ಕಸ್ಟಮ್ಸ್‌ ಗೋದಾಮಿನಿಂದ ಅಡಿಕೆ ಹಾಗೂ ಕಾಳುಮೆಣಸು ಕಳವು |

December 27, 2024
6:56 AM
ಕಸ್ಟಮ್ಸ್‌ ಗೋದಾಮಿನಿಂದ ಸುಮಾರು 40 ಟನ್‌ ಕಾಳುಮೆಣಸು ಹಾಗೂ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. (Photo-File)

ಮುಂಬೈಯ ಪನ್ವೇಲ್‌ ಪ್ರದೇಶದಲ್ಲಿನ ಕಸ್ಟಮ್ಸ್‌ ಗೋದಾಮಿನಿಂದ ಸುಮಾರು 35 ಮಂದಿ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ 40 ಟನ್‌ ಕಾಳುಮೆಣಸು ಹಾಗೂ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದಾಖಲಾದ ಪ್ರಕರಣದಂತೆ ಸುಮಾರು 35 ಮಂದಿಯ ತಂಡವು ಟ್ರಕ್‌ ಹಾಗೂ ಇತರ ವಾಹನಗಳಲ್ಲಿ ಆಗಮಿಸಿ ಭದ್ರತಾ ಸಿಬಂದಿಯ ಮೇಲೆ ಹಲ್ಲೆ ನಡೆಸಿ, ಬೆದರಿಸಿ ಗೋದಾಮಿನ ಬೀಗ ಒಡೆದು ಅಡಿಕೆ ಹಾಗೂ ಕಾಳುಮೆಣಸು ಸಾಗಿಸಲಾಗಿದೆ. 3 ಕಂಪನಿಗಳ ಸುಮಾರು 626 ಟನ್‌ ಗಳಷ್ಟು ಕಾಳುಮೆಣಸು ಹಾಗೂ ಅಡಿಕೆಯ 2022 ರಿಂದ ಕಸ್ಟಮ್ಸ್‌ ಕ್ಲಿಯರ್‌ಗಾಗಿ ಗೋದಾಮಿನಲ್ಲಿ ಸಂಗ್ರಹವಾಗಿತ್ತು.ಈ ಹಿಂದೆ ಕೂಡಾ ಇಂತಹದ್ದೇ ಪ್ರಕರಣವು 2022 ರಲ್ಲಿ ಹಾಗೂ 2023 ರಲ್ಲಿ ನಡೆದಿತ್ತು. ಕಸ್ಟಮ್ಸ್‌ ಗೋದಾಮಿನಿಂದ ಕಳವು ನಡೆದಿತ್ತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ |13-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ – ಮುಂದಿನ 10 ದಿನ ಜೋರು ಮಳೆ ಇಲ್ಲ
July 13, 2026
2:42 PM
by: ಸಾಯಿಶೇಖರ್ ಕರಿಕಳ
ಅಮರನಾಥದ ಹಿಮ ಶಿವಲಿಂಗ 90% ಕರಗಿತು…! ಹವಾಮಾನ ಬದಲಾವಣೆಯೇ ಕಾರಣವೇ?
July 13, 2026
7:17 AM
by: ದ ರೂರಲ್ ಮಿರರ್.ಕಾಂ
16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧ – ಆಸ್ಟ್ರೇಲಿಯಾದ ಕ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ
July 12, 2026
9:03 PM
by: ದ ರೂರಲ್ ಮಿರರ್.ಕಾಂ
ಎಲ್‌ ನಿನೊ ಎಫೆಕ್ಟ್‌ – ಮುಂದಿನ ವರ್ಷ ಮತ್ಸ್ಯೋದ್ಯಮಕ್ಕೆ ಸಂಕಷ್ಟ?
July 12, 2026
8:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror