MIRROR FOCUS

ಕೊಕ್ಕೋ ಬಳಿಕ ಈಗ ಕಾಳುಮೆಣಸು ಧಾರಣೆ ಏರಿಕೆ ನಿರೀಕ್ಷೆ | ಅಂತರಾಷ್ಟ್ರೀಯ ಧಾರಣೆಯೂ ಏರಿಕೆಯ ಹಾದಿಯಲ್ಲಿ | 615 ರೂಪಾಯಿ ತಲಪಿದ ಧಾರಣೆ | ಏರಿಕೆಗೆ ಕಾರಣವೇನು..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಾಳುಮೆಣಸು ಧಾರಣೆ ಏರಿಕೆಯ ಹಾದಿಯಲ್ಲಿ ಸಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕಾಳುಮೆಣಸು ಧಾರಣೆ ಏರಿಕೆಯಾಗುತ್ತಿದೆ. ಕೊಕೋ ಬಳಿಕ ಇದೀಗ ಕಾಳುಮೆಣಸು ಕೂಡಾ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಕಾರಣ, ಇಳುವರಿ ಕೊರತೆ, ಹವಾಮಾನ ಪರಿಸ್ಥಿತಿಗಳಿಂದಾಗಿ ಉತ್ಪಾದನೆಯೂ ಕುಸಿತ ಕಂಡಿದೆ. ಹೀಗಾಗಿ ಈಗ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದೆ ಧಾರಣೆ ಏರಿಕೆಯಾಗುತ್ತಿದೆ. ಭಾರತದಲ್ಲಿ 590-600 ರೂಪಾಯಿ ಆಸುಪಾಸಿನಲ್ಲಿ ಸದ್ಯದ ಧಾರಣೆ ಇತ್ತು, ಈಗ 615 ರೂಪಾಯಿ ಸದ್ಯದ ಧಾರಣೆಯಾಗಿದೆ.…….ಮುಂದೆ ಓದಿ…..

Advertisement
Advertisement

ಕೊಕ್ಕೋ ಬಳಿಕ ಇದೀಗ ಕಾಳುಮೆಣಸು ಧಾರಣೆ ಏರಿಕೆ ಕಂಡಿದೆ. ಕೊಕ್ಕೋ ಮಾದರಿಯಲ್ಲಿಯೇ ಇಳುವರಿ ಕೊರತೆಯ ಕಾರಣದಿಂದ ಧಾರಣೆ ಏರಿಕೆ ಕಾಣುತ್ತಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ, ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಧಾರಣೆ ಏರಿಕೆಯಾಗುತ್ತಿದೆ. ಸದ್ಯ 615 ರೂಪಾಯಿಗೆ ಕಾಳುಮೆಣಸು ಖರೀದಿ ನಡೆಯುತ್ತಿದೆ.

ವಿಯೆಟ್ನಾಂನಲ್ಲಿ ಸಾರ್ವಕಾಲಿಕ ದಾಖಲೆಯ ಧಾರಣೆ ತಲಪಿದೆ.ಕಳೆದ ವಾರಕ್ಕಿಂತ ಈ ವಾರದ ಧಾರಣೆ ಶೇ.40 ರಷ್ಟು ಏರಿಕೆಯಾಗಿದೆ. ಯೂರೋಪ್, ಯುಎಸ್ ಮತ್ತು ಚೀನಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಪೂರೈಕೆ ಕೊರತೆ ಮತ್ತು ಹೆಚ್ಚಿದ ಬೇಡಿಕೆಯ ಕಾರಣದಿಂದ ಕಾಳುಮೆಣಸು ಬೆಲೆ  ಏರಿಕೆಗೆ ತಜ್ಞರು ಕಾರಣವೆಂದು ಹೇಳುತ್ತಾರೆ.

ಈಗ ಭಾರತದಲ್ಲೂ ಕಾಳುಮೆಣಸು ಬೇಡಿಕೆ ಕಂಡುಬಂದಿದ್ದು, ಧಾರಣೆ ಹೆಚ್ಚಾಗುತ್ತಿದೆ. ವಿಯೆಟ್ನಾಂನಲ್ಲಿ ಕಾಳುಮೆಣಸು ಕೊರತೆಯ ಕಾರಣದಿಂದ ಈಗಾಗಲೇ ಬ್ರೆಜಿಲ್‌, ಇಂಡೋನೇಷ್ಯಾ ಮತ್ತು ಕಾಂಬೋಡಿಯಾದಿಂದ ಕಾಳುಮೆಣಸು ಆಮದು ಮಾಡಿಕೊಳ್ಳಲು ಪ್ರಾರಂಭಿಸಲಾಗಿದೆ.

