Advertisement
MIRROR FOCUS

Arecanut | ಅಡಿಕೆಯಿಂದ ತಯಾರಾಗುತ್ತಿದೆ ಎನರ್ಜಿ ಡ್ರಿಂಕ್…!‌ |

Share

ವಿಶ್ವದಲ್ಲಿ ಅಡಿಕೆ ಹೆಚ್ಚು ಬೆಳೆಯುವ ದೇಶ ಭಾರತ. ಹಾಗಿದ್ದರೂ ಇಂದಿಗೂ ಅಡಿಕೆ ಹಾನಿಕಾರಕ ಎಂಬ ಹಣೆಪಟ್ಟಿಯಿಂದ ಹೊರಬಂದಿಲ್ಲ. ಸರ್ಕಾರ, ಇಲಾಖೆ, ಅಧಿಕಾರಿಗಳ ನಡುವೆ ತಾಕಲಾಟ ನಡೆಯುತ್ತಲೇ ಇದೆ. ಆದರೆ ಪುಟ್ಟ ದೇಶ ವಿಯೆಟ್ನಾಂನಲ್ಲಿ ಅಡಿಕೆಯಿಂದ ಎನರ್ಜಿ ಡ್ರಿಂಕ್‌ ತಯಾರಾಗಿ ಮಾರಾಟವಾಗುತ್ತಿದೆ . ಒಂದಲ್ಲ ಮೂರು ಬಗೆಯ ಎನರ್ಜಿ ಡ್ರಿಂಕ್‌ ಅಡಿಕೆಯಿಂದಲೇ ತಯಾರಾಗುತ್ತಿದೆ.

ವಿಯೆಟ್ನಾಂ ದೇಶದಲ್ಲಿ ವಿವಿಧ ಬಗೆಯ ಕೃಷಿ ಉತ್ಪನ್ನಗಳು ತಯಾರಾಗುತ್ತಿದೆ. ಅದರಲ್ಲಿ ಅಡಿಕೆಯ ಎನರ್ಜಿ ಡ್ರಿಂಕ್‌ ಕೂಡಾ ಒಂದು. ಎಳೆ ಅಡಿಕೆಯಿಂದ ಈ ಡ್ರಿಂಕ್‌ ತಯಾರು ಮಾಡಲಾಗುತ್ತಿದೆ. 250 ಎಂಎಲ್‌ ನ ಬಾಟಲಿಯಲ್ಲಿ ವಿಯೆಟ್ನಾಂನಲ್ಲಿ ಈ ಡ್ರಿಂಕ್‌ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. 24 ತಿಂಗಳು ಬಾಳ್ವಿಕೆಯನ್ನು ಈ ಡ್ರಿಂಕ್‌ ಹೊಂದಿದೆ.ಕಳೆದ ಒಂದರಡು ವರ್ಷಗಳಿಂದ ಈ ಡ್ರಿಂಕ್‌ ವಿಯೆಟ್ನಾಂ ಮಾರುಕಟ್ಟೆಯಲ್ಲಿ ಹಾಗೂ ಇತರೆಡೆಗೂ ಸರಬರಾಜಾಗುತ್ತಿದೆ.

ಅಡಿಕೆ ವಿಶ್ವದೆಲ್ಲೆಡೆ ಬಳಕೆಯಲ್ಲಿದ್ದರೂ ಅಡಿಕೆ ತಿನ್ನುವುದು  ಹಾನಿಕಾರಕ ಎಂಬ ಅಪವಾದಗಳು ಕೇಳುತ್ತಲೇ ಇದೆ. ಈಚೆಗೆ ಚೀನಾದಲ್ಲಿ ಯುವ ಗಾಯಕನೊಬ್ಬ ಕ್ಯಾನ್ಸರ್‌ ನಿಂದ ನಿಧನರಾದ ಬಳಿಕ ಅಡಿಕೆ ಹಾನಿಕಾರಕ ಎಂದು ವ್ಯಾಪಕವಾಗಿ ಹಬ್ಬಿತು.

ಆದರೆ ಅಡಿಕೆಯ ಬಳಕೆ ವಿವಿಧ ರೂಪದಲ್ಲಿದೆ. ಅಡಿಕೆಯ ಎನರ್ಜಿ ಡ್ರಿಂಕ್‌ ಈಗ ಹೆಚ್ಚು ಗಮನ ಸೆಳೆದಿದೆ. ಅದಕ್ಕೂ ಮೊದಲು ರಾಜ್ಯದಲ್ಲಿ ನಿವೇದನ್‌  ಎಂಬವರು ಅಡಿಕೆ ಚಹಾ ತಯಾರಿಸಿ ದೇಶ ವಿದೇಶದ ಗಮನ ಸೆಳೆದಿದ್ದರು. ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಭಾರತದಲ್ಲಿ ಕೂಡಾ ಅತೀ ಅಗತ್ಯವಾಗಿ ಅಧ್ಯಯನಗಳು ನಡೆಯಬೇಕಾಗಿದೆ.

ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಇಂದು ಗಮನಹರಿಸಬೇಕಾದ ಅಗತ್ಯ ಇದೆ. ಅಡಿಕೆಯಿಂದ ಸಾಕಷ್ಟು ಬಗೆಯ ಉತ್ಪನ್ನಗಳನ್ನು ತಯಾರು ಮಾಡಲು ಸಾಧ್ಯವಿದೆ. ಇದಕ್ಕಾಗಿ ಎಲ್ಲರೂ ಒಂದಾಗಿ ಗಮನಹರಿಸಬೇಕಾದ ಅಗತ್ಯ ಇದೆ. ಅಡಿಕೆ ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ ಕೂಡಾ.
ಶ್ರೀ ಪಡ್ರೆ, ಸಂಪಾದಕರು,ಅಡಿಕೆ ಪತ್ರಿಕೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

2 hours ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

3 hours ago

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

10 hours ago

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

18 hours ago

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

19 hours ago

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

1 day ago