ಮುಂಬೈಯ ಪನ್ವೇಲ್ ಪ್ರದೇಶದಲ್ಲಿನ ಕಸ್ಟಮ್ಸ್ ಗೋದಾಮಿನಿಂದ ಸುಮಾರು 35 ಮಂದಿ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ 40 ಟನ್ ಕಾಳುಮೆಣಸು ಹಾಗೂ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದಾಖಲಾದ ಪ್ರಕರಣದಂತೆ ಸುಮಾರು 35 ಮಂದಿಯ ತಂಡವು ಟ್ರಕ್ ಹಾಗೂ ಇತರ ವಾಹನಗಳಲ್ಲಿ ಆಗಮಿಸಿ ಭದ್ರತಾ ಸಿಬಂದಿಯ ಮೇಲೆ ಹಲ್ಲೆ ನಡೆಸಿ, ಬೆದರಿಸಿ ಗೋದಾಮಿನ ಬೀಗ ಒಡೆದು ಅಡಿಕೆ ಹಾಗೂ ಕಾಳುಮೆಣಸು ಸಾಗಿಸಲಾಗಿದೆ. 3 ಕಂಪನಿಗಳ ಸುಮಾರು 626 ಟನ್ ಗಳಷ್ಟು ಕಾಳುಮೆಣಸು ಹಾಗೂ ಅಡಿಕೆಯ 2022 ರಿಂದ ಕಸ್ಟಮ್ಸ್ ಕ್ಲಿಯರ್ಗಾಗಿ ಗೋದಾಮಿನಲ್ಲಿ ಸಂಗ್ರಹವಾಗಿತ್ತು.ಈ ಹಿಂದೆ ಕೂಡಾ ಇಂತಹದ್ದೇ ಪ್ರಕರಣವು 2022 ರಲ್ಲಿ ಹಾಗೂ 2023 ರಲ್ಲಿ ನಡೆದಿತ್ತು. ಕಸ್ಟಮ್ಸ್ ಗೋದಾಮಿನಿಂದ ಕಳವು ನಡೆದಿತ್ತು.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…