ಮಡಿಕೇರಿಯ ಸುದರ್ಶನ ಬಡಾವಣೆಯ ನಿವಾಸಿ ಆಶಾ ಅವರು ಅನಾರೋಗ್ಯಕ್ಕೆ ತುತ್ತಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಅವರ ಕುಟುಂಬಸ್ಥರು ಅಂಗಾಗ ದಾನ ಮಾಡುವ ಮೂಲಕ 8 ಜನರ ಜೀವ ಉಳಿಸಿದ್ದಾರೆ. ಕಣ್ಣು, ಕಿಡ್ನಿ, ಹೃದಯ, ಲಿವರ್ ದಾನದ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
18 ವರ್ಷದಿಂದ ಬೇಬಿ ಸಿಟಿಂಗ್ ನಡೆಸುತ್ತಿದ್ದ ಪಂದ್ಯಂಡ ಆಶಾ (53) ಕಳೆದ ಶನಿವಾರ ಬೆಂಗಳೂರಿನಲ್ಲಿರುವ ಪುತ್ರಿ ಮನೆಗೆ ಹೋಗಿದ್ದರು. ಈ ವೇಳೆ ಅನಾರೋಗ್ಯಕ್ಕೆ ತುತ್ತಾದ ಆಶಾ ಅವರ ಮೆದುಳು ಪಾರ್ಶ್ವವಾಯುವಿಗೆ ಒಳಗಾಗಿತ್ತು. ತಕ್ಷಣವೇ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಹೇಳಿದರು. ವೈದ್ಯರ ಸಲಹೆ ಮೇರೆಗೆ ಅಂಗಾಂಗ ದಾನಕ್ಕೆ ಆಶಾ ಅವರ ಪತಿ, ಮಕ್ಕಳ ಒಪ್ಪಿಗೆ ಪಡೆಯಲಾಯಿತು. ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಅಂಗಾಂಗವನ್ನು ಬೇರ್ಪಡಿಸಿ 8 ಜನರಿಗೆ ಕಸಿ ಮಾಡಲಾಗಿದೆ.
ಕೃಷಿ ತ್ಯಾಜ್ಯ ಮತ್ತು ನೈಸರ್ಗಿಕ ನಾರುಗಳಿಂದ ತಯಾರಾಗುವ ಬಯೋ-ಕಾಂಪೋಸಿಟ್ ಉತ್ಪನ್ನಗಳು ಮರದ ಪರ್ಯಾಯವಾಗಿ…
ಅಡಿಕೆ ಮತ್ತು ವೀಳ್ಯದೆಲೆಯ ಸಾಂಸ್ಕೃತಿಕ ಮಹತ್ವವನ್ನು ಬಳಸಿಕೊಂಡು ವಿಯೆಟ್ನಾಂ ಹೊಸ ಆರೋಗ್ಯ ಹಾಗೂ…
ಝಾರ್ಖಂಡ್ನ ಮಹಿಳಾ ರೈತರು ಬೆಳೆದ 1.5 ಮೆಟ್ರಿಕ್ ಟನ್ ಆಮ್ರಪಾಲಿ ಮಾವುಗಳು ಮೊದಲ…
ಕರ್ನಾಟಕದಲ್ಲಿ ಜೂನ್ 8ರಿಂದ 11ರವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಜೂನ್ 9ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ.…
ದೇಶದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ…