Advertisement
Opinion

ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |

Share

ತಾಪಮಾನ ಏರಿಕೆಯಾಗುತ್ತಿದೆ. ಸತತವಾಗಿ 40 ಡಿಗ್ರಿಗಿಂತ ಅಧಿಕವಾಗಿದೆ ತಾಪಮಾನ. ಅದೊಂದು ಸಾಮಾನ್ಯ ಉಷ್ಣತೆ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ(Heat Wave) ಸಿದ್ಧರಾಗಬೇಕಿದೆ. ಹಾಗಿದ್ದರೆ ಏನು ಮಾಡಬೇಕು ಮುಂದೆ ಎಂಬ ಯೋಚನೆ ಅಗತ್ಯವಿದೆ. ಜಗಲಿ ಕಟ್ಟೆಯಲ್ಲಿ ಕುಳಿತು ಹೋ.. ಹೋ.. ತಾಪಮಾನ ಎಂದು ತಣ್ಣೀರು ಕುಡಿದರೆ ಸಾಲದು. ಯೋಜನೆಗಳು ಅಗತ್ಯವಿದೆ.

Advertisement
Advertisement

ತಾಪಮಾನದ ಸಂದರ್ಭ ದೇಹವನ್ನು ಕಾಪಾಡುವುದೂ ಅಷ್ಟೇ ಮುಖ್ಯವಾಗಿದೆ. ಯಾವಾಗಲೂ ನಿಧಾನವಾಗಿ ನೀರು ಕುಡಿಯಿರಿ(Drink water). ತಣ್ಣೀರು ಅಥವಾ ಐಸ್ ನೀರನ್ನು ಕುಡಿಯುವುದನ್ನು ತಪ್ಪಿಸಿ. ಪ್ರತಿ ವರ್ಷ ಒಂದು ಡಿಗ್ರಿ ಉಷ್ಣಾಂಶ(Temperature) ಜಾಸ್ತಿ ಆದರೂ, ಇನ್ನೈದು ವರ್ಷಗಳಲ್ಲಿ ತಾಪಮಾನ 50 ಡಿಗ್ರಿ ಮುಟ್ಟುತ್ತದೆ…! . ಬಿರು ಬೇಸಿಗೆ ಬಂತು ಅಂತಾ ನೂರಾ ಇಪ್ಪತ್ತು ಕೋಟಿ ಜನ ಹಿಮಾಚಲ ಪ್ರದೇಶಕ್ಕೋ(Himachal Pradesh), ಊಟಿಗೋ(Ooty) ಹೋಗಕ್ಕೆ ಸಾಧ್ಯವಿಲ್ಲ. ಬಿಸಿಲು ಹೆಚ್ಚಾಯ್ತು ಅಂತ ಜಗಲಿ ಕಟ್ಟೆ ಮೇಲೆ ಕುಳಿತು ಜ್ಯೂಸ್‌ ಕುಡಿಯುತ್ತಾ ಕುಳಿತರೆ, ಎಳನೀರು ಕುಡಿಯುತ್ತಾ ಕುಳಿತರೆ ಸಾಧ್ಯವೂ ಇಲ್ಲ. ಪ್ರಸ್ತುತ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ ಮತ್ತು ಇತರ ದೇಶಗಳು “ಶಾಖದ ಅಲೆ” ಅನುಭವಿಸುತ್ತಿವೆ.

ಹಾಗಾದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು: – ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ತಲುಪಿದಾಗ ತುಂಬಾ ತಣ್ಣನೆಯ ನೀರನ್ನು ಕುಡಿಯಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ, ಏಕೆಂದರೆ ನಮ್ಮ ಸಣ್ಣ ರಕ್ತನಾಳಗಳು ಸಿಡಿಯಬಹುದು.

ತುಂಬಾ ಬಿಸಿಯಾಗಿ ಮನೆಗೆ ಬಂದರೊಬ್ಬರು ತುಂಬಾ ಬೆವರುತ್ತಿದ್ದರು ಮತ್ತು ಬೇಗನೆ ತಣ್ಣಗಾಗಲು ಬಯಸಿದ್ದರು. ತಕ್ಷಣ ತಣ್ಣೀರಿನಿಂದ ಪಾದ ತೊಳೆದರು. ಏಕಾಏಕಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.  ಹೊರಗಿನ ಶಾಖವು 38 ° C ತಲುಪಿದಾಗ ಮತ್ತು ನೀವು ಮನೆಗೆ ಬಂದಾಗ, ತಣ್ಣೀರು ಕುಡಿಯಬೇಡಿ. ಉಗುರು ಬೆಚ್ಚಗಿನ ನೀರನ್ನು ಮಾತ್ರ ನಿಧಾನವಾಗಿ ಕುಡಿಯಿರಿ. ಬಿಸಿಲಿನಿಂದ ಮನೆಗೆ ಬಂದರೆ ತಕ್ಷಣವೇ ಕೈಕಾಲು ತೊಳೆಯಬೇಡಿ. ತೀರಾ ತಾಪಮಾನ ಇದ್ದಾಗ ತೊಳೆಯುವ ಅಥವಾ ಸ್ನಾನ ಮಾಡುವ ಮೊದಲು ಸ್ವಲ್ಪ ಸಮಯ ಕಾಯಿರಿ. ದೇಹದ ಉಷ್ಣತೆ ಒಮ್ಮೆಲೇ ತಣ್ಣದಾದರೆ ಸ್ಟ್ರೋಕ್‌ಗೆ ಒಳಗಾಗಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ.

ದಯವಿಟ್ಟು ಗಮನಿಸಿ: ದೇಹ ರಕ್ಷಣೆಗೆ ಈಗ ಮೊದಲ ಆದ್ಯತೆ ಹೀಗಾಗಿ,  ಬಿಸಿ ತಿಂಗಳುಗಳಲ್ಲಿ ಅಥವಾ ನೀವು ತುಂಬಾ ದಣಿದಿದ್ದರೆ, ತಕ್ಷಣವೇ ತಣ್ಣನೆಯ ನೀರನ್ನು ಕುಡಿಯುವುದನ್ನು ತಪ್ಪಿಸಿ ಏಕೆಂದರೆ ಇದು ರಕ್ತನಾಳಗಳು ಅಥವಾ ರಕ್ತನಾಳಗಳನ್ನು ಕಿರಿದಾಗುವಂತೆ ಮಾಡುತ್ತದೆ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.

ನೀವಿರುವ ಸ್ಥಳದಲ್ಲಿ ಮಳೆ ನೀರು ಬಸಿದು ಹೋಗದಿದ್ದರೆ, ನೀವು ಸಾವಿರದ ಐನೂರು ಅಡಿ ಬೋರ್ ವೆಲ್ ಕೊರೆಸಿ ಏನು ಪ್ರಯೋಜನ? ನೀರು ಸಂರಕ್ಷಣೆಗೆ ಮೊದಲ ಆದ್ಯತೆ ನೀಡಲೇಬೇಕಿದೆ. ಇದಕ್ಕಾಗಿ ಕ್ರಮಗಳು ಅಗತ್ಯವಿದೆ. ರಸ್ತೆ ಅಗಲೀಕರಣಕ್ಕೆ ಮುಂದಿನ ಐದು ವರ್ಷಗಳಲ್ಲಿ ಎಲ್ಲೆಲ್ಲಿ ಮರ ಕಡಿಯಬೇಕು ಅನ್ನುವುದು ಮೊದಲ ಸಿದ್ಧತೆಯಾದರೆ, ಉಳಿದ ಕಡೆ ಮರಗಳನ್ನು ಉಳಿಸುವುದು ಹಾಗೂ ಬೆಳೆಸುವ ಕೆಲಸ ತಕ್ಷಣ ಜಾರಿಯಾಗಲಿ. ಬಯಲುಸೀಮೆಗೆ “ರೈನ್ ಟ್ರೀ” ಅಥವಾ ಅಂಟಿನ ಕಾಯಿ ಬಿಡುವ ಮರ ಒಳ್ಳೇಯದು. ಅತಿ ಕಡಿಮೆ ನೀರಿದ್ದರೂ ಬೆಳೆದು, ವಿಶಾಲವಾಗಿ ಹರಡಿಕೊಳ್ಳುತ್ತದೆ. ಬಿಳಲು ಬಿಡದ ಆಲ, ಹುಣಸೆ, ಅರಳಿ ಇನ್ನೂ ಹಲವು ತಳಿಯ ಮರಗಳು ನಗರ ಪ್ರದೇಶಕ್ಕೆ ಬೆಳೆಸಲಿಕ್ಕೆ ಅಂತಲೇ ಇವೆ.

