ಕರಾವಳಿ ಮತ್ತು ಮಲೆನಾಡು ಭಾಗದ ಅಡಿಕೆ ತೋಟಗಳಲ್ಲಿ ಇತ್ತೀಚೆಗೆ ಎಳೆಕಾಯಿ ಮಾತ್ರವಲ್ಲದೆ, ಬಲಿಯುವ ಹಂತದಲ್ಲಿರುವ ದೊಡ್ಡ ಗಾತ್ರದ ಅಡಿಕೆಗಳೂ ಉದ್ದವಾಗಿ ಒಡೆದು ನೆಲಕ್ಕೆ ಬೀಳುತ್ತಿರುವ ಬಗ್ಗೆ ರೈತರಿಂದ ವ್ಯಾಪಕ ಮಾಹಿತಿಗಳು ಬಂದಿದ್ದವು. ಈ ಕುರಿತು ದಿ ರೂರಲ್ ಮಿರರ್.ಕಾಂ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಸಿಪಿಸಿಆರ್ಐ ವಿಜ್ಞಾನಿ ಡಾ. ಭವಿಷ್ಯ ಹಾಗೂ ವಿಜ್ಞಾನಿಗಳ ತಂಡ ಈ ಸಮಸ್ಯೆಯ ಇನ್ನೊಂದು ಪ್ರಮುಖ ಕಾರಣದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿಜ್ಞಾನಿ ಡಾ. ಭವಿಷ್ಯ ಅವರು ವ್ಯಾಟ್ಸಪ್ ಚಾನೆಲ್ ಮೂಲಕ ಕೃಷಿಕರಿಗೆ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಆಗಸ್ಟ್ ತಿಂಗಳ ವೇಳೆಗೆ ಬಲಿಯುವ ಹಂತದಲ್ಲಿರುವ ಅಡಿಕೆಗಳು ಬಿದ್ದು ಒಡೆಯುವುದಕ್ಕೆ ಬೋರಾನ್ ಹಾಗೂ ಪೊಟ್ಯಾಸಿಯಂ ಕೊರತೆ ಪ್ರಮುಖ ಕಾರಣವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಗೊನೆಗಳಿಗೆ ಬೋರಾನ್ ಸಿಂಪಡಣೆ ಹಾಗೂ ಪೊಟ್ಯಾಸಿಯಂ ಗೊಬ್ಬರದ ಸಮರ್ಪಕ ನಿರ್ವಹಣೆಯನ್ನು ಶಿಫಾರಸು ಮಾಡಲಾಗುತ್ತದೆ. ಆದರೆ ಮಳೆಗಾಲದ ಆರಂಭದಲ್ಲೇ ದೊಡ್ಡ ಗಾತ್ರದ ಅಡಿಕೆಗಳು ಒಡೆದು ಬೀಳುತ್ತಿರುವುದು ಸ್ವಲ್ಪ ವಿಭಿನ್ನ ಲಕ್ಷಣವಾಗಿದೆ.
ಮೈಟ್ ಕೀಟದ ಪಾತ್ರವೇನು? : ಡಾ. ಭವಿಷ್ಯ ಅವರ ಪ್ರಕಾರ, ಬೇಸಿಗೆಯಲ್ಲಿ ಅಡಿಕೆ ಎಲೆಗಳಿಗೆ ಬಾಧಿಸುವ ಮೈಟ್ ಕೀಟಗಳಲ್ಲೊಂದು “ಪೆರಿಯಾಂತ್ ಮೈಟ್” (Perianth Mite) ಅಡಿಕೆ ಗೊನೆಗಳಿಗೂ ಹಾನಿ ಉಂಟುಮಾಡುತ್ತದೆ.
