Advertisement
MIRROR FOCUS

ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ

Share

ಬರಡು ಹಾಗೂ ಅರೆ–ಬರಡು ಪ್ರದೇಶಗಳಲ್ಲಿ ಅಸಮತೋಲನ ಮಳೆ, ಹೆಚ್ಚುತ್ತಿರುವ ತಾಪಮಾನ ಮತ್ತು ಮಣ್ಣಿನ ತೇವಾಂಶದ ಕೊರತೆಯಿಂದ ಕೃಷಿ ಉತ್ಪಾದನೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಡುವೆ, ಪಶುಸಂಗೋಪನೆಯಿಂದ ಉಂಟಾಗುವ ಮೂತ್ರದಂತಹ ದ್ರವ ತ್ಯಾಜ್ಯಗಳು ಬಹುತೇಕ ಬಳಕೆಯಾಗದೆ ಪರಿಸರ ಸಮಸ್ಯೆಗೂ ಕಾರಣವಾಗುತ್ತಿವೆ.  ಈ ಎರಡೂ ಸಮಸ್ಯೆಗಳಿಗೆ ಒಟ್ಟಿಗೆ ಪರಿಹಾರ ನೀಡುವಂತೆ, ICAR–National Research Centre on Camel ಮಹತ್ವದ ಸಂಶೋಧನೆ ನಡೆಸಿದ್ದು, ಒಂಟೆ ಮೂತ್ರವನ್ನು ಕಡಿಮೆ ವೆಚ್ಚದ ಹಾಗೂ ಪರಿಸರ ಸ್ನೇಹಿ ಬೀಜ ಸಂಸ್ಕರಣಾ ವಿಧಾನವಾಗಿ ಬಳಸಬಹುದು ಎಂಬುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿದೆ.

ಯಾವ ಬೆಳೆಗಳ ಮೇಲೆ ಅಧ್ಯಯನ? :  ಅಧ್ಯಯನವು ಬರ ಪ್ರದೇಶಗಳ ಪ್ರಮುಖ ಬೆಳೆಗಳಾದ ಗುಯಾರ್‌ (ಕ್ಲಸ್ಟರ್‌ ಬೀನ್‌), ಮತ್‌ ಬೀನ್‌, ಪಿಯರ್ಲ್‌ ಮಿಲ್ಲೆಟ್‌ (ಸಜ್ಜೆ) ಮೇಲೆ ನಡೆಸಲಾಗಿದೆ. ಇವು ಆಹಾರ ಮತ್ತು ಮೇವು ಎರಡಕ್ಕೂ ಅತ್ಯಂತ ಅಗತ್ಯವಾದ ಬೆಳೆಗಳಾಗಿವೆ.

ಸಂಶೋಧನೆಯ ಪ್ರಮುಖ ಫಲಿತಾಂಶ:  ಬೀಜಗಳನ್ನು ಎರಡು ಗಂಟೆಗಳ ಕಾಲ ಅಶುದ್ಧಗೊಳಿಸದ ಒಂಟೆ ಮೂತ್ರದಲ್ಲಿ ಸಂಸ್ಕರಿಸಿದಾಗ, ಬೀಜ ಮೊಳಕೆಯ ಪ್ರಮಾಣ ಹೆಚ್ಚಳ,  ಮೊಳೆಯ ಶಕ್ತಿ ಮತ್ತು ಆರಂಭಿಕ ಬೆಳವಣಿಗೆ ಉತ್ತಮ, ಬರ ಮತ್ತು ಉಷ್ಣತೆಗೆ ತಾಳ್ಮೆ ಹೆಚ್ಚಳ ಎಂಬ ಸ್ಪಷ್ಟ ಫಲಿತಾಂಶಗಳು ಕಂಡುಬಂದಿವೆ.

ವೈಜ್ಞಾನಿಕ ಪರೀಕ್ಷೆಗಳು ಒಂಟೆ ಮೂತ್ರ ಬೀಜ ಸಂಸ್ಕರಣೆಯಿಂದ, ಸಸ್ಯದ ನೀರು ಹಿಡಿದಿಡುವ ಸಾಮರ್ಥ್ಯ, ಕೋಶ ಸ್ಥಿರತೆ, ಆಂಟಿ–ಆಕ್ಸಿಡೆಂಟ್‌ ಕ್ರಿಯಾಶೀಲತೆ, ನೈಟ್ರೋಜನ್‌ ಶೋಷಣೆ, ಕ್ಲೋರೋಫಿಲ್‌ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತದೆ ಎಂಬುದನ್ನು ತೋರಿಸಿವೆ.

