ಅಡಿಕೆ ಸಂಸ್ಕರಣೆಯ ನಂತರ ಉಳಿಯುವ ಅಡಿಕೆ ಸಿಪ್ಪೆ (Arecanut husk) ಇದುವರೆಗೆ ಬಹುತೇಕ ಕೃಷಿ ತ್ಯಾಜ್ಯವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇತ್ತೀಚಿನ ಸಂಶೋಧನೆಗಳು ಹಾಗೂ ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ, ಈ ತ್ಯಾಜ್ಯವೇ ಇದೀಗ ಜೈವಿಕ ಉತ್ಪನ್ನಗಳು, ಪರಿಸರ ಸ್ನೇಹಿ ವಸ್ತುಗಳು ಹಾಗೂ ಜೈವಿಕ ಇಂಧನಗಳ ತಯಾರಿಕೆಗೆ ಪ್ರಮುಖ ಕಚ್ಚಾ ವಸ್ತುವಾಗಿ ಹೊರಹೊಮ್ಮುತ್ತಿದೆ.
ಅಡಿಕೆ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದ ಸೆಲ್ಯುಲೋಸ್, ಹೆಮಿಸೆಲ್ಯುಲೋಸ್ ಹಾಗೂ ಜೈವಿಕ ಸಕ್ರಿಯ ರಾಸಾಯನಿಕಗಳು ಅಡಕವಾಗಿದ್ದು, ಕಾಗದ, ಬಟ್ಟೆ, ಔಷಧಿ, ಸೌಂದರ್ಯ ಉತ್ಪನ್ನ ಹಾಗೂ ಪೌಷ್ಟಿಕ ಆಹಾರ ಉದ್ಯಮಗಳಿಗೆ ಉಪಯುಕ್ತವಾಗಿವೆ. ಇದರೊಂದಿಗೆ, ಅಡಿಕೆ ಸಿಪ್ಪೆಯಿಂದ ಪರಿಸರ ಸ್ನೇಹಿ ಬಟ್ಟೆಗಳು, ಬಯೋಚಾರ್, ಆಕ್ಟಿವೇಟೆಡ್ ಕಾರ್ಬನ್ ಹಾಗೂ ಜೈವಿಕವಾಗಿ ಕರಗುವ ಕಾಂಪೋಸಿಟ್ಗಳು ತಯಾರಿಸುವ ಸಾಧ್ಯತೆಯೂ ಇದೆ. ಇವು ಕಟ್ಟಡ ನಿರ್ಮಾಣ, ಕೃಷಿ ಹಾಗೂ ಪ್ಯಾಕೇಜಿಂಗ್ ಕ್ಷೇತ್ರಗಳಲ್ಲಿ ಸುಸ್ಥಿರ ಪರ್ಯಾಯಗಳಾಗಿ ಬಳಕೆಯಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಇದಲ್ಲದೆ, ಅಡಿಕೆ ಸಿಪ್ಪೆ ಬಯೋಗ್ಯಾಸ್, ಬಯೋಎಥನಾಲ್ ಹಾಗೂ ಇತರೆ ಜೈವಿಕ ಇಂಧನಗಳ ಉತ್ಪಾದನೆಗೆ ಸಹ ಉತ್ತಮ ಮೂಲವಾಗಿದ್ದು, ಪರಂಪರಾಗತ ಇಂಧನಗಳ ಮೇಲೆ ಅವಲಂಬನೆ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ಕೃಷಿ ತ್ಯಾಜ್ಯವೆಂದು ನಿರ್ಲಕ್ಷಿಸಲ್ಪಡುತ್ತಿದ್ದ ಅಡಿಕೆ ಸಿಪ್ಪೆಯನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸುವುದು ರೈತರಿಗೆ ಹೆಚ್ಚುವರಿ ಆದಾಯದ ದಾರಿಯನ್ನು ತೆರೆದಿದ್ದು, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಆರ್ಥಿಕತೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ವರದಿ ಹೇಳಿದೆ.
ಅಡಿಕೆ ಬೆಳೆಗಾರರಿಗೆ ಇದುವರೆಗೆ ಸಿಪ್ಪೆ ತ್ಯಾಜ್ಯವೇ ಆಗಿತ್ತು. ಹಲವೆಡೆ ಸಿಪ್ಪೆಯನ್ನು ಸುಡಲಾಗುತ್ತಿತ್ತು ಅಥವಾ ತೋಟದಲ್ಲೇ ಬಿಟ್ಟುಕೊಡಲಾಗುತ್ತಿತ್ತು. ಆದರೆ ಸಂಶೋಧನೆ ಆಧಾರಿತ ಮೌಲ್ಯವರ್ಧನೆಯಿಂದ, ಈ ಸಿಪ್ಪೆಯೇ ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗುವ ಸಾಧ್ಯತೆ ಇದೆ.
ಗ್ರಾಮೀಣ ಮಟ್ಟದಲ್ಲಿ ಅಡಿಕೆ ಸಿಪ್ಪೆ ಸಂಗ್ರಹ, ಪ್ರಾಥಮಿಕ ಸಂಸ್ಕರಣೆ ಹಾಗೂ ಬಯೋಚಾರ–ಬಯೋಗ್ಯಾಸ್ ಘಟಕಗಳ ಸ್ಥಾಪನೆಯ ಮೂಲಕ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತದೆ. ಅಡಿಕೆ ಬೆಳೆಗಾರ ಸಂಘಗಳು , ಸಹಕಾರ ಸಂಸ್ಥೆಗಳು ಈ ನಿಟ್ಟಿನಲ್ಲಿ ಚಿಂತನೆಗಳನ್ನು ನಡೆಸಿದೆ , ರೈತರ ಆದಾಯ ದ್ವಿಗುಣಗೊಳಿಸುವ ಸಹಾಯವಾಗಲಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಅಡಿಕೆ ತೊಗಟೆಯಿಂದ ಪಡೆಯುವ ಸೆಲ್ಲುಲೋಸ್ ಬಳಸಿ ಬಯೋಡಿಗ್ರೇಡೆಯಬಲ್ ಪ್ಲಾಸ್ಟಿಕ್ ಅಭಿವೃದ್ಧಿಪಡಿಸಿರುವ ಸಂಶೋಧನೆ ಪ್ರಕಟವಾಗಿದೆ.…
ಮಂಗಳೂರಿನ ಸೇನಾ ನೇಮಕಾತಿ ಕಚೇರಿಯಿಂದ ಜನವರಿ 30ರಿಂದ ಫೆಬ್ರವರಿ 10ರವರೆಗೆ ಮೂಡಬಿದ್ರಿಯ ಸ್ವರಾಜ್…
ಪೆಟ್ರೋಲಿಯಂ ಸಂಸ್ಥೆಗಳ ಲೈಸೆನ್ಸ್ ನವೀಕರಣದ ಹೆಸರಿನಲ್ಲಿ ತಾನು ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಎಂದು…
ಸಂಸದ ಬ್ರಿಜೇಶ್ ಚೌಟ ವಿಶೇಷ ಮುತುವರ್ಜಿಯಿಂದ ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್…
ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಕೋಲಾರ ಜಿಲ್ಲೆಯಲ್ಲಿ, ಕೃಷಿ ಚಟುವಟಿಕೆಗಳ ಜತೆಗೆ ಕುರಿ…
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಋತುವಿನ ಬಿಳಿ ಜೋಳವನ್ನು ರೈತರಿಂದ ನೇರವಾಗಿ…