ಕೊಕ್ಕೋ ಬಳಿಕ ಈಗ ಕಾಳುಮೆಣಸು ಧಾರಣೆ ಏರಿಕೆ ನಿರೀಕ್ಷೆ | ಅಂತರಾಷ್ಟ್ರೀಯ ಧಾರಣೆಯೂ ಏರಿಕೆಯ ಹಾದಿಯಲ್ಲಿ | 615 ರೂಪಾಯಿ ತಲಪಿದ ಧಾರಣೆ | ಏರಿಕೆಗೆ ಕಾರಣವೇನು..?

May 21, 2024
3:04 PM
ಕಾಳುಮೆಣಸಿನ ಧಾರಣೆ ಏರಿಕೆಯಾಗಿದೆ. ಸದ್ಯ 615 ರೂಪಾಯಿಗೆ ಕಾಳುಮೆಣಸು ಖರೀದಿ ಆರಂಭವಾಗಿದೆ.

ಕಾಳುಮೆಣಸು ಧಾರಣೆ ಏರಿಕೆಯ ಹಾದಿಯಲ್ಲಿ ಸಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕಾಳುಮೆಣಸು ಧಾರಣೆ ಏರಿಕೆಯಾಗುತ್ತಿದೆ. ಕೊಕೋ ಬಳಿಕ ಇದೀಗ ಕಾಳುಮೆಣಸು ಕೂಡಾ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಕಾರಣ, ಇಳುವರಿ ಕೊರತೆ, ಹವಾಮಾನ ಪರಿಸ್ಥಿತಿಗಳಿಂದಾಗಿ ಉತ್ಪಾದನೆಯೂ ಕುಸಿತ ಕಂಡಿದೆ. ಹೀಗಾಗಿ ಈಗ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದೆ ಧಾರಣೆ ಏರಿಕೆಯಾಗುತ್ತಿದೆ. ಭಾರತದಲ್ಲಿ 590-600 ರೂಪಾಯಿ ಆಸುಪಾಸಿನಲ್ಲಿ ಸದ್ಯದ ಧಾರಣೆ ಇತ್ತು, ಈಗ 615 ರೂಪಾಯಿ ಸದ್ಯದ ಧಾರಣೆಯಾಗಿದೆ.…….ಮುಂದೆ ಓದಿ…..

ಕೊಕ್ಕೋ ಬಳಿಕ ಇದೀಗ ಕಾಳುಮೆಣಸು ಧಾರಣೆ ಏರಿಕೆ ಕಂಡಿದೆ. ಕೊಕ್ಕೋ ಮಾದರಿಯಲ್ಲಿಯೇ ಇಳುವರಿ ಕೊರತೆಯ ಕಾರಣದಿಂದ ಧಾರಣೆ ಏರಿಕೆ ಕಾಣುತ್ತಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ, ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಧಾರಣೆ ಏರಿಕೆಯಾಗುತ್ತಿದೆ. ಸದ್ಯ 615 ರೂಪಾಯಿಗೆ ಕಾಳುಮೆಣಸು ಖರೀದಿ ನಡೆಯುತ್ತಿದೆ.

ವಿಯೆಟ್ನಾಂನಲ್ಲಿ ಸಾರ್ವಕಾಲಿಕ ದಾಖಲೆಯ ಧಾರಣೆ ತಲಪಿದೆ.ಕಳೆದ ವಾರಕ್ಕಿಂತ ಈ ವಾರದ ಧಾರಣೆ ಶೇ.40 ರಷ್ಟು ಏರಿಕೆಯಾಗಿದೆ. ಯೂರೋಪ್, ಯುಎಸ್ ಮತ್ತು ಚೀನಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಪೂರೈಕೆ ಕೊರತೆ ಮತ್ತು ಹೆಚ್ಚಿದ ಬೇಡಿಕೆಯ ಕಾರಣದಿಂದ ಕಾಳುಮೆಣಸು ಬೆಲೆ  ಏರಿಕೆಗೆ ತಜ್ಞರು ಕಾರಣವೆಂದು ಹೇಳುತ್ತಾರೆ.

