Advertisement
ಸುದ್ದಿಗಳು

ನೆರವಿಗೆ ನೆರವು…! | ಪುತ್ತೂರಿನ ಚುನಾವಣಾ ಕಣದಲ್ಲಿ ಇತಿಹಾಸ ಬರೆದ ಅರುಣ್‌ ಪುತ್ತಿಲ | ಅದ್ಭುತ ಪ್ರತಿಕ್ರಿಯೆ ನೀಡಿದ ಮತದಾರರು |

Share

ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ಪರವಾಗಿ ಇದೀಗ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಂದು ನಮಗೆ ನೆರವು ನೀಡಿದ್ದಾರೆ, ಈಗ ನಿಮಗೆ ನೆರವು ನೀಡುತ್ತೇವೆ ಎಂದು  ಹೇಳುವ ಅಭಿಪ್ರಾಯ ಬಂದಿದೆ.

ಚುನಾವಣಾ ಕಣದಲ್ಲಿ ಕಾರ್ಯಕರ್ತರ ಮನವಿ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ  ಸ್ಫರ್ಧೆಗೆ ಇಳಿದಿದ್ದ ಅರುಣ್‌ ಕುಮಾರ್‌ ಪುತ್ತಿಲ  ಅವರ ವಿರುದ್ಧ ಇತರ ಪಕ್ಷಗಳು ಹಲವು ಆರೋಪಗಳನ್ನು, ಸುಳ್ಳು ಪ್ರಚಾರಗಳನ್ನು ಮಾಡುತ್ತಿರುವುದರಿಂದ ಬೇಸತ್ತ ಅರುಣ್ ಕುಮಾರ್ ಪುತ್ತಿಲರು ಎ.28ರ ಮಹಿಳಾ ಸಮಾವೇಶ ಸೀತಾ ಪರಿವಾರದಲ್ಲಿ ಚುನಾವಣೆ ಎದುರಿಸುವುದು ಕಷ್ಟಸಾಧ್ಯ ಅದಕ್ಕೆ ಅಧಿಕಾರ ಹಾಗೂ ಹಣ ಬಲ ಬೇಕು . ನಿಮ್ಮ ಓಟಿನ ಜೊತೆಗೆ 10 ರೂಪಾಯಿಯಂತೆ ನೀಡಿ ನಿಮ್ಮ ಮನೆ ಮಗನ ರೀತಿ ಬೆಂಬಲಿಸಿ ಎಂದು  ಮನವಿ ಮಾಡಿದ್ದರು. ಪುತ್ತಿಲರ ಮನವಿಗೆ ಮಿಡಿದ ಮತದಾರರು  ಸಹಾಯವನ್ನು ನೀಡುತ್ತಿದ್ದಾರೆ.ಕೇವಲ 12 ಗಂಟೆಯಲ್ಲಿ ಹರಿದು ಬಂತು 7.80 ಲಕ್ಷ ರೂಪಾಯಿ ಹರಿದುಬಂದಿದೆ.

ಪುತ್ತಿಲರ ಚುನಾವಣಾ ನಿರ್ವಹಣೆಯ ಐಟಿ ಸೆಲ್ ವತಿಯಿಂದ ಎ.29ರ ಮಧ್ಯಾಹ್ನ ಸಮಯ ಅಕೌಂಟ್ ನಂಬರ್ , ಕ್ಯೂ ಆರ್ ಕೋಡ್, ಯುಪಿಐ ನಂಬರ್ ನ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈ ಪೋಸ್ಟರ್ ರೀಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ 1 ಲಕ್ಷದಷ್ಟು ಸಂಗ್ರಹ ಆಗಿತ್ತು. ಕುರಿಯದ ಬೆನ್ನುಮೂಲೆ ಮುರಿತಕ್ಕೊಳಕ್ಕಾದ ಸತೀಶ್ ಎನ್ನುವವರು 5 ಸಾವಿರ ಹಣ ಅರುಣ್ ಪುತ್ತಿಲರಿಗೆ ಹಾಕಿ ನಮಗೋಸ್ಕರ ದುಡಿಯುವವರು ಯಾವತ್ತೂ ಸೋಲಬಾರದು ಎನ್ನುವ ಸಂದೇಶ ಹಾಕಿದ್ದು ಅಭಿಮಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯೋರ್ವರು 30000 ಹಣ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಮನೆ ಮನೆಯಿಂದ 10,50, 100, 500, 1000 ದಂತೆ ಹಣ ಸಂದಾಯವಾಗಿದೆ. ಹೊರ ತಾಲೂಕಿನವರೂ ಸ್ಪಂದಿಸಿದ್ದಾರೆ.12 ಗಂಟೆ ಅವಧಿಯಲ್ಲಿ ಈ ಖಾತೆಗೆ 7.80 ಲಕ್ಷ ರೂಪಾಯಿ ಹಣ ಹರಿದು ಬಂದಿದೆ.

ಕ್ಷೇತ್ರದಾದ್ಯಂತ ಅರುಣ್ ಪುತ್ತಿಲರ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.ಅನೇಕರು ಅಂದು ನಮಗೆ ಸಹಾಯ ಮಾಡಿದ್ದೀರಿ, ಇಂದು ನಾವು ನಿಮ್ಮ ಜೊತೆಗಿದ್ದೇವೆ ಎಂದು ಹೇಳುತ್ತಿರುವುದು  ವಿಶೇಷವಾಗಿದೆ. ವ್ಯಕ್ತಿಯೊಬ್ಬರು ಅಪಘಾತಕ್ಕೆ ಒಳಗಾಗಿ ಗಾಯಗೊಂಡಿದ್ದರು, ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು ಅರುಣ್‌ ಕುಮಾರ್‌ ಪುತ್ತಿಲ ಅವರು, ಅಂತಹ ವ್ಯಕ್ತಿಗಳೂ ಕಳೆದ ಕೆಲವು ದಿನಗಳಿಂದ ತಡರಾತ್ರಿವರೆಗೂ ಪುತ್ತಿಲ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಪಕ್ಷೇತರ ಅಭ್ಯರ್ಥಿ ಪುತ್ತೂರಿನಲ್ಲಿ ಹವಾ ಎಬ್ಬಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

2 days ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

2 days ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

2 days ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

3 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

3 days ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

3 days ago