ಅಡಿಕೆ ಬೆಳೆಗಾರರಿಗೆ ಅಡಿಕೆ ಕೊಯ್ಲು ಪ್ರಮುಖವಾದ ಘಟ್ಟ. ನುರಿತ ಕಾರ್ಮಿಕರು ಈ ಕಾರ್ಯಕ್ಕೆ ಅಗತ್ಯ. ಈಚೆಗೆ ನುರಿತ ಕಾರ್ಮಿಕರ ಕೊರತೆ ಇರುವುದು ನಿಜ. ಇದೇ ವೇಳೆ ಅಡಿಕೆ ಕೊಯ್ಲಿನ ತಾಂತ್ರಿಕ ಕೌಶಲ್ಯ ಅಡಿಕೆ ಬೆಳೆಗಾರರಿಗೂ ಅಗತ್ಯವಿದೆ. ಅಂತಹ ತಾಂತ್ರಿಕ ಮಾಹಿತಿಗಳಲ್ಲಿ ಅಡಿಕೆ ಗೊನೆಯ ಮೂಗೂ ಒಂದು. ಅದರ ವಿವರ ಇಲ್ಲಿದೆ…
ಈಚೆಗೆ ವಿಟ್ಲದ ಸಿಪಿಸಿಆರ್ ಐ ವಠಾರದಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ ಹಾಗೂ ಸಿಪಿಸಿಆರ್ಐ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದೊಂದಿಗೆ ಅಡಿಕೆ ಕೌಶಲ್ಯ ಪಡೆಯ ಅಡಿಕೆ ಕೊಯ್ಲು ತರಬೇತಿ ಶಿಬಿರ ನಡೆಯಿತು. ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಅದರಲ್ಲಿ ವಿಶೇಷವಾಗಿ ಅಡಿಕೆ ಕೊಯಿಲು ವೇಳೆ ಪ್ರಮುಖವಾಗಿ ಗಮನಿಸಬೇಕಾದ ಅಡಿಕೆ ಗೊನೆಯ ಮೂಗಿನ ಬಗ್ಗೆ ತರಬೇತುದಾರ ಆರ್ ಜಿ ಹೆಗಡೆ (ರಾಮಚಂದ್ರ ಹೆಗಡೆ) ಅವರು ಅಡಿಕೆ ಗೊನೆಯ ಮೂಗಿನ ಬಗ್ಗೆ ಹಾಗೂ ಕೊಯ್ಲು ಸುಲಭದ ಬಗ್ಗೆ ಮಾಹಿತಿ ನೀಡಿದರು.
ಅಡಿಕೆ ಗೊನೆಗೆ ಮೂಗು ಎಂಬುದಿದೆ. ಈಗಾಗಲೇ ಅಡಿಕೆ ಕೊಯಿಲು ಮಾಡುವ ಮಂದಿಗೆ ಈ ಬಗ್ಗೆ ಯಾವುದೇ ಮಾಹಿತಿ ಅಗತ್ಯವಿಲ್ಲ. ಆದರೆ ಹೊಸದಾಗಿ ಕಲಿಯುವ ಹಾಗೂ ಅಡಿಕೆ ಬೆಳೆಗೆ ಬಂದಿರುವ ಹೊಸದಾದ ಕೃಷಿಕರಿಗೆ ಈ ಮಾಹಿತಿಯ ಕೊರತೆ ಇದೆ. ಅಡಿಕೆ ಗೊನೆಯ ಮೂಗಿಗೆ ದೋಟಿಯನ್ನು ಅಥವಾ ಕೊಕ್ಕೆಯನ್ನು ಹಾಕಿದರೆ ಅಡಿಕೆ ಕೊಯ್ಲು ಸುಲಭವಾಗುತ್ತದೆ ಹಾಗೂ ಕತ್ತಿಯನ್ನು ಕೂಡಾ ಅಡಿಕೆ ಗೊನೆಯ ನಡುವೆ ದಾಟಿಸಲೂ ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು.
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಮಂಗಳೂರಿನ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…
ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…
ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…
ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…
ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್ನಲ್ಲಿ…