ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ ? | ಕೃಷಿಕರು ಏನು ಮಾಡಬೇಕು ? | ಪರಿಹಾರ ಹೇಗೆ ? | ಗುತ್ತಿಗಾರಿನಲ್ಲಿ ವಿವರಿಸಿದ್ದಾರೆ ವಿಜ್ಞಾನಿ ಡಾ.ಭವಿಷ್ಯ |

November 5, 2022
10:13 PM

ಅಡಿಕೆ ಎಲೆಚುಕ್ಕಿ ರೋಗ(Arecanut Leaf Spot) ಹಾಗೂ ರೋಗ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಕ್ರಮವು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಗುತ್ತಿಗಾರು ಸಹಕಾರಿ ಸಂಘದ  ದೀನ್‌ ದಯಾಳ್‌ ರೈತ ಸಭಾಭವನದಲ್ಲಿ ನಡೆಯಿತು. ನೂರಾರು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಿಪಿಸಿಐಆರ್‌ ವಿಜ್ಞಾನಿ ಡಾ.ಭವಿಷ್ಯ ಅವರು ಸಮಗ್ರ ಮಾಹಿತಿ ನೀಡಿದರು. ಅವರು ಮಾತನಾಡಿರುವ ಸಂಪೂರ್ಣ ಆಡಿಯೋ ಇಲ್ಲಿದೆ……

ಎಲೆ ಚುಕ್ಕಿ ರೋಗದಲ್ಲಿ ಚುಕ್ಕಿ ಮಾತ್ರಾ ಆದರೆ ಸಮಸ್ಯೆ ಇಲ್ಲ, ಆದರೆ ಚುಕ್ಕಿ ಬೆಸೆದುಕೊಂಡರೆ ಸಮಸ್ಯೆಯಾಗುತ್ತದೆ ಎಂದು ಮಾಹಿತಿ ವಿವರಿಸಿದ ಡಾ.ಭವಿಷ್ಯ ಅವರು ರಾಜ್ಯದ 5 ಜಿಲ್ಲೆಗಳಲ್ಲಿ ಸದ್ಯ ಎಲೆಚುಕ್ಕಿ ರೋಗ ಹರಡಿಕೊಂಡಿದೆ. ಅದರಲ್ಲಿ ದ ಕ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಸದ್ಯ ಇದೆ. ಶೃಂಗೇರಿ ಭಾಗದಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗಕ್ಕೂ ಸುಳ್ಯದಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗ ಒಂದೇ ಆದರೂ ಪ್ರಭಾವದಲ್ಲಿ ವ್ಯತ್ಯಾಸ ಇದೆ. ಎಲೆಚುಕ್ಕಿ ರೋಗಕ್ಕೆ ಕಾರಣವಾಗುವ ಶಿಲೀಂದ್ರಕ್ಕೆ ಪೂರಕ ವಾತಾವರಣ ಬಂದಾಗ ಹರಡಿಕೊಳ್ಳುತ್ತದೆ. ಹೀಗಾಗಿ ಹವಾಮಾನವೂ ಒಂದು ಪ್ರಮುಖ ಕಾರಣವಾಗುತ್ತದೆ ಎಂದರು.

 

ಸಾಮಾನ್ಯವಾಗಿ 18-24 ಡಿಗ್ರಿಯ ವಾತಾವರಣದ ಉಷ್ಣತೆಯಲ್ಲಿ ಹೆಚ್ಚು ವಿಸ್ತರಣೆಯಾಗುವ ಈ ಶಿಲೀಂದ್ರವು ಮಳೆಗಾಲದಲ್ಲಿ ಹೆಚ್ಚು ವಿಸ್ತರಣೆಯಾಗುತ್ತದೆ. ಮಳೆ ಹಾಗೂ ಬಿಸಿಲು ಈ ಶಿಲೀಂದ್ರ ಅಭಿವೃದ್ಧಿಗೆ ಪೂರಕವಾಗಿದೆ.  ಎರಡು ವರ್ಷಗಳ ಹಿಂದೆಯೇ ಸುಳ್ಯದ ಕೆಲವು ಕಡೆ ಈ ರೋಗ ಕಂಡುಬಂದಿದ್ದರೂ ಈ ವರ್ಷ ವಿಪರೀತವಾಗಿದೆ.  ಇದಕ್ಕೆ ಸಾಮೂಹಿಕ ಮಟ್ಟದಲ್ಲಿ ರೋಗ ನಿರ್ವಹಣೆಯ ಅಗತ್ಯವಿದೆ ಎಂದರು.

ಇದರ ಜೊತೆಗೆ ಅಡಿಕೆ ಮರಗಳಿಗೆ ನೀಡುವ ಪೋಷಕಾಂಶಗಳ ನಿರ್ವಹಣೆಯೂ ಅಗತ್ಯ ಇದ್ದು, ಅಸಮತೋಲನ ಗೊಬ್ಬರ ಬಳಕೆಯೂ ಈ ರೋಗ ವಿಸ್ತರಣೆ ಹಾಗೂ ಹರಡುವುದಕ್ಕೆ ಕಾರಣವಾಗುತ್ತದೆ.ಹೀಗಾಗಿ ರೋಗ ನಿರ್ವಹಣೆಯ ಜೊತೆಗೆ ಲಘು ಪೋಷಕಾಂಶ ಸೂಕ್ತ ಬಳಕೆಯೂ ಅಗತ್ಯವಿದೆ ಎಂದರು. ಈ ರೋಗದಲ್ಲಿ ಔಷಧಿ ಸಿಂಪಡಣೆಯೇ ಪರಿಹಾರ ಅಲ್ಲ,‌ ಪೋಷಕಾಂಶಗಳ ಸೂಕ್ತ ಬಳಕೆಯೂ ಅಗತ್ಯವಿದೆ. ರೋಗದ ಗಂಭೀರತೆ ಗಮನಿಸಿ ಅದಕ್ಕೆ ಅನುಗುಣವಾಗಿ  ಔಷಧಿ ಸಿಂಪಡಣೆ ಅಗತ್ಯವಿದೆ. ಸೆಪ್ಟೆಂಬರ್ ಅವಧಿಗೆ ಔಷಧಿ ಸಿಂಪಡಣೆ ಮಾಡುವುದು ಉತ್ತಮ ಎಂದು ಮಾಹಿತಿ ನೀಡಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!
September 7, 2026
9:38 PM
by: ದ ರೂರಲ್ ಮಿರರ್.ಕಾಂ
ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?
September 5, 2026
10:11 PM
by: ದ ರೂರಲ್ ಮಿರರ್.ಕಾಂ
ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?
August 30, 2026
11:59 AM
by: ದ ರೂರಲ್ ಮಿರರ್.ಕಾಂ
ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ
August 23, 2026
2:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror