್‌ ವಿಯೆಟ್ನಾಂ ಮಾರುಕಟ್ಟೆಯಲ್ಲಿ ಹಾಗೂ ಇತರೆಡೆಗೂ ಸರಬರಾಜಾಗುತ್ತಿದೆ.

Advertisement

ಅಡಿಕೆ ವಿಶ್ವದೆಲ್ಲೆಡೆ ಬಳಕೆಯಲ್ಲಿದ್ದರೂ ಅಡಿಕೆ ತಿನ್ನುವುದು  ಹಾನಿಕಾರಕ ಎಂಬ ಅಪವಾದಗಳು ಕೇಳುತ್ತಲೇ ಇದೆ. ಈಚೆಗೆ ಚೀನಾದಲ್ಲಿ ಯುವ ಗಾಯಕನೊಬ್ಬ ಕ್ಯಾನ್ಸರ್‌ ನಿಂದ ನಿಧನರಾದ ಬಳಿಕ ಅಡಿಕೆ ಹಾನಿಕಾರಕ ಎಂದು ವ್ಯಾಪಕವಾಗಿ ಹಬ್ಬಿತು.

ಆದರೆ ಅಡಿಕೆಯ ಬಳಕೆ ವಿವಿಧ ರೂಪದಲ್ಲಿದೆ. ಅಡಿಕೆಯ ಎನರ್ಜಿ ಡ್ರಿಂಕ್‌ ಈಗ ಹೆಚ್ಚು ಗಮನ ಸೆಳೆದಿದೆ. ಅದಕ್ಕೂ ಮೊದಲು ರಾಜ್ಯದಲ್ಲಿ ನಿವೇದನ್‌  ಎಂಬವರು ಅಡಿಕೆ ಚಹಾ ತಯಾರಿಸಿ ದೇಶ ವಿದೇಶದ ಗಮನ ಸೆಳೆದಿದ್ದರು. ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಭಾರತದಲ್ಲಿ ಕೂಡಾ ಅತೀ ಅಗತ್ಯವಾಗಿ ಅಧ್ಯಯನಗಳು ನಡೆಯಬೇಕಾಗಿದೆ.

Advertisement
ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಇಂದು ಗಮನಹರಿಸಬೇಕಾದ ಅಗತ್ಯ ಇದೆ. ಅಡಿಕೆಯಿಂದ ಸಾಕಷ್ಟು ಬಗೆಯ ಉತ್ಪನ್ನಗಳನ್ನು ತಯಾರು ಮಾಡಲು ಸಾಧ್ಯವಿದೆ. ಇದಕ್ಕಾಗಿ ಎಲ್ಲರೂ ಒಂದಾಗಿ ಗಮನಹರಿಸಬೇಕಾದ ಅಗತ್ಯ ಇದೆ. ಅಡಿಕೆ ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ ಕೂಡಾ.
ಶ್ರೀ ಪಡ್ರೆ, ಸಂಪಾದಕರು,ಅಡಿಕೆ ಪತ್ರಿಕೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 27-02-2025 | ಮಳೆಯ ಸಾಧ್ಯತೆ ಕ್ಷೀಣ | ಒಣ ಹವೆ ಮುಂದುವರಿಕೆ | ಕೆಲವು ಕಡೆ ತುಂತುರು ಮಳೆ ನಿರೀಕ್ಷೆ |

ತಾಪಮಾನ ಅಧಿಕವಾಗಿದ್ದರೂ, ರಾತ್ರಿಯ ವೇಳೆ ತಂಪು ವಾತಾವರಣ ಇರುವುದರಿಂದ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.

8 hours ago

ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ | ಅಹೋ ರಾತ್ರಿ ಶಿವ ಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣೆಗೆ ಚಾಲನೆ

ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ…

19 hours ago

ಈಶಾ ಫೌಂಡೇಷನ್ ನಿಂದ ಶಿವರಾತ್ರಿ | ಆತ್ಮ ಜಾಗೃತಿಯ ರಾತ್ರಿ, ಆತ್ಮಕ್ಕೆ ಮೂಲ ಆಧಾರ

ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಷನ್ ಆದಿ ಯೋಗಿ ಪ್ರತಿಮೆಯ ಬಳಿ ಹಮ್ಮಿಕೊಂಡಿದ್ದ ಶಿವರಾತ್ರಿ…

19 hours ago

ಶಿವರಾತ್ರಿ | ನೇಪಾಳದ ಪಶುಪತಿನಾಥನಿಗೆ ವಿಶೇಷ ಪೂಜೆ- ಲಕ್ಷಾಂತರ ಭಕ್ತಾದಿಗಳಿಂದ ದರ್ಶನ

ಮಹಾಶಿವರಾತ್ರಿಯ ಹಿನ್ನಲೆಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ಮಂದಿರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ…

20 hours ago

ಮಹಾಕುಂಭದಿಂದ ನಿರ್ಗಮಿಸಲು ವಿಶೇಷ ರೈಲು ಸಂಚಾರ | ಪ್ರಯಾಗ್‌ರಾಜ್‌ನಿಂದ 350 ಕ್ಕೂ ಹೆಚ್ಚು ರೈಲು ಓಡಾಟ

ರೈಲ್ವೆ ಇಲಾಖೆ ಪ್ರಯಾಗ್‌ರಾಜ್‌ನಿಂದ 350 ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

20 hours ago

ಈ ವರ್ಷ ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಡಿಕೆ ಆಮದು..?

ಮ್ಯಾನ್ಮಾರ್‌ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ…

20 hours ago