Advertisement
ಸುದ್ದಿಗಳು

ಎರಡು ಪ್ಯಾಕೆಟ್ ಅಡಿಕೆ‌ ಹುಡಿ ಸಾಗಾಟ | ಟರ್ಕಿಯಲ್ಲಿ ಬಂಧನವಾಗಿದ್ದ ಪಾಕಿಸ್ತಾನಿ ಪ್ರಜೆ ಬಿಡುಗಡೆ | ಟರ್