ಉತ್ಪಾದನೆಗೂ ನೇರ ಲಾಭ: ಈ ಲಾಭಗಳು ನೇರವಾಗಿ ಕೃಷಿ ಫಲಿತಾಂಶದಲ್ಲೂ ಪ್ರತಿಫಲಿಸಿದ್ದು, ಹೆಚ್ಚು ಬೀಜ ಇಳುವರಿ, ಉತ್ತಮ ನೀರು ಬಳಕೆ ದಕ್ಷತೆ, ಗುಯಾರ್‌ನಲ್ಲಿ ಹೆಚ್ಚಿನ ಗುಮ್‌ ಪ್ರಮಾಣ, ಮೇವು ಗುಣಮಟ್ಟದಲ್ಲಿ ಸುಧಾರಣೆ ಸಾಧ್ಯವಾಗಿದೆ.

ರಾಸಾಯನಿಕಗಳಿಗೆ ಪರ್ಯಾಯ :  ಸಂಶೋಧನೆಯ ಮತ್ತೊಂದು ಪ್ರಮುಖ ಅಂಶವೆಂದರೆ, ಒಂಟೆ ಮೂತ್ರ ಆಧಾರಿತ ಬೀಜ ಸಂಸ್ಕರಣೆ ಪೊಟ್ಯಾಸಿಯಂ ನೈಟ್ರೇಟ್‌, ಪೊಟ್ಯಾಸಿಯಂ ಸಲ್ಫೇಟ್‌ಗಳಂತಹ ರಾಸಾಯನಿಕ ವಿಧಾನಗಳಿಗೆ ಸಮಾನ ಅಥವಾ ಕೆಲ ಸಂದರ್ಭಗಳಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಕಂಡುಬಂದಿರುವುದು.

ರೈತರಿಗೆ ಏನು ಲಾಭ?:  ಈ ತಂತ್ರಜ್ಞಾನದಿಂದ ಕಡಿಮೆ ವೆಚ್ಚದಲ್ಲಿ ಬೀಜ ಸಂಸ್ಕರಣೆ, ರಾಸಾಯನಿಕ ಅವಲಂಬನೆ ಕಡಿತ, ಪಶು–ಕೃಷಿ ಏಕೀಕರಣ ಬಲಪಡಿಕೆ, ಪಶು ತ್ಯಾಜ್ಯಗಳ ವೈಜ್ಞಾನಿಕ ಮರುಬಳಕೆ, ಪರಿಸರ ಮಾಲಿನ್ಯ ನಿಯಂತ್ರಣ  ಸಾಧ್ಯವಾಗುತ್ತದೆ.

ಪರಿಣಾಮದ ಒಟ್ಟಾರೆ ಸಾರಾಂಶ :  ಬರ ಪ್ರದೇಶಗಳಿಗೆ ಸೂಕ್ತವಾದ ದೇಶೀ, ಕಡಿಮೆ ವೆಚ್ಚದ ತಂತ್ರಜ್ಞಾನ,  ಒಂಟೆ ಮೂತ್ರದ ಸುರಕ್ಷಿತ ಮತ್ತು ಉತ್ಪಾದಕ ಬಳಕೆ, ನೀರಿನ ಕೊರತೆಯಲ್ಲೂ ಬೆಳೆ ಉತ್ಪಾದನೆ ಹೆಚ್ಚಳ, ರೈತರ ಒಟ್ಟು ಕೃಷಿ ವೆಚ್ಚದಲ್ಲಿ ಇಳಿಕೆಯಾಗುತ್ತದೆ. ಒಟ್ಟಾರೆ, ಒಂಟೆ ಮೂತ್ರ ಆಧಾರಿತ ಬೀಜ ಸಂಸ್ಕರಣೆ ಬರ ಮತ್ತು ಅರೆ–ಬರಡು ಪ್ರದೇಶಗಳ ಕೃಷಿಗೆ ಪ್ರಾಯೋಗಿಕ, ವಿಸ್ತರಿಸಬಹುದಾದ ಮತ್ತು ಹವಾಮಾನ ಸ್ನೇಹಿ ಪರಿಹಾರವಾಗಿ ಹೊರಹೊಮ್ಮಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

9 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

16 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

1 day ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

2 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

2 days ago