ಮರಗಳನ್ನ ನೋಡಿಕೊಳ್ಳುವ ಜವಾಬ್ದಾರಿ ನಗರ ಪಾಲಿಕೆಯದು, ಪುರಸಭೆಯದು ಇಲ್ಲಾ ಗ್ರಾಮ ಪಂಚಾಯತಿದಲ್ಲ. ಜನ ಅವುಗಳನ್ನ ಪಾಲನೆ ಪೋಷಣೆ ಮಾಡಬೇಕು. ಏಕೆಂದರೆ, ದಾರಿಗಳಲ್ಲಿ ಅಡ್ಡಾಡೋರು, ಸುಸ್ತಾಗೋರು, ಮೂರ್ಛೆ ಹೋಗೋರು, ಸಾಯೋರು ಸಾಮಾನ್ಯ ಜನ. ಕಾರ್ಪೊರೇಟರುಗಳು ಮಿನಿಸ್ಟರುಗಳು ಏಸಿ ಕಾರುಗಳಲ್ಲಿ ಅಡ್ಡಾಡುತ್ತಾರೆ. ಆಫೀಸರುಗಳು ಏಸಿಯಲ್ಲೋ ಫ್ಯಾನಿನಡಿಯಲ್ಲೋ ಕುಳಿತು ಬಿಸಿಲು ತಾಕದಂತೆ ಕೆಲಸ ಮಾಡುತ್ತಾರೆ. ಯಾರಿಗೆ ಬೇಕಾಗಿದೆಯೋ ಅವರೇ ಕೈ ಕೆಸರು ಮಾಡಿಕೊಳ್ಳಬೇಕು.  ತೆಂಗಿನಕಾಯಿ ಮಾರುವವರು, ತರಕಾರಿ ಮಾರುವವರು, ಸಂತೆಗಳಲ್ಲಿ ಮಾರುವವರು ಮತ್ತು ಇನ್ನಿತರೆ ಬೀದಿ ಬದಿ ಮಾರಾಟಗಾರರು “ಸಿಂಗಾಪುರ ಚೆರಿ” ಮರಗಳನ್ನ ಹಾಕಿ. ಅತಿ ಕಡಿಮೆ ಸಮಯ ಅಂದ್ರೆ ಎರಡು ವರ್ಷಗಳಲ್ಲೇ ಐದು ಅಡಿ ಎತ್ತರಕ್ಕೆ ಬೆಳೆದು ಛತ್ರಿಯಂತೆ ಅಗಲವಾಗುತ್ತದೆ.

ಕೃಷಿ ಭೂಮಿಯಲ್ಲಿ ಸಾಕಷ್ಟು ಗಿಡ ನೆಡಿ. ಅನಿವಾರ್ಯವಾದರೆ ಒಂದು ಮರ ಕಡಿದರೆ 10 ಗಿಡ ನೆಡುವ ಯೋಜನೆ ಹಾಕಿಕೊಳ್ಳಿ. ನೀರಿನ ಬಳಕೆಯಲ್ಲಿ ಮಿತಿ ಇರಲಿ ಹಾಗೂ ತೀರಾ ಅನಿವಾರ್ಯವಾದರೆ ಕೊಳವೆ ಬಾವಿ ತೆಗೆಯಿರಿ. ಅನುಕೂಲ ಇದ್ದವರು ಕೆರೆ, ಬಾವಿಯನ್ನೇ ತೋಡಿದರೆ ಉತ್ತಮ.

(ಮೂಲ ಬರಹಗಾರರ ಮಾಹಿತಿ ಇಲ್ಲ-ಸಂಪಾದನೆ ದ ರೂರಲ್‌ ಮಿರರ್.ಕಾಂ ಕಾಳಜಿ )

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

11 hours ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

12 hours ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

12 hours ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

12 hours ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

12 hours ago

ಜಾಗತಿಕ ಒತ್ತಡ – ಗ್ರಾಮೀಣ ಜೀವನೋಪಾಯ | ಅಡಿಕೆ ಕುರಿತ ನಿಜವಾದ ಚರ್ಚೆ ಈಗ ಆರಂಭವಾಗಬೇಕು

ಭಾರತವು ಜಗತ್ತಿನ ಅತಿದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಯ ಸುಮಾರು 63…

13 hours ago