ಈಗ ಭಾರತದಲ್ಲೂ ಕಾಳುಮೆಣಸು ಬೇಡಿಕೆ ಕಂಡುಬಂದಿದ್ದು, ಧಾರಣೆ ಹೆಚ್ಚಾಗುತ್ತಿದೆ. ವಿಯೆಟ್ನಾಂನಲ್ಲಿ ಕಾಳುಮೆಣಸು ಕೊರತೆಯ ಕಾರಣದಿಂದ ಈಗಾಗಲೇ ಬ್ರೆಜಿಲ್‌, ಇಂಡೋನೇಷ್ಯಾ ಮತ್ತು ಕಾಂಬೋಡಿಯಾದಿಂದ ಕಾಳುಮೆಣಸು ಆಮದು ಮಾಡಿಕೊಳ್ಳಲು ಪ್ರಾರಂಭಿಸಲಾಗಿದೆ.

ಪ್ರಮುಖವಾಗಿ ಕಾಳುಮೆಣಸು ಉತ್ಪಾದಕ ದೇಶಗಳಲ್ಲಿ ಹವಾಮಾನ ಪರಿಸ್ಥಿತಿಗಳಿಂದಾಗಿ ಕಾಳುಮೆಣಸು ಬೆಳೆ ಕೈಕೊಟ್ಟಿದೆ. ಅದರ ಜೊತೆಗೆ ಈ ಹಿಂದೆ ಕಾಳುಮೆಣಸು ಧಾರಣೆ ಕಡಿಮೆ ಇದ್ದ ಕಾರಣದಿಂದ ರೈತರು ಇತರ ಬೆಳೆಗಳಿಗೆ ಅದರಲ್ಲೂಹಣ್ಣಿನ ಬೆಳೆಗಳತ್ತ ತಮ್ಮ ಕೃಷಿಯನ್ನು ಬದಲಾಯಿಸಿದ್ದಾರೆ.ಈಗಿನ ಪರಿಸ್ಥಿತಿಯಲ್ಲಿ ವಿಯೆಟ್ನಾಂಗೆ ಮುಂದಿನ 2-3 ವರ್ಷಗಳ ಕಾಲ ಕಾಳುಮೆಣಸು ಕೊರತೆ ಕಾಡಬಹುದು, ಅದರ ಜೊತೆಗೆ ಇತರ ಕಾಳುಮೆಣಸು ಬೆಳೆಯುವ ದೇಶದಲ್ಲೂ ಹವಾಮಾನ ಪರಿಸ್ಥಿತಿ ಕೈಕೊಟ್ಟಿದೆ.

ವಿಯೆಟ್ನಾಂನ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕರಿಮೆಣಸು ರಫ್ತು 84,000 ಟನ್‌ಗಳಷ್ಟಿತ್ತು, ಇದು ಕಳೆದ ವರ್ಷದಿಂದ ವರ್ಷಕ್ಕೆ 18.3 ಶೇಕಡಾ ರಷ್ಟು ಕಡಿಮೆಯಾಗಿದೆ, ಆದರೆ 11.5 ರಷ್ಟು ಧಾರಣೆಯಲ್ಲಿ ಏರಿಕೆಯಾಗಿದೆ. ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದ್ದು, ಧಾರಣೆ ಇನ್ನಷ್ಟು ಏರಿಕೆ ನಿಶ್ಚಿತವಾಗಿದೆ. ಭಾರತದಲ್ಲೂ ಈಗ ಧಾರಣೆ ಏರಿಕೆಯ ಸರದಿ ಶುರುವಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ
April 16, 2026
7:25 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಮುಕ್ತ ಕೃಷಿಗೆ ಪ್ರಧಾನಿ ಮೋದಿ ಕರೆ
April 16, 2026
7:06 AM
by: ಮಿರರ್‌ ಡೆಸ್ಕ್
ವಳಲಂಬೆಯಲ್ಲಿ ಎ.19 ರಂದು ‘ಸಂಗೀತ ಸಂಭ್ರಮ’
April 15, 2026
10:40 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-04-2026 | ಕರ್ನಾಟಕದಲ್ಲಿ ಬಿಸಿಗಾಳಿಯ ನಡುವೆ ಮಳೆಯ ಸುಳಿವು – ಏಪ್ರಿಲ್ 18 ರಿಂದ ಮಳೆ…!
April 15, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror