Advertisement
The Rural Mirror ಕಾಳಜಿ

ಕಾರಿನಲ್ಲಿ ಕುಳಿತ ತಕ್ಷಣ ಎ.ಸಿ. ಆನ್ ಮಾಡಬೇಡಿ | ಎ.ಸಿ. ಬೇಕಾ? ಆರೋಗ್ಯ ಬೇಕಾ?

Share

ನಮ್ಮದು ಎ.ಸಿ. ಕಾರು(Car), ಸೆಖೆಯ ಪ್ರಶ್ನೆಯೇ ಇಲ್ಲ ಎಂಬ ಖುಷಿ. ಹೀಗಾಗಿ ಬಿರುಬಿಸಿಲಿನಲ್ಲಿ(Hot) ಶಾಪಿಂಗ್(Shopping) ಮುಗಿಸಿ ಕಾರಲ್ಲಿ ಕುಳಿತೊಡನೆ ಎ.ಸಿ(AC) ಆನ್ ಮಾಡಿ ನಿಟ್ಟುಸಿರು ಬಿಡುತ್ತೀರಾ? ನೀವು ಮಾಡುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. 

ಕಾರಲ್ಲಿ ಕುಳಿತೊಡನೆ ಮೊದಲು ಕಿಟಕಿ ತೆಗೆಯಿರಿ. ಕಾರ್ ಡ್ಯಾಶ್‌ಬೋರ್ಡ್. ಸೋಫಾ, ಏರ್ ಫ್ರೆಶ್‌ನರ್ ಎಲ್ಲದರಿಂದ ಬೆನಝೀನ್ ಎಂಬ ವಿಷಅನಿಲ ಬಿಡುಗಡೆ ಆಗಿರುತ್ತದೆ. ಕಾರಿನ ಬಾಗಿಲು ತೆರೆದೊಡನೆ ಮೂಗಿಗೆ ಬಡಿಯುವ ಬಿಸಿಯಾದ ಪ್ಲಾಸ್ಟಿಕ್ ವಾಸನೆಯನ್ನು ಗಮನಿಸಿದ್ದೀರಾ? ಇದು ಕ್ಯಾನ್ಸರ್ ಕಾರಕ ಅಂತ ಸಂಶೋಧನೆಗಳು ತಿಳಿಸಿವೆ. ಅಷ್ಟೇಕೆ ಮೂಳೆಗಳಿಗೂ ಮಾರಕ, ರಕ್ತಹೀನತೆ, ಬಿಳಿಯ ರಕ್ತಕಣಗಳ ಕುಂದುವಿಕೆ, ವಾಸನೆಯ ದೀರ್ಘಕಾಲಿಕ ಸೇವನೆಯಿಂದ ಲ್ಯುಕೇಮಿಯ, ಕ್ಯಾನ್ಸರ್ ಸಾಧ್ಯತೆಯ ಹೆಚ್ಚಳ, ಗರ್ಭಪಾತ ಇವೆಲ್ಲದರ ಸಾಧ್ಯತೆಯೂ ದೃಢಪಟ್ಟಿದೆ.

ಮುಚ್ಚಿನ ಬಾಗಿಲಿನ ಒಳಗಿರುವ ಬೆನ್‌ಝೀನ್ ಮಟ್ಟ ಚ.ಅ. 50 ಎಂ.ಜಿ.ಬಾಗಿಲು-ಕಿಟಕಿ ಮುಚ್ಚಿ ನಿಲ್ಲಿಸಿದ ಕಾರ್‌ನಲ್ಲಿ 400-800 ಎಂ.ಜಿ. ಬೆನ್‌ಝೀನ್ ಇರುತ್ತದೆ. 60 ಡಿಗ್ರಿಗೂ ಮೀರಿದ ಉಷ್ಣಾಂಶದಲ್ಲಿ ನಿಂತ ಕಾರಿನಲ್ಲಿ ಬೆನ್‌ಝೀನ್ ಮಟ್ಟ 2000-4000ದಷ್ಟು! ಅಂದರೆ ಮಾನವ ತಡೆಯಬಹುದಾದ ಮಟ್ಟಕ್ಕಿಂತ 40 ಪಟ್ಟು ಹೆಚ್ಚು ವಿಷವಾಯು!

ಕಾರ್‌ನ ಬಾಗಿಲು ತೆರೆದೊಡನೆ ಒಳಗೆ ಕೂತು ಎ.ಸಿ. ಆನ್ ಮಾಡುವ ಮೊದಲು ಕಿಟಕಿ-ಬಾಗಿಲು ತೆರೆದು ವಿಷವಾಯು ಹೊರಗೆ ಹೋಗಲು ಬಿಡಿ. ಇಲ್ಲವಾದರೆ ಬೆನ್‌ಝೀನ್ ಎಂಬ ವಿಷ ಶರೀರ ಪ್ರವೇಶಿಸಿ ಮಾಡುವ ಅನಾಹುತ ಸಾಕಷ್ಟು, ಲಿವರ್, ಕಿಡ್ನಿಗೂ ಕ್ರಮೇಣವಾಗಿ ಹಾನಿ ಮಾಡುತ್ತದೆ ಈ ವಿಷಗಾಳಿ.

Source : Digital Media

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

7 hours ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

7 hours ago

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

15 hours ago

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…

16 hours ago

ಹವಾಮಾನ ವರದಿ | 31-08-2026 | ಸೆ.3ರಿಂದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಸದ್ಯ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10…

1 day ago

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ

ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…

2 days ago