Advertisement
MIRROR FOCUS

ಅಡಿಕೆ ಮಾರುಕಟ್ಟೆ | ಚಾಲಿ ಅಡಿಕೆ ಧಾರಣೆ ಏರಿಕೆ | ಹೊಸ ಚಾಲಿ ಅಡಿಕೆ ಆರಂಭದ ದರ 380 ರೂಪಾಯಿ | ರಬ್ಬರ್‌ ಧಾರಣೆಯಲ್ಲೂ ಏರಿಕೆ |

Share

ಅಡಿಕೆ ಆಮದು ಚರ್ಚೆಯ ನಡುವೆಯೂ ಚಾಲಿ ಅಡಿಕೆ ಮಾರುಕಟ್ಟೆ ಧಾರಣೆ ಏರಿಕೆ ಕಂಡಿದೆ. ಭಾರತದ ಅಡಿಕೆ ಮಾರುಕಟ್ಟೆಯು ಆಮದು ಕಾರಣದಿಂದ ಧಾರಣೆಯಲ್ಲಿ ಸದ್ಯ ಯಾವುದೇ ಪರಿಣಾಮವಾಗದು ಎಂಬುದನ್ನು ಕ್ಯಾಂಪ್ಕೋ ಸಂಸ್ಥೆ ಧಾರಣೆ ಏರಿಕೆಯ ಮೂಲಕ ತಿಳಿಸಿದೆ. ಇದೇ ವೇಳೆ ಹೊಸ ಚಾಲಿ ಅಡಿಕೆ ಮಾರುಕಟ್ಟೆಗೆ ಬರಲು ಆರಂಭವಾಗಿದ್ದು ಅ.1 ರಿಂದ ಹೊಸ ಚಾಲಿ ಅಡಿಕೆ ಧಾರಣೆ ನಿಗದಿಯಾಗಿದೆ. ಆರಂಭದ ಧಾರಣೆ 380 ರೂಪಾಯಿ ನಿಗದಿಯಾಗಿದೆ. ಇದೇ ವೇಳೆ ರಬ್ಬರ್‌ ಧಾರಣೆಯಲ್ಲಿ ಸ್ವಲ್ಪ ಏರಿಕೆ ಕಂಡಿದೆ.

ಅಡಿಕೆ ಮಾರುಕಟ್ಟೆಯಲ್ಲಿ ಹೊಸದು – ಹಳೆಯದು ಕಾಲ ಆರಂಭವಾಗಿದೆ. ಪ್ರತೀ ವರ್ಷ ಚೌತಿಯ ಬಳಿಕ ಹೊಸ ಅಡಿಕೆ ಹಳೆಯದಾಗಿ ಈ ವರ್ಷದ ನೂತನ ಅಡಿಕೆ ಮಾರುಕಟ್ಟೆ ಪ್ರವೇಶವಾಗುತ್ತದೆ. ಸಂಪೂರ್ಣ ಒಣಗಿ ದಾಸ್ತಾನು ಇರಿಸಿರುವ ಚಾಲಿ ಅಡಿಕೆ ಸುಮಾರು 180 ದಿನಗಳ ಬಳಿಕ ಒಳಗಿನ ಬಣ್ಣ ಬದಲಾಗಿ ಅಂತಹ ಅಡಿಕೆ ಹಳೆ ಅಡಿಕೆ ಎಂದು ಪರಿಗಣನೆಯಾಗುತ್ತದೆ. ಅಂದರೆ ಸುಮಾರು ಗಣೇಶ ಚೌತಿಯ ಬಳಿಕ ಹಳೆ ಅಡಿಕೆ ಎನ್ನುವುದು ಹಿಂದಿನಿಂದಲೂ ವಾಡಿಕೆ. ವೈಜ್ಞಾನಿಕವಾಗಿಯೂ ಅಡಿಕೆಯೊಳಗಿನ ತೇವಾಂಶ  ಕಡಿಮೆಯಾಗುತ್ತಾ ಬಂದಂತೆ ಗುಣಮಟ್ಟವೂ ಏರಿಕೆಯಾಗುತ್ತದೆ. ಅಂತಹ ಅಡಿಕೆ ಹಳೆ ಅಡಿಕೆ ಎಂದು ಕರೆಯಲಾಗುತ್ತದೆ.  ಇದೀಗ ಅ.1 ರಿಂದ ಹೊಸ ಅಡಿಕೆ ಧಾರಣೆ ನಿಗದಿಯಾಗುವುದರ ಮೂಲಕ ಹೊಸ ಅಡಿಕೆ ಹಳೆಯ ಅಡಿಕೆಯಾಗಿ ಬದಲಾಗಿದೆ. ಅಂತಹ ಹೊಸ ಅಡಿಕೆ ಧಾರಣೆ 380 ರೂಪಾಯಿ ಕ್ಯಾಂಪ್ಕೋ ನಿಗದಿ ಮಾಡಿದೆ. ಖಾಸಗಿ ವಲಯದಲ್ಲಿ ಹೊಸ ಅಡಿಕೆ ಮಾರುಕಟ್ಟೆ ಇನ್ನಷ್ಟೇ ನಿಗದಿಯಾಗಬೇಕಿದೆ. ಆದರೆ 390 ರೂಪಾಯಿ ಸದ್ಯ ಖರೀದಿ ನಡೆಸುವ ಬಗ್ಗೆ ಅನಧಿಕೃತ ಮಾಹಿತಿ ಇದೆ.

ಇದೇ ವೇಳೆ ಹಳೆ ಚಾಲಿ ಅಡಿಕೆ ಧಾರಣೆಯನ್ನು ಕ್ಯಾಂಪ್ಕೋ 5 ರೂಪಾಯಿ ಏರಿಕೆ ಮಾಡಿ 480 ರೂಪಾಯಿಗೆ ಖರೀದಿ ಮಾಡುತ್ತಿದೆ. ಚೋಲ್‌ ಅಡಿಕೆ 560 ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ. ಖಾಸಗಿ ವಲಯದಲ್ಲಿಅಡಿಕೆ ಧಾರಣೆ ಏರಿಕೆಯ ನಿರೀಕ್ಷೆಯಲ್ಲಿದೆ.

ರಬ್ಬರ್‌ ಧಾರಣೆಯಲ್ಲಿ ಸ್ವಲ್ಪ ಏರಿಕೆಯ ಲಕ್ಷಣ ಕಂಡಿದೆ. ಸದ್ಯ RSS4 ರಬ್ಬರ್‌ ಗೆ 146  ರೂಪಾಯಿ ಹಾಗೂ ಲಾಟ್‌ ರಬ್ಬರ್‌ ಗೆ 131 ರೂಪಾಯಿಗೆ ಖರೀದಿಯಾಗುತ್ತಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

19 hours ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

1 day ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

1 day ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

2 days ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

2 days ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

2 days ago