ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ವಿವಿಧ ಕಲಾವಿದರ ಚಿತ್ರಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಾಗಿತ್ತು. ವಿವಿಧ ಚಿತ್ರಕಲಾವಿದರ ಚಿತ್ರಗಳು ಪ್ರದರ್ಶನಗೊಂಡವು. ಎಲ್ಲವೂ ಉತ್ತಮವಾಗಿತ್ತು.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಕಲಾ ಪ್ರದರ್ಶನಗಳನ್ನು ಆಯೋಜಿಸುತ್ತದೆ. ಪರಿಷತ್ತು ಬೆಂಗಳೂರಿನ ಒಂದು ಪ್ರಮುಖ ಕಲಾ ಕೇಂದ್ರವಾಗಿದೆ. ಇದು ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಒಂದು ಸಂಸ್ಥೆಯಾಗಿದೆ. ಇಲ್ಲಿ ವಿವಿಧ ರೀತಿಯ ಕಲಾ ಪ್ರದರ್ಶನಗಳು, ಕಾರ್ಯಾಗಾರಗಳು ಮತ್ತು ಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪರಿಷತ್ತಿಗೆ ಭೇಟಿ ನೀಡಿದಾಗ ಅಲ್ಲಿ ವರ್ಣಚಿತ್ರಗಳು, ಶಿಲ್ಪಗಳು, ಜಾನಪದ ಕಲೆಗಳು ಮತ್ತು ಇತರ ಕಲಾ ಪ್ರಕಾರಗಳನ್ನು ನೋಡಬಹುದು.
ಪ್ರದರ್ಶನದ ಮೂಲಕ ಕಲಾ ಪ್ರೇಮಿಗಳಿಗೆ ಹತ್ತಿರವಾಗಲು ಸಹಾಯಕವಾಗಿದ್ದು, ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ದೊರೆತಿದೆ ಎಂದು ಕಲಾವಿದ ಶ್ರೀನಿವಾಸ್ ಸಂತಸ ವ್ಯಕ್ತ ಪಡಿಸಿದರು. ಚಿತ್ರಕಲಾ ಪರಿಷತ್ತು ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸುವ ಮೂಲಕ ಪ್ರೋತ್ಸಾಹಿಸುತ್ತಿದ್ದು ಪ್ರದರ್ಶನದ ಮೂಲಕ ತಮ್ಮ ಕಲಾಕೃತಿಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗಿದೆ ಎಂದು ಕಲಾವಿದ ಕ್ರಿಸ್ಟೋಫರ್ ಹೇಳಿದರು. ಪ್ರದರ್ಶನದಲ್ಲಿ ಐದು ಜನರ ಕಲಾವಿದರ ಕಲಾಕೃತಿಗಳನ್ನು ಆಯ್ಕೆ ಮಾಡಿ ಪ್ರದರ್ಶಿಸಲಾಗಿದೆ, ಕಲಾಕೃತಿಗಳ ಮೂಲಕ ಬದುಕಿನ ಸಂದೇಶವನ್ನು ತಿಳಿಸಲಾಗಿದೆ ಎಂದು ಕಲಾವಿದರಾದ ಮೇಘನಾ ಚೌಹಾಣ್ ಹೇಳಿದ್ದಾರೆ.
ಈ ವೇಳೆ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್.ಎನ್ ಶಶಿಧರ ಸೇರಿದಂತೆ ವಿವಿಧ ಕಲಾವಿದರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel