Opinion

ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ತಾಪಮಾನ ಏರಿಕೆಯಾಗುತ್ತಿದೆ. ಸತತವಾಗಿ 40 ಡಿಗ್ರಿಗಿಂತ ಅಧಿಕವಾಗಿದೆ ತಾಪಮಾನ. ಅದೊಂದು ಸಾಮಾನ್ಯ ಉಷ್ಣತೆ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ(Heat Wave) ಸಿದ್ಧರಾಗಬೇಕಿದೆ. ಹಾಗಿದ್ದರೆ ಏನು ಮಾಡಬೇಕು ಮುಂದೆ ಎಂಬ ಯೋಚನೆ ಅಗತ್ಯವಿದೆ. ಜಗಲಿ ಕಟ್ಟೆಯಲ್ಲಿ ಕುಳಿತು ಹೋ.. ಹೋ.. ತಾಪಮಾನ ಎಂದು ತಣ್ಣೀರು ಕುಡಿದರೆ ಸಾಲದು. ಯೋಜನೆಗಳು ಅಗತ್ಯವಿದೆ.

Advertisement

ತಾಪಮಾನದ ಸಂದರ್ಭ ದೇಹವನ್ನು ಕಾಪಾಡುವುದೂ ಅಷ್ಟೇ ಮುಖ್ಯವಾಗಿದೆ. ಯಾವಾಗಲೂ ನಿಧಾನವಾಗಿ ನೀರು ಕುಡಿಯಿರಿ(Drink water). ತಣ್ಣೀರು ಅಥವಾ ಐಸ್ ನೀರನ್ನು ಕುಡಿಯುವುದನ್ನು ತಪ್ಪಿಸಿ. ಪ್ರತಿ ವರ್ಷ ಒಂದು ಡಿಗ್ರಿ ಉಷ್ಣಾಂಶ(Temperature) ಜಾಸ್ತಿ ಆದರೂ, ಇನ್ನೈದು ವರ್ಷಗಳಲ್ಲಿ ತಾಪಮಾನ 50 ಡಿಗ್ರಿ ಮುಟ್ಟುತ್ತದೆ…! . ಬಿರು ಬೇಸಿಗೆ ಬಂತು ಅಂತಾ ನೂರಾ ಇಪ್ಪತ್ತು ಕೋಟಿ ಜನ ಹಿಮಾಚಲ ಪ್ರದೇಶಕ್ಕೋ(Himachal Pradesh), ಊಟಿಗೋ(Ooty) ಹೋಗಕ್ಕೆ ಸಾಧ್ಯವಿಲ್ಲ. ಬಿಸಿಲು ಹೆಚ್ಚಾಯ್ತು ಅಂತ ಜಗಲಿ ಕಟ್ಟೆ ಮೇಲೆ ಕುಳಿತು ಜ್ಯೂಸ್‌ ಕುಡಿಯುತ್ತಾ ಕುಳಿತರೆ, ಎಳನೀರು ಕುಡಿಯುತ್ತಾ ಕುಳಿತರೆ ಸಾಧ್ಯವೂ ಇಲ್ಲ. ಪ್ರಸ್ತುತ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ ಮತ್ತು ಇತರ ದೇಶಗಳು “ಶಾಖದ ಅಲೆ” ಅನುಭವಿಸುತ್ತಿವೆ.

ಹಾಗಾದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು: – ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ತಲುಪಿದಾಗ ತುಂಬಾ ತಣ್ಣನೆಯ ನೀರನ್ನು ಕುಡಿಯಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ, ಏಕೆಂದರೆ ನಮ್ಮ ಸಣ್ಣ ರಕ್ತನಾಳಗಳು ಸಿಡಿಯಬಹುದು.

ತುಂಬಾ ಬಿಸಿಯಾಗಿ ಮನೆಗೆ ಬಂದರೊಬ್ಬರು ತುಂಬಾ ಬೆವರುತ್ತಿದ್ದರು ಮತ್ತು ಬೇಗನೆ ತಣ್ಣಗಾಗಲು ಬಯಸಿದ್ದರು. ತಕ್ಷಣ ತಣ್ಣೀರಿನಿಂದ ಪಾದ ತೊಳೆದರು. ಏಕಾಏಕಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.  ಹೊರಗಿನ ಶಾಖವು 38 ° C ತಲುಪಿದಾಗ ಮತ್ತು ನೀವು ಮನೆಗೆ ಬಂದಾಗ, ತಣ್ಣೀರು ಕುಡಿಯಬೇಡಿ. ಉಗುರು ಬೆಚ್ಚಗಿನ ನೀರನ್ನು ಮಾತ್ರ ನಿಧಾನವಾಗಿ ಕುಡಿಯಿರಿ. ಬಿಸಿಲಿನಿಂದ ಮನೆಗೆ ಬಂದರೆ ತಕ್ಷಣವೇ ಕೈಕಾಲು ತೊಳೆಯಬೇಡಿ. ತೀರಾ ತಾಪಮಾನ ಇದ್ದಾಗ ತೊಳೆಯುವ ಅಥವಾ ಸ್ನಾನ ಮಾಡುವ ಮೊದಲು ಸ್ವಲ್ಪ ಸಮಯ ಕಾಯಿರಿ. ದೇಹದ ಉಷ್ಣತೆ ಒಮ್ಮೆಲೇ ತಣ್ಣದಾದರೆ ಸ್ಟ್ರೋಕ್‌ಗೆ ಒಳಗಾಗಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ.

ದಯವಿಟ್ಟು ಗಮನಿಸಿ: ದೇಹ ರಕ್ಷಣೆಗೆ ಈಗ ಮೊದಲ ಆದ್ಯತೆ ಹೀಗಾಗಿ,  ಬಿಸಿ ತಿಂಗಳುಗಳಲ್ಲಿ ಅಥವಾ ನೀವು ತುಂಬಾ ದಣಿದಿದ್ದರೆ, ತಕ್ಷಣವೇ ತಣ್ಣನೆಯ ನೀರನ್ನು ಕುಡಿಯುವುದನ್ನು ತಪ್ಪಿಸಿ ಏಕೆಂದರೆ ಇದು ರಕ್ತನಾಳಗಳು ಅಥವಾ ರಕ್ತನಾಳಗಳನ್ನು ಕಿರಿದಾಗುವಂತೆ ಮಾಡುತ್ತದೆ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.

ನೀವಿರುವ ಸ್ಥಳದಲ್ಲಿ ಮಳೆ ನೀರು ಬಸಿದು ಹೋಗದಿದ್ದರೆ, ನೀವು ಸಾವಿರದ ಐನೂರು ಅಡಿ ಬೋರ್ ವೆಲ್ ಕೊರೆಸಿ ಏನು ಪ್ರಯೋಜನ? ನೀರು ಸಂರಕ್ಷಣೆಗೆ ಮೊದಲ ಆದ್ಯತೆ ನೀಡಲೇಬೇಕಿದೆ. ಇದಕ್ಕಾಗಿ ಕ್ರಮಗಳು ಅಗತ್ಯವಿದೆ. ರಸ್ತೆ ಅಗಲೀಕರಣಕ್ಕೆ ಮುಂದಿನ ಐದು ವರ್ಷಗಳಲ್ಲಿ ಎಲ್ಲೆಲ್ಲಿ ಮರ ಕಡಿಯಬೇಕು ಅನ್ನುವುದು ಮೊದಲ ಸಿದ್ಧತೆಯಾದರೆ, ಉಳಿದ ಕಡೆ ಮರಗಳನ್ನು ಉಳಿಸುವುದು ಹಾಗೂ ಬೆಳೆಸುವ ಕೆಲಸ ತಕ್ಷಣ ಜಾರಿಯಾಗಲಿ. ಬಯಲುಸೀಮೆಗೆ “ರೈನ್ ಟ್ರೀ” ಅಥವಾ ಅಂಟಿನ ಕಾಯಿ ಬಿಡುವ ಮರ ಒಳ್ಳೇಯದು. ಅತಿ ಕಡಿಮೆ ನೀರಿದ್ದರೂ ಬೆಳೆದು, ವಿಶಾಲವಾಗಿ ಹರಡಿಕೊಳ್ಳುತ್ತದೆ. ಬಿಳಲು ಬಿಡದ ಆಲ, ಹುಣಸೆ, ಅರಳಿ ಇನ್ನೂ ಹಲವು ತಳಿಯ ಮರಗಳು ನಗರ ಪ್ರದೇಶಕ್ಕೆ ಬೆಳೆಸಲಿಕ್ಕೆ ಅಂತಲೇ ಇವೆ.

ಮರಗಳನ್ನ ನೋಡಿಕೊಳ್ಳುವ ಜವಾಬ್ದಾರಿ ನಗರ ಪಾಲಿಕೆಯದು, ಪುರಸಭೆಯದು ಇಲ್ಲಾ ಗ್ರಾಮ ಪಂಚಾಯತಿದಲ್ಲ. ಜನ ಅವುಗಳನ್ನ ಪಾಲನೆ ಪೋಷಣೆ ಮಾಡಬೇಕು. ಏಕೆಂದರೆ, ದಾರಿಗಳಲ್ಲಿ ಅಡ್ಡಾಡೋರು, ಸುಸ್ತಾಗೋರು, ಮೂರ್ಛೆ ಹೋಗೋರು, ಸಾಯೋರು ಸಾಮಾನ್ಯ ಜನ. ಕಾರ್ಪೊರೇಟರುಗಳು ಮಿನಿಸ್ಟರುಗಳು ಏಸಿ ಕಾರುಗಳಲ್ಲಿ ಅಡ್ಡಾಡುತ್ತಾರೆ. ಆಫೀಸರುಗಳು ಏಸಿಯಲ್ಲೋ ಫ್ಯಾನಿನಡಿಯಲ್ಲೋ ಕುಳಿತು ಬಿಸಿಲು ತಾಕದಂತೆ ಕೆಲಸ ಮಾಡುತ್ತಾರೆ. ಯಾರಿಗೆ ಬೇಕಾಗಿದೆಯೋ ಅವರೇ ಕೈ ಕೆಸರು ಮಾಡಿಕೊಳ್ಳಬೇಕು.  ತೆಂಗಿನಕಾಯಿ ಮಾರುವವರು, ತರಕಾರಿ ಮಾರುವವರು, ಸಂತೆಗಳಲ್ಲಿ ಮಾರುವವರು ಮತ್ತು ಇನ್ನಿತರೆ ಬೀದಿ ಬದಿ ಮಾರಾಟಗಾರರು “ಸಿಂಗಾಪುರ ಚೆರಿ” ಮರಗಳನ್ನ ಹಾಕಿ. ಅತಿ ಕಡಿಮೆ ಸಮಯ ಅಂದ್ರೆ ಎರಡು ವರ್ಷಗಳಲ್ಲೇ ಐದು ಅಡಿ ಎತ್ತರಕ್ಕೆ ಬೆಳೆದು ಛತ್ರಿಯಂತೆ ಅಗಲವಾಗುತ್ತದೆ.

ಕೃಷಿ ಭೂಮಿಯಲ್ಲಿ ಸಾಕಷ್ಟು ಗಿಡ ನೆಡಿ. ಅನಿವಾರ್ಯವಾದರೆ ಒಂದು ಮರ ಕಡಿದರೆ 10 ಗಿಡ ನೆಡುವ ಯೋಜನೆ ಹಾಕಿಕೊಳ್ಳಿ. ನೀರಿನ ಬಳಕೆಯಲ್ಲಿ ಮಿತಿ ಇರಲಿ ಹಾಗೂ ತೀರಾ ಅನಿವಾರ್ಯವಾದರೆ ಕೊಳವೆ ಬಾವಿ ತೆಗೆಯಿರಿ. ಅನುಕೂಲ ಇದ್ದವರು ಕೆರೆ, ಬಾವಿಯನ್ನೇ ತೋಡಿದರೆ ಉತ್ತಮ.

(ಮೂಲ ಬರಹಗಾರರ ಮಾಹಿತಿ ಇಲ್ಲ-ಸಂಪಾದನೆ ದ ರೂರಲ್‌ ಮಿರರ್.ಕಾಂ ಕಾಳಜಿ )

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

9 hours ago

ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649

9 hours ago

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ

ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

18 hours ago

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

1 day ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

1 day ago

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 day ago