ಪ್ರಮುಖವಾಗಿ ಕಾಳುಮೆಣಸು ಉತ್ಪಾದಕ ದೇಶಗಳಲ್ಲಿ ಹವಾಮಾನ ಪರಿಸ್ಥಿತಿಗಳಿಂದಾಗಿ ಕಾಳುಮೆಣಸು ಬೆಳೆ ಕೈಕೊಟ್ಟಿದೆ. ಅದರ ಜೊತೆಗೆ ಈ ಹಿಂದೆ ಕಾಳುಮೆಣಸು ಧಾರಣೆ ಕಡಿಮೆ ಇದ್ದ ಕಾರಣದಿಂದ ರೈತರು ಇತರ ಬೆಳೆಗಳಿಗೆ ಅದರಲ್ಲೂಹಣ್ಣಿನ ಬೆಳೆಗಳತ್ತ ತಮ್ಮ ಕೃಷಿಯನ್ನು ಬದಲಾಯಿಸಿದ್ದಾರೆ.ಈಗಿನ ಪರಿಸ್ಥಿತಿಯಲ್ಲಿ ವಿಯೆಟ್ನಾಂಗೆ ಮುಂದಿನ 2-3 ವರ್ಷಗಳ ಕಾಲ ಕಾಳುಮೆಣಸು ಕೊರತೆ ಕಾಡಬಹುದು, ಅದರ ಜೊತೆಗೆ ಇತರ ಕಾಳುಮೆಣಸು ಬೆಳೆಯುವ ದೇಶದಲ್ಲೂ ಹವಾಮಾನ ಪರಿಸ್ಥಿತಿ ಕೈಕೊಟ್ಟಿದೆ.

Advertisement

ವಿಯೆಟ್ನಾಂನ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕರಿಮೆಣಸು ರಫ್ತು 84,000 ಟನ್‌ಗಳಷ್ಟಿತ್ತು, ಇದು ಕಳೆದ ವರ್ಷದಿಂದ ವರ್ಷಕ್ಕೆ 18.3 ಶೇಕಡಾ ರಷ್ಟು ಕಡಿಮೆಯಾಗಿದೆ, ಆದರೆ 11.5 ರಷ್ಟು ಧಾರಣೆಯಲ್ಲಿ ಏರಿಕೆಯಾಗಿದೆ. ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದ್ದು, ಧಾರಣೆ ಇನ್ನಷ್ಟು ಏರಿಕೆ ನಿಶ್ಚಿತವಾಗಿದೆ. ಭಾರತದಲ್ಲೂ ಈಗ ಧಾರಣೆ ಏರಿಕೆಯ ಸರದಿ ಶುರುವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯದ ವಿವಿಧೆಡೆ ಮಳೆ –  ಬಹುತೇಕ ಜಲಾಶಯಗಳು ಭರ್ತಿ

ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ.  ಕೊಡಗಿನ…

10 hours ago

ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ | ವಿಶ್ವ ದಾಖಲೆ ಸಾಧನೆ ಮಾಡಿದ ಮಂಗಳೂರಿನ ರೆಮೋನಾ ಪಿರೇರಾ

ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಮಂಗಳೂರಿನ ರೆಮೋನಾ ಪಿರೇರಾ,…

10 hours ago

ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆ | ಲೋಕಸಭೆಯಲ್ಲಿ ಕೇಂದ್ರ ಕೃಷಿ  ಸಚಿವರ  ಹೇಳಿಕೆ

ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ…

10 hours ago

ಬಿಎಸ್ ಎನ್ ಎಲ್  ಪರಿಶೀಲನಾ ಸಭೆ | ʻಬಿಎಸ್ಎನ್ಎಲ್‌ʼ ಸೇವೆಗಳ ಸುಧಾರಣೆಗೆ ಕ್ರಮ

ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ-…

10 hours ago

ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ | ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ವಿಶೇಷ ಪೂಜೆ

ರಾಜ್ಯದೆಲ್ಲೆಡೆ ಇಂದು ನಾಗರಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ…

10 hours ago

ಕೊಪ್ಪಳ ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ | ರಸಗೊಬ್ಬರಕ್ಕೆ ಆತಂಕ ಪಡುವ ಅಗತ್ಯವಿಲ್ಲ

ಕೊಪ್ಪಳ ಜಿಲ್ಲೆಯಲ್ಲಿ ಜುಲೈ ಅಂತ್ಯದವರಿಗೆ 2 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆಯ ಗುರಿ…

11 hours ago