Advertisement
ಸುದ್ದಿಗಳು

ಮಹಿಳೆಯರಿಗಾಗಿ ಬಿಮಾ ಸಖಿ ಯೋಜನೆ

Share

ಮಹಿಳೆಯರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಸರಕಾರ ಹಲವು ಯೋಜನೆಯನ್ನು ಜಾರಿಗೊಳಿಸಿದೆ. ಅದರಲ್ಲಿ ಈ ಬಿಮಾ ಸಖಿ ಯೋಜನೆಯೂ ಒಂದು. ಈ ಯೋಜನೆಯ ಮೂಲಕ ಮಹಿಳೆಯರಿಗೆ ತರಬೇತಿ, ವೃತ್ತಿ ಕೌಶಲ್ಯ ಮತ್ತು ಹಣಕಾಸಿನ ವಿತರಣೆ ನೀಡಲಾಗುತ್ತದೆ. ಇದರಿಂದ ಮಹಿಳೆಯರಿಗೆ ಆದಾಯದ ಗಳಿಸಲು ಸಹಾಯಕವಾಗಿದೆ. ದೇಶದ ಅತಿದೊಡ್ಡ ಸರಕಾರ ವಿಮಾ ಸಂಸ್ಥೆ, ಲೈಫ್ ಇನ್ಸೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಇದನ್ನು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದೆ.

ಈ ಬಿಮಾ ಯೋಜನೆಯಲ್ಲಿ ಆದಾಯದ ದೃಷ್ಟಿಯಲ್ಲಿ ನೋಡುವುದಾದರೆ ತುಂಬಾ ಅನುಕೂಲಕರವಾಗಿದೆ. ಹೇಗೆಂದರೆ ಮೊದಲ ವರ್ಷಕ್ಕೆ ತಂಗಳಿಗೆ 7000 ರೂ ಎರಡನೇ ವರ್ಷಕ್ಕೆ 6000 ರೂ ಮೂರನೇ ವರ್ಷ 5000 ರೂ ಗಳಂತೆ ಸ್ಟೈಪೆಂಡ್ ಸಿಗುತ್ತದೆ. ಜೊತೆಗೆ ವಿಮೆ ಪಾಲಿಸಿಗಳ ಮಾರಾಟದ ಮೇಳೆ ಕಮಿಷನ್ ಹಾಗೂ ಬೋನಸ್ ಗಳ ಮೂಲಕ 10,000 ರಿಂದ 30,000 ರೂ ಮಾನಿಕ ಆದಾಯ ಗಳಿಸುವ ಸಾಧ್ಯತೆಗಳಿರುತ್ತದೆ.

ಬಿಮಾ ಯೋಜನೆಯಲ್ಲಿ ಬೇಕಾಗಿರುವ ಆರ್ಹತೆಗಳು:

  • ಭಾರತೀಯ ನಾಗರಿಕನಾಗಿರಬೇಕು.
  • 18ರಿಂದ 70ವಯಸ್ಸಿನ ನಡುವೆ ಇರಬೇಕು.
  • ಕನಿಷ್ಠ 10 ನೇ ತರಗತಿ ಪಾಸ್ ಆಗಿರಬೇಕು.
  • ಹಿಂದಿನ ಎಲ್ಐಸಿ ಏಜೆಂಟ್ ಅಥವಾ ಕುಟುಂಬ ಸದಸ್ಯರಾಗಿರಬಾರದು.
  • ಹಿಂದುಳಿದ ವರ್ಗದ ಮಹಿಳೆಯರಿಗೆ ವಿಶೇಷ ಆದ್ಯತೆ.

ಬೇಕಾದ ದಾಖಲೆಗಳು:

  • 10ನೇ ತರಗತಿ ಅಂಕಪಟ್ಟಿ
  • ಅಧಿಕೃತ ಗುರುತು ಚೀಟಿ
  • ಪಾಸ್ಪೋರ್ ಸೈಜ್ ಪೋಟೋಗೂ
  • ಬ್ಯಾಂಕ್ ಖಾತೆ ವಿವರಗಳು
  • ಆಧಾರ್ ಕಾರ್ಡ್
  • ಜಮೆಯ ಮಾರ್ಗಸೂಚಿ

ಅರ್ಜಿ ಸಲ್ಲಿಸುವ ವಿಧಾನ:

  • ಆನ್ ಲೈನ್ ವಿಧಾನ: ಎಲ್ಐಸಿ ಅಧಿಕೃತ ವೆಬ್ ಸೈಟ್ lcindia̤in ನಲ್ಲಿ ವಿಭಾಗದಿಂದ, ಓಟಿಪಿ ಮೂಲಕ ಲಾಗಿನ್ ಮಾಡಿ.
  • ಆಪ್ ಲೈನ್ ವಿಧಾನ: ಸಮೀಪದ ಎಲ್ಐಸಿ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸಿಬ್ಬಂದಿ ನೆರವು ಸಿಗುತ್ತದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

13 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

22 hours ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

22 hours ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

1 day ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

1 day ago