Advertisement
ಸುದ್ದಿಗಳು

ಅ.30 : ಕ್ಯಾಂಪ್ಕೋ ಚಾಕೋಲೇಟ್‌ ನೂತನ ಉತ್ಪನ್ನ ಬಿಡುಗಡೆ

Share

ಕ್ಯಾಂಪ್ಕೋ ವತಿಯಿಂದ ಮತ್ತೊಂದು ಚಾಕೋಲೇಟ್‌ ಉತ್ಪನ್ನ ಹಾಗೂ ಚಾಕೋಲೇಟ್‌ ಪೇಯ ವಿನ್ನರ್‌ ನ ಇನ್ನೊಂದು ಉತ್ಪನ್ನ ಅ.30  ರಂದು ಪುತ್ತೂರಿನಲ್ಲಿ  ಬಿಡುಗಡೆಯಾಗಲಿದೆ. ದಿ ಡೈರಿ ಡ್ರೀಮ್ &ನಟ್ (The Dairy Dream Fruit & Nut) ಹಾಗೂ ವಿನ್ನರ್‌ ಪೇಯ ವಿನ್ನರ್‌ ವಿದ್‌ ಜಾಗ್ರೀ (Winner-with Jaggery) ಬಿಡುಗಡೆಯಾಗುವ ನೂತನ ಉತ್ಪನ್ನ.

ಪುತ್ತೂರಿನ  ಕ್ಯಾಂಪ್ಕೋ ಚಾಕೋಲೇಟ್‌ ಪ್ಯಾಕ್ಟರಿ ಆವರಣದಲ್ಲಿ  ನಡೆಯುವ ಈ ಬಿಡುಗಡೆ ಸಮಾರಂಭದಲ್ಲಿ  ವಿವೇಕಾನಂದ  ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಕೆ.ಪ್ರಭಾಕರ ಭಟ್ ಕಲ್ಲಡ್ಕ ಅವರು ಬಿಡುಗಡೆಗೊಳಿಸುವರು.  ಶಾಸಕ ಸಂಜೀವ ಮಟಂದೂರು ಅವರು ಭಾಗವಹಿಸುವರು.

ದೇಸೀ ಚಾಕೋಲೇಟ್‌, ರೈತರ ಬೆನ್ನೆಲುಬಾದ ಕ್ಯಾಂಪ್ಕೋ ನೂತನವಾಗಿ ಬಿಡುಗಡೆ ಮಾಡುವ ಈ ಚಾಕೋಲೇಟ್‌ ಉತ್ಪನ್ನವು ಶುದ್ಧ ಹಾಲಿನ ಪುಡಿ, ಕೋಕೋ, ಬಾದಾಮಿ ಮತ್ತುಒಣದ್ರಾಕ್ಷಿಗಳಮಿಶ್ರಣದೊಂದಿಗೆ ತಯಾರಿಸಲಾಗಿದೆ. ಈ ಉತ್ಪನ್ನವು 40 ಗ್ರಾಂ ಸ್ಲಾಬ್‌ ನಲ್ಲಿ  40  ರೂಪಾಯಿ ಗರಿಷ್ಟ ಮಾರಾಟ ಬೆಲೆಗೆ ಲಭ್ಯವಿದೆ.

ಚಾಕೊಲೇಟ್ ಹಾಗೂ ಬೆಲ್ಲದೊಂದಿಗೆ ಕೂಡಿದ ವಿಶೇಷ ಪೇಯ ಮಿಶ್ರಣ ವಿನ್ನರ್‌ ವಿದ್‌ ಜಾಗ್ರಿ  ಉತ್ಪನ್ನವು  ಬೆಲ್ಲದ ನೈಸರ್ಗಿಕ ಪೋಷಕಾಂಶಗಳೊಂದಿಗೆ ಸಮೃದ್ಧವಾಗಿದೆ. ಈ ಉತ್ಪನ್ನವು, ಸರ್ವಋತುಗಳಿಗೆ ಹಾಗೂ ಎಲ್ಲಾ ವಯೋಮಾನದವರಿಗೆ ಬಿಸಿ ಅಥವಾ ತಂಪುರೂಪದಲ್ಲಿ ಸೇವಿಸಬಹುದು. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದನ್ನು 300 ಗ್ರಾಂ ಪ್ಯಾಕ್ ಗೆ  ರೂ.180 ನಲ್ಲಿ ಪರಿಚಯಿಸಲಾಗುತ್ತಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…

2 hours ago

ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!

ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…

2 hours ago

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ

2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…

10 hours ago

ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ

ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…

10 hours ago

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

1 day ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

1 day ago