ಈ ಕೀಟವು ಸಣ್ಣ ಅಡಿಕೆಯ ತೊಟ್ಟಿನ ಒಳಭಾಗಕ್ಕೆ ಸೇರಿಕೊಂಡು ಅಡಿಕೆಯ ಸಿಪ್ಪೆಯಿಂದ ರಸ ಹೀರುತ್ತದೆ. ಅಡಿಕೆಯ ಬೆಳವಣಿಗೆಯಲ್ಲಿ ತೊಟ್ಟಿನ ಭಾಗವು ಅತ್ಯಂತ ಸಕ್ರಿಯವಾಗಿರುವುದರಿಂದ ಅಲ್ಲಿ ಉಂಟಾಗುವ ಹಾನಿ ಬೆಳವಣಿಗೆಯ ಅಸಮತೋಲನಕ್ಕೆ ಕಾರಣವಾಗುತ್ತದೆ.
ಇದರ ಪರಿಣಾಮವಾಗಿ ಅಡಿಕೆಯ ಕೆಳಭಾಗ ಮತ್ತು ಮಧ್ಯಭಾಗ ಮಾತ್ರ ಬೆಳೆಯುತ್ತವೆ. ಮೇಲ್ಭಾಗದ ಬೆಳವಣಿಗೆ ಕುಂಠಿತಗೊಂಡು, ಅಡಿಕೆಯ ಕೆಳಭಾಗ ಉದ್ದವಾಗಿ ಒಡೆದು ನಂತರ ನೆಲಕ್ಕೆ ಬೀಳುತ್ತದೆ. ಕೆಲವೊಮ್ಮೆ ತೊಟ್ಟಿನ ಭಾಗದಿಂದ ಕೆಳವರೆಗೂ ಬಿರುಕು ಕಾಣಿಸಿಕೊಳ್ಳಬಹುದು.
ಮೈಟ್ ಬಾಧೆ ಗುರುತಿಸುವುದು ಹೇಗೆ? : ಒಡೆದು ಬಿದ್ದ ಅಡಿಕೆಯ ತೊಟ್ಟನ್ನು ತೆಗೆದು ಪರಿಶೀಲಿಸಿದರೆ ಮೈಟ್ ಬಾಧೆಯನ್ನು ಗುರುತಿಸಬಹುದು.
ಮಳೆ ಹೆಚ್ಚಾದಂತೆ ಮತ್ತು ತೇವಾಂಶ ಅನುಕೂಲಕರವಾದಂತೆ ಈ ಕೀಟಗಳ ಸಂಖ್ಯೆಯು ಸಹಜವಾಗಿಯೇ ಕಡಿಮೆಯಾಗುತ್ತದೆ.
ಈಗ ಔಷಧಿ ಸಿಂಪಡಣೆ ಬೇಕೇ? :ಜೂನ್ ತಿಂಗಳಲ್ಲಿ ಒಡೆದು ಬೀಳುತ್ತಿರುವ ಅಡಿಕೆಗಳನ್ನು ನೋಡಿ ಈಗ ಔಷಧಿ ಸಿಂಪಡಣೆ ಮಾಡಿದರೆ ಹೆಚ್ಚಿನ ಪ್ರಯೋಜನ ಇರುವುದಿಲ್ಲ ಎಂದು ಡಾ. ಭವಿಷ್ಯ ಸ್ಪಷ್ಟಪಡಿಸಿದ್ದಾರೆ. ಏಕೆಂದರೆ ಮೈಟ್ ಹಾವಳಿ ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ಹೆಚ್ಚಾಗಿರುತ್ತದೆ. ಆದರೆ ಆ ಸಮಯದಲ್ಲಿ ಬಾಧೆ ಎಷ್ಟಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಜೂನ್ ವೇಳೆಗೆ ಅದರ ಪರಿಣಾಮ ಮಾತ್ರ ಕಾಣಿಸಿಕೊಳ್ಳುತ್ತದೆ.
