Advertisement
ಸುದ್ದಿಗಳು

2030 ರ ವೇಳೆಗೆ ಜಾಗತಿಕ ಅಡಿಕೆ ಮಾರುಕಟ್ಟೆ 1.21 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆ : ವರದಿ

Share

ಏಷ್ಯಾ-ಪೆಸಿಫಿಕ್ ಪ್ರದೇಶದ ಬೇಡಿಕೆ ಮತ್ತು ಪಾರಂಪರಿಕ ಬಳಕೆಯ ಪರಿಣಾಮವಾಗಿ ಜಾಗತಿಕ ಅಡಿಕೆ ಮಾರುಕಟ್ಟೆ ವೇಗವಾಗಿ ವಿಸ್ತಾರವಾಗುತ್ತಿದೆ ಎಂದು Industry Today ಪ್ರಕಟಿಸಿದ ಮಾರುಕಟ್ಟೆ ಅಧ್ಯಯನ ವರದಿ ತಿಳಿಸಿದೆ.

ವರದಿಯ ಪ್ರಕಾರ, 2025ರಲ್ಲಿ ಅಡಿಕೆ ಮಾರುಕಟ್ಟೆಯ ಮೌಲ್ಯವು USD 0.96 ಬಿಲಿಯನ್ ಆಗಿದ್ದು, 2030 ರ ವೇಳೆಗೆ ಇದು USD 1.21 ಬಿಲಿಯನ್ ತಲುಪಲಿದೆ. ಈ ಅವಧಿಯಲ್ಲಿ ಮಾರುಕಟ್ಟೆ ವಾರ್ಷಿಕ ಸರಾಸರಿ 4.73% ದರದಲ್ಲಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಅಡಿಕೆ ಉತ್ಪಾದನೆ ಮುಖ್ಯವಾಗಿ ಏಷ್ಯಾ-ಪೆಸಿಫಿಕ್ ಹಾಗೂ ಆಫ್ರಿಕಾ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಭಾರತವು ಜಗತ್ತಿನಲ್ಲೇ ಅತಿದೊಡ್ಡ ಅಡಿಕೆ ಉತ್ಪಾದಕ ಮತ್ತು ಬಳಕೆದಾರ ರಾಷ್ಟ್ರವಾಗಿದ್ದು, ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿ ಅಡಿಕೆ ಸಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿದೆ ಎಂದು ವರದಿ ಹೇಳುತ್ತದೆ.

ವಾಣಿಜ್ಯ ದೃಷ್ಟಿ ಮತ್ತು ಪ್ರಾದೇಶಿಕವಾಗಿ ಅಡಿಕೆ ಬೇಡಿಕೆಯ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಉತ್ಪಾದನೆ ಹೆಚ್ಚಾಗಿದೆ. ಏಷ್ಯಾದ ಜೊತೆಗೇ ಕೆಲವು ಪಶ್ಚಿಮ ಮಾರುಕಟ್ಟೆಗಳಲ್ಲಿಯೂ ಅಡಿಕೆ ವ್ಯಾಪಾರ ವಿಸ್ತಾರವಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ನಿಯಂತ್ರಣದ ಪರಿಣಾಮ ಮತ್ತು ಆರೋಗ್ಯ ಜಾಗೃತಿ : ಸರ್ಕಾರಿ ನಿಯಮಗಳು, ಆಮದು ಸುಂಕಗಳು ಮತ್ತು ಆರೋಗ್ಯ ಸಂಬಂಧಿತ ಸಲಹೆಗಳು ಅಡಿಕೆ ಮಾರುಕಟ್ಟೆ ಮೇಲೆ ಹೆಚ್ಚು ಪ್ರಭಾವ ಬೀರುತ್ತಿವೆ. ಅಡಿಕೆ ಸೇವನೆಯಿಂದ ಉಂಟಾಗುವ ಆರೋಗ್ಯ ಅಪಾಯಗಳ ಅರಿವು ಕೆಲವು ಪ್ರದೇಶಗಳಲ್ಲಿ ಅಡಿಕೆ ಬಳಕೆಯ ಮೇಲೆ ಪರಿಣಾಮ ಬೀರುತ್ತಿದ್ದರೂ, ಸಾಂಪ್ರದಾಯಿಕ ಬಳಕೆಯು ಪ್ರಮುಖ ಮಾರುಕಟ್ಟೆಗಳಲ್ಲಿ ಬೇಡಿಕೆಯನ್ನು ಉಳಿಸಿಕೊಳ್ಳುವುದನ್ನು ಮುಂದುವರೆಸಿದೆ. ಹೀಗಾಗಿ ಅಡಿಕೆ ಬೇಡಿಕೆ ಮುಂದುವರಿದಿದೆ.

ಸಾಂಪ್ರದಾಯಿಕ ಮತ್ತು ಸಂಸ್ಕರಿಸಿದ ಅನ್ವಯಿಕೆಗಳಲ್ಲಿ ನಿರಂತರ ಬಳಕೆ : ಪಾನ್ ಮಸಾಲ, ಗುಟ್ಕಾ, ಅಡಿಕೆ ಹುಡಿ ಮತ್ತು ಸಾಂಪ್ರದಾಯಿಕ ಔಷಧೀಯ ಪದ್ಧತಿಗಳಲ್ಲಿ ಅಡಿಕೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಈ  ಬೇಡಿಕೆಯು  ಮುಂದುವರಿಯುತ್ತದೆ ಮತ್ತು ದೀರ್ಘಕಾಲೀನ ಅಡಿಕೆ ಮಾರುಕಟ್ಟೆಯ ಬೆಳವಣಿಗೆಗೆ ಕಾರಣವಾಗುತ್ತದೆ.  ವಿಶೇಷವಾಗಿ ಗ್ರಾಮೀಣ ಮತ್ತು ಅರೆ-ನಗರ ಮಾರುಕಟ್ಟೆಗಳಲ್ಲಿ ಸಾಂಸ್ಕೃತಿಕ ಬಳಕೆಯು ಹೆಚ್ಚಾಗಿದೆ.

ದೇಶೀಯ ಬಳಕೆಯನ್ನು ಪೂರೈಸಲು ಆಮದುಗಳಲ್ಲಿ ಏರಿಕೆ : ದೇಶೀಯ ಅಡಿಕೆ ಬೇಡಿಕೆಯನ್ನು ಪೂರೈಸಲು, ವಿಶೇಷವಾಗಿ ಭಾರತದಲ್ಲಿ, ಆಮದು ಪ್ರಮಾಣವೂ ಹೆಚ್ಚಾಗುತ್ತಿದೆ.  ದೊಡ್ಡ ಪ್ರಮಾಣದಲ್ಲಿ ದೇಶೀಯ ಉತ್ಪಾದನೆಯ ಹೊರತಾಗಿಯೂ, ಶ್ರೀಲಂಕಾ, ಇಂಡೋನೇಷ್ಯಾ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಿಂದ ಆಮದಾಗುತ್ತಲೇ ಇವೆ, ಸ್ಥಿರ ಲಭ್ಯತೆಯನ್ನು ಸದ್ಯ ಅಡಿಕೆ ಮಾರುಕಟ್ಟೆ ನಿರೀಕ್ಷಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜೇನುಗೂಡುಗಳ ಕೊರತೆಯಿಂದ ಪರಾಗಸ್ಪರ್ಶ ವ್ಯವಸ್ಥೆ ಮೇಲೆ ಪರಿಣಾಮ ; ಕೃಷಿ ಕ್ಷೇತ್ರದಲ್ಲಿ ಆತಂಕ – ಆಹಾರ ಬೆಳೆ ಉತ್ಪಾದನೆಗೆ ಸಂಕಷ್ಟದ ಎಚ್ಚರಿಕೆ

ಆಸ್ಟ್ರೇಲಿಯಾದಲ್ಲಿ ವರೋವಾ ಮೈಟ್ ಹಾವಳಿಯಿಂದ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದ್ದು, ಆಹಾರ ಬೆಳೆಗಳ…

5 hours ago

ಕಾಸರಗೋಡು ಜಿಲ್ಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ – ರೆಡ್ ಅಲರ್ಟ್ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜೂನ್ 6ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ…

6 hours ago

ಮಲೆನಾಡಿನ ಸಂಕಷ್ಟವೇ ಅವಕಾಶವಾಗಬಹುದೇ? : ‘ನಿರಪೇಕ್ಷಿತ ಕಾಡು ಕೃಷಿ’ ಹೊಸ ಪರಿಕಲ್ಪನೆ

ಮಲೆನಾಡಿನ ಕೃಷಿ ಸಮಸ್ಯೆಗಳನ್ನು ಪ್ರವಾಸೋದ್ಯಮದ ಅವಕಾಶಗಳಾಗಿ ಪರಿವರ್ತಿಸುವ ಹೊಸ ಪರಿಕಲ್ಪನೆಯನ್ನು ಪ್ರಬಂಧ ಅಂಬುತೀರ್ಥ…

7 hours ago

ನಿಷೇಧಿತ ಗುಟ್ಕಾ ಮಾರಾಟಕ್ಕೆ ಕಡಿವಾಣ | FDA ದಾಳಿ, 14 ಮಂದಿ ಬಂಧನ – ₹32 ಲಕ್ಷ ಮೌಲ್ಯದ ವಸ್ತು ವಶ

ಮಹಾರಾಷ್ಟ್ರ FDA ದಾಳಿಯಲ್ಲಿ 14 ಮಂದಿ ಬಂಧನವಾಗಿದ್ದು, ₹32 ಲಕ್ಷ ಮೌಲ್ಯದ ನಿಷೇಧಿತ…

7 hours ago

ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ವಿಶ್ವ ಪರಿಸರ ದಿನಾಚರಣೆಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಒತ್ತಿ…

7 hours ago

ಲ್ಯಾಬ್‌ ಟು ಲ್ಯಾಂಡ್ – 13.4 ಕೋಟಿ ರೈತರನ್ನು ತಲುಪಿದ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’

ದೇಶದಾದ್ಯಂತ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನವು 13.4 ಕೋಟಿ ರೈತರನ್ನು ತಲುಪಿದೆ…

10 hours ago