ಕಲ್ಪವೃಕ್ಷ ಎಂದಾಕ್ಷಣ ತೆಂಗು ಎಂದು ನಮಗೆ ನೆನಪಿಗೆ ಬರುತ್ತದೆ. ಆದರೆ ಬಾಳೆಯೂ ಕಲ್ಪವೃಕ್ಷವೇ. ಇದರ ಎಲ್ಲಾ ಭಾಗಗಳು ಉಪಯುಕ್ತವೇ ಆಗಿದೆ.
ಬಾಳೆಗೊನೆ ಮೋತೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು ಬಹಳ ಉಪಯುಕ್ತವಾಗಿದೆ. ಇದೀಗ ಒಂದು ಅಡಿ ಉದ್ದದ ದಿಂಡಿಗೂ ಬಹಳ ಡಿಮಾಂಡ್ ಇದೆ. ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯ, ದಿಂಡಿನ ಪಕೋಡ, ದೋಸೆ, ಇಡ್ಲಿ ಸಲಾಡ್,ಮೊಸರು ಗೊಜ್ಜು.. ಹೀಗೇ ನಾನಾ ವೈವಿಧ್ಯ ತಿನಿಸುಗಳು ಮಾಡಲಾಗುತ್ತದೆ. ದಿಂಡಿನ ನಾರಿನಿಂದ ಪರಿಸರ ಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಚೀಲಗಳು, ಬುಟ್ಟಿಗಳು, ಸಸಿ ಕುಂಡಗಳು, ಯೋಗಾಸನ ಚಾಪೆಗಳು, ಹಗ್ಗ ಇತ್ಯಾದಿಗಳ ತಯಾರಿಯಾಗುತ್ತದೆ. ಸೀರೆ, ಅಂಗಿ, ಬಟ್ಟೆಗಳು, ಪರಿಸರಸ್ನೇಹಿ ಹರ್ಬಲ್ ಮೆಡಿಸಿನ್ ಮಾಡಲಾಗುತ್ತದೆ.
ಬಾಳೆದಿಂಡಿನ ರಸವು ಮುಖ್ಯವಾಗಿ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಲು ರಾಮಬಾಣವಾಗಿದೆ .ಗ್ಯಾಸ್ಟ್ರಿಕ್ ಸಮಸ್ಯೆಗೆ, ಮೂತ್ರಪಿಂಡದ ಸಮಸ್ಯೆಗೆ ಹಾಗೂ ಎಸಿಡಿಟಿಯನ್ನು ಕಡಿಮೆ ಮಾಡಲು ಈ ರಸ ಉಪಯೋಗವಾಗಿದೆ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿನ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ.
ಬಾಳೆಗಿಡ ಕಡಿದು ಮಧ್ಯದ ದಿಂಡನ್ನು ತೆಗೆದು ಗುಳಿಯ ಆಕಾರದಲ್ಲಿ ಸಂಜೆ ಮಾಡಿ ಪ್ಲಾಸ್ಟಿಕ್,ಬಾಳೆ ಎಲೆ ಅಥವಾ ಹಾಳೆ ಮುಚ್ಚಬೇಕು. ಮರುದಿನ ಬೆಳಗ್ಗೆ ನೋಡುವಾಗ ಗುಳಿತುಂಬಾ ನೀರು ತುಂಬಿರುತ್ತದೆ. ಇದನ್ನು ತೆಗೆದುಕೊಳ್ಳಬೇಕು.
ಬಾಳೆದಿಂಡಿನ ರಸ ಕುಡಿಯುವುದರಿಂದ ಕಿಡ್ನಿಯಲ್ಲಿನ ಕಲ್ಲು ಕರಗುತ್ತದೆ. ವರ್ಷಕ್ಕೆ ಎರಡು ಬಾರಿಯಾದರೂ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ .ಇದರ ತಾಜಾ ನೀರನ್ನು ಹಾಗೆ ಕುಡಿಯುವುದು ಉತ್ತಮ ಅಥವಾ ಜೀರಿಗೆ, ಶುಂಠಿ ,ನಿಂಬೆರಸ, ಗಾಂಧಾರಿ ಮೆಣಸು, ಚಿಟಿಕೆ ಉಪ್ಪು, ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು. ಇದನ್ನು ಸಮಸ್ಯೆ ಇದ್ದವರೇ ಕುಡಿಯಬೇಕೆಂದಿಲ್ಲ ಇಲ್ಲದವರುಕೂಡಾ ಕುಡಿಯಬಹುದು. ಸಾಯಂಕಾಲದಿಂದ ಬೆಳಿಗ್ಗೆ ಆಗುವಾಗ ಐದರಿಂದ ಆರು ಆರು ಗ್ಲಾಸ್ ಅಂದರೆ ಸುಮಾರು ಒಂದು ಲೀಟರ್ ನಷ್ಟು ನೀರು ತುಂಬುತ್ತದೆ. ಇದೊಂದು ಸಂಜೀವಿನಿ ಆಹಾರವಾಗಿದೆ.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…