ಹೀಗಾಗಿ ಮುನ್ನೆಚ್ಚರಿಕೆಯಾಗಿ ಕೀಟನಾಶಕ ಸಿಂಪಡಣೆ ಮಾಡುವ ಅಗತ್ಯ ಸಾಮಾನ್ಯವಾಗಿ ಇರುವುದಿಲ್ಲ. ಅಲ್ಲದೆ ಈ ಕೀಟದಿಂದಾಗುವ ನಷ್ಟ ಹೆಚ್ಚಾಗಿ ಶೇಕಡಾ 1 ಕ್ಕಿಂತ ಕಡಿಮೆ ಪ್ರಮಾಣದಲ್ಲೇ ಇರುತ್ತದೆ ಎಂದು ಅವರು ಹೇಳಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ರೈತರು ಏನು ಮಾಡಬೇಕು? : ವಿಜ್ಞಾನಿಗಳ ಸಲಹೆ ಪ್ರಕಾರ,
ಕೀಟನಾಶಕಗಳು ತ್ವರಿತ ಪರಿಣಾಮ ನೀಡಿದರೂ, ಕೃಷಿ ಕಾರ್ಮಿಕರ ಆರೋಗ್ಯ ಹಾಗೂ ಅಡಿಕೆ ತೋಟದ ಪರಿಸರದಲ್ಲಿರುವ ಪರೋಪಕಾರಿ ಕೀಟಗಳಿಗೆ ಹಾನಿಕಾರಕವಾಗಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಅಡಿಕೆ ಒಡೆದು ಬೀಳುವ ಪ್ರಕರಣಗಳನ್ನು ಕಂಡು ರೈತರು ಚುಕ್ಕೆ ರೋಗ, ಕೊಳೆರೋಗ ಅಥವಾ ಬೋರಾನ್ ಕೊರತೆಯತ್ತ ಮಾತ್ರ ಗಮನ ಹರಿಸುತ್ತಿದ್ದರು. ಆದರೆ ಸಿಪಿಸಿಆರ್ಐ ವಿಜ್ಞಾನಿಯ ಈ ಮಾಹಿತಿ ಸಮಸ್ಯೆಯ ಹಿಂದೆ ಮೈಟ್ ಕೀಟದ ಪಾತ್ರವೂ ಇರಬಹುದೆಂಬ ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಯಾವುದೇ ಔಷಧಿ ಸಿಂಪಡಣೆಗೆ ಮುಂದಾಗುವ ಮುನ್ನ ಬಿದ್ದ ಅಡಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಿಜವಾದ ಕಾರಣವನ್ನು ಗುರುತಿಸುವುದು ಅತ್ಯಗತ್ಯವಾಗಿದೆ.
CPCRI scientist Dr. Bhavishya has clarified that the recent splitting and premature fall of mature arecanuts may not always be due to boron deficiency or diseases. Perianth mite infestation on developing nuts can also cause abnormal growth, cracking and fruit drop. Experts advise farmers to focus on irrigation, boron, calcium and potassium management rather than unnecessary pesticide sprays.
ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…
ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…
ಜೇನುನೊಣಗಳ ಸಂಖ್ಯೆ ಕುಸಿಯುತ್ತಿರುವುದು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ…
ವಿಟ್ಲದ ಆರ್. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ…
ನಾಗ್ಪುರದ ಕಾಂಪ್ಟಿಯಲ್ಲಿ FDA ಹಾಗೂ ಪೊಲೀಸರು ನಡೆಸಿದ ದಾಳಿಯಲ್ಲಿ ₹1.11 ಕೋಟಿ ಮೌಲ್ಯದ…
ಕರ್ನಾಟಕದ ಹಲವು ಭಾಗಗಳಲ್ಲಿ ಜೂನ್ 20ರವರೆಗೆ ಪ್ರಸ್ತುತ ಹವಾಮಾನ ಮಾದರಿಯೇ ಮುಂದುವರಿಯುವ ಸಾಧ್ಯತೆ…