MIRROR FOCUS

ಮುಂಗಾರು ಆರಂಭವಾಗುತ್ತಿದ್ದಂತೆ ಏರಿದ ತರಕಾರಿ ಬೆಲೆ | ಗಗನಕ್ಕೇರಿದ ಬೀನ್ಸ್‌ ದರ | ಬಡವರ ಪಾಡೇನು..? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬರಗಾಲ(Drought) ಬಂದರೆ ಮಳೆ(Rain) ಇಲ್ಲದೆ ತರಕಾರಿ ರೇಟ್‌(Vegetable rate) ಗಗನಕ್ಕೆ ಹಾರುತ್ತದೆ. ಅದೇ ರೀತಿ ಮಳೆ ಜಾಸ್ತಿಯಾದರು ಮಳೆಗೆ ತರಕಾರಿ ಕೊಳೆತು ದರ ಏರುತ್ತದೆ(Price hike). ಇನ್ನೇನು ಮುಂಗಾರು(Mansoon rain) ಆರಂಭವಾಗಿದೆ. ತರಕಾರಿ ಕೊಳೆಯುವಂತೆ ಇನ್ನು ಮಳೆ ಆರಂಭವಾಗಿಲ್ಲ. ಆದರೂ ತರಕಾರಿ ರೇಟು ಜಾಸ್ತಿಯಾಗಿದೆ. ಯಾವ ತರಕಾರಿ ಬೆಲೆ ಕೇಳಿದರು ತರಕಾರಿ ಕೊಂಡುಕೊಳ್ಳುವುದೇ ಬೇಡ ಅನ್ನಿಸುತ್ತದೆ. ಪ್ರತಿ ವರ್ಷದಂತೆ  ಮಳೆಗಾಲ ಆರಂಭವಾಗುತ್ತಿದ್ದಂತೆ  ತರಕಾರಿ ದರಗಳು ಗಗನಮುಖಿಯಾಗಿವೆ. ಈ ಪೈಕಿ ಬೀನ್ಸ್ ದರ ಡಬಲ್ ಸೆಂಚುರಿ ದಾಟಿದೆ. ದೂರದ ಹಿಮಾಚಲ ಪ್ರದೇಶದಿಂದ(Himachala Pradesh) ಬೀನ್ಸ್ (Beans Price Hike) ತರಲಾಗ್ತಿದ್ದು, ಸದ್ಯಕ್ಕೆ ಬೀನ್ಸ್ ಶ್ರೀಮಂತರ ತರಕಾರಿಯಾಗಿ ಮಾರ್ಪಟ್ಟಿದೆ.

Advertisement
Advertisement

ತರಕಾರಿ ದರ ಏರುತ್ತಲೇ ಇದ್ದು, ಗ್ರಾಹಕರಿಗೆ ಬಹುದೊಡ್ಡ ಹೊರೆಯಾಗಿ ಪರಿಣಮಿಸಿದೆ. ಮಳೆ ಹೆಚ್ಚಾಗುತ್ತಿದ್ದಂತೆಯೇ ತರಕಾರಿ ದರವೂ ಗಗನಕ್ಕೇರಿದೆ. ಅದ್ರಲ್ಲೂ ಬೀನ್ಸ್ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹೋಲ್ ಸೇಲ್ ದರವೇ ಡಬಲ್ ಸೆಂಚುರಿ ದಾಟಿ, ಗ್ರಾಹಕರನ್ನು ಹುಬ್ಬೇರುವಂತೆ ಮಾಡಿದೆ. ರೀಟೇಲ್‌ನಲ್ಲಿ ಪ್ರತಿ ಕೆಜಿ ಗೆ 200 ಕ್ಕೂ ಹೆಚ್ಚು ದರ ನಿಗದಿಯಾಗುತ್ತಿದೆ.

ಬೀನ್ಸ್ ದರ ಏರಿಕೆಗೆ ಇದೇ ಕಾರಣ : ಕಳೆದ ವರ್ಷದ ಬರಗಾಲದಿಂದ ರಾಜ್ಯದಲ್ಲಿ ಎಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಬೀನ್ಸ್ ಬೆಳೆದಿಲ್ಲ. ಹೀಗಾಗಿ ದೂರದ ಹಿಮಾಚಲ ಪ್ರದೇಶದಿಂದ ಬೀನ್ಸ್ ಖರೀದಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹುಬ್ಬಳ್ಳಿ ವರ್ತಕರು ದೆಹಲಿ ಮೂಲಕ ಬೀನ್ಸ್ ತರಿಸಿಕೊಳ್ಳುತ್ತಿದ್ದಾರೆ. ಹುಬ್ಬಳ್ಳಿಗೆ ನಿತ್ಯ ಒಂದು ಟ್ರಕ್ ಬೀನ್ಸ್ ತರಿಸಲಾಗುತ್ತಿದೆ. ಪ್ರತಿ ಟ್ರಕ್ ನಲ್ಲಿ 15 ಟನ್ ಬೀನ್ಸ್ ಸಾಗಾಟ ಮಾಡಲಾಗುತ್ತಿದೆ. ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಇಲ್ಲಿಂದಲೇ ಪೂರೈಕೆ ಮಾಡಲಾಗುತ್ತದೆ. ದೂರದ ಊರಿನಿಂದ ತರಿಸುತ್ತಿರುವುದರಿಂದ ದರ ಏರಿಕೆಯಾಗಿದೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೆಳಗಾವಿಯಲ್ಲಿ ಧಾರಾಕಾರ ಮಳೆ | ವ್ಯಾಪಕವಾಗಿ ಕೃಷಿಗೆ ಹಾನಿ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…

3 hours ago

ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ

ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …

4 hours ago

ಅಡಿಕೆ ಮಾರಾಟದ ದಾರಿಗಳು ಯಾವುದೆಲ್ಲಾ…?

ಬೆಳೆಗಾರರು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರದ್ದೇ ಆದ ಇತರ ಸಂಸ್ಥೆಗಳ ಮೂಲಕ ವ್ಯವಹಾರ…

4 hours ago

ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ | ಕೃಷಿಕರಿಗೆ ಹೇಗೆ ಪ್ರಯೋಜನವಾಗುತ್ತಿದೆ…?

ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ ಜಾರಿಯಾಗಿ ವರ್ಷಗಳು ಕೆಲವು ಉರುಳಿದವು. ಇಂದಿಗೂ…

4 hours ago

ಸಕಲ ಸಂಕಷ್ಟಗಳನ್ನು ಮಾಯ ಮಾಡ್ತಾಳೆ ಈ ಉಕ್ಕಡ ಮಾರಮ್ಮ | ಆಷಾಡ ಶುಕ್ರವಾರ ಈ ದೇವಿಯನ್ನು ಈ ರೀತಿ ಪೂಜಿಸಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಬೆಳೆವಿಮೆ ಯೋಜನೆ | ರೈತರಿಗೆ ತೋಟಗಾರಿಕಾ ಇಲಾಖೆ ಸೂಚನೆ

ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ…

12 hours ago