ಅನುಕ್ರಮ

ಭಾವಗೀತೆ | ತಂಗಾಳಿ ತಂದ ಬಯಕೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಮಂದ ಮಾರುತ ಬೀಸಿ ಬಂದಿದೆ
ತಂಪು ಹಿತವನು ನೀಡುತ
ಬೆಂದ ಮನಸಿಗೆ ಹಾಸ ತಂದಿದೆ
ಇಂಪು ಗಾನವ ಹಾಡುತ….. ||
ಸುಪ್ತವಾಗಿರೊ ಬಯಕೆ ಉದಿಸಿದೆ
ಹಸ್ತ ಚಾಚುತ ನಿನ್ನೆಡೆ
ಸಪ್ತ ಸ್ವರಗಳ ನಲಿಸಿ ಮೆರೆದಿದೆ
ಚಿಂತೆ ಮರೆಸುತ ಮುನ್ನಡೆ…. ||
ಬಾನಿನಂಚಲಿ ಮೋಡ ಸರಿಯಲು
ಮನಸು ಬೇಗುದಿ ಕಳೆದಿದೆ
ತೇಲಿ ಬಂದಿಹ ಬಾನ ಹಕ್ಕಿಯು
ಕನಸು ಚಿತ್ರಿಸಿ ಹೋಗಿದೆ…. ||
ನಾಳೆ ಬಾಳಿನ ಸುಖವ ಕಾಣುತ
ಮನಕೆ ಸಂತಸ ತಂದಿದೆ
ಹಾಳೆ ಸಾಲಲಿ ಒಲವ ತುಂಬುತ
ಒನಪು ದಿನವಿದು ಎಂದಿದೆ… ||
ಬೇಲಿ ಇಲ್ಲದ ಬದುಕು ಎನ್ನದು
ಬಂಧಿಯಾಗುವ ಆಸೆಯು
ತೋಳ ಚಾಚಲು ಮುಂದೆ ಬರುವೆಯ
ಸೇರಿಕೊಳ್ಳುವ ಬಯಕೆಯು… ||
# ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |

ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…

5 hours ago

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…

8 hours ago

ಗುಡುಗು ಸಿಡಿಲಿನ ಮುನ್ಸೂಚನೆ ಬಗ್ಗೆ ಆಪ್‌ನಲ್ಲಿ ಮಾಹಿತಿ

ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…

8 hours ago

ಸತತ ಸೋಲಿನ ಬಳಿಕ ಪುಟಿದೇಳುವರು ಈ ರಾಶಿಯವರು…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

9 hours ago

ಹೊಸರುಚಿ | ಗುಜ್ಜೆ ಸುಕ್ಕಾ

ಗುಜ್ಜೆ ಸುಕ್ಕಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ ಚಿಕ್ಕ ದಾಗಿ ಕಟ್…

11 hours ago

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

1 day ago