Advertisement
ಸುದ್ದಿಗಳು

ಅ.30 : ಕ್ಯಾಂಪ್ಕೋ ಚಾಕೋಲೇಟ್‌ ನೂತನ ಉತ್ಪನ್ನ ಬಿಡುಗಡೆ

Share

ಕ್ಯಾಂಪ್ಕೋ ವತಿಯಿಂದ ಮತ್ತೊಂದು ಚಾಕೋಲೇಟ್‌ ಉತ್ಪನ್ನ ಹಾಗೂ ಚಾಕೋಲೇಟ್‌ ಪೇಯ ವಿನ್ನರ್‌ ನ ಇನ್ನೊಂದು ಉತ್ಪನ್ನ ಅ.30  ರಂದು ಪುತ್ತೂರಿನಲ್ಲಿ  ಬಿಡುಗಡೆಯಾಗಲಿದೆ. ದಿ ಡೈರಿ ಡ್ರೀಮ್ &ನಟ್ (The Dairy Dream Fruit & Nut) ಹಾಗೂ ವಿನ್ನರ್‌ ಪೇಯ ವಿನ್ನರ್‌ ವಿದ್‌ ಜಾಗ್ರೀ (Winner-with Jaggery) ಬಿಡುಗಡೆಯಾಗುವ ನೂತನ ಉತ್ಪನ್ನ.

ಪುತ್ತೂರಿನ  ಕ್ಯಾಂಪ್ಕೋ ಚಾಕೋಲೇಟ್‌ ಪ್ಯಾಕ್ಟರಿ ಆವರಣದಲ್ಲಿ  ನಡೆಯುವ ಈ ಬಿಡುಗಡೆ ಸಮಾರಂಭದಲ್ಲಿ  ವಿವೇಕಾನಂದ  ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಕೆ.ಪ್ರಭಾಕರ ಭಟ್ ಕಲ್ಲಡ್ಕ ಅವರು ಬಿಡುಗಡೆಗೊಳಿಸುವರು.  ಶಾಸಕ ಸಂಜೀವ ಮಟಂದೂರು ಅವರು ಭಾಗವಹಿಸುವರು.

ದೇಸೀ ಚಾಕೋಲೇಟ್‌, ರೈತರ ಬೆನ್ನೆಲುಬಾದ ಕ್ಯಾಂಪ್ಕೋ ನೂತನವಾಗಿ ಬಿಡುಗಡೆ ಮಾಡುವ ಈ ಚಾಕೋಲೇಟ್‌ ಉತ್ಪನ್ನವು ಶುದ್ಧ ಹಾಲಿನ ಪುಡಿ, ಕೋಕೋ, ಬಾದಾಮಿ ಮತ್ತುಒಣದ್ರಾಕ್ಷಿಗಳಮಿಶ್ರಣದೊಂದಿಗೆ ತಯಾರಿಸಲಾಗಿದೆ. ಈ ಉತ್ಪನ್ನವು 40 ಗ್ರಾಂ ಸ್ಲಾಬ್‌ ನಲ್ಲಿ  40  ರೂಪಾಯಿ ಗರಿಷ್ಟ ಮಾರಾಟ ಬೆಲೆಗೆ ಲಭ್ಯವಿದೆ.

ಚಾಕೊಲೇಟ್ ಹಾಗೂ ಬೆಲ್ಲದೊಂದಿಗೆ ಕೂಡಿದ ವಿಶೇಷ ಪೇಯ ಮಿಶ್ರಣ ವಿನ್ನರ್‌ ವಿದ್‌ ಜಾಗ್ರಿ  ಉತ್ಪನ್ನವು  ಬೆಲ್ಲದ ನೈಸರ್ಗಿಕ ಪೋಷಕಾಂಶಗಳೊಂದಿಗೆ ಸಮೃದ್ಧವಾಗಿದೆ. ಈ ಉತ್ಪನ್ನವು, ಸರ್ವಋತುಗಳಿಗೆ ಹಾಗೂ ಎಲ್ಲಾ ವಯೋಮಾನದವರಿಗೆ ಬಿಸಿ ಅಥವಾ ತಂಪುರೂಪದಲ್ಲಿ ಸೇವಿಸಬಹುದು. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದನ್ನು 300 ಗ್ರಾಂ ಪ್ಯಾಕ್ ಗೆ  ರೂ.180 ನಲ್ಲಿ ಪರಿಚಯಿಸಲಾಗುತ್ತಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

3 minutes ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

1 day ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

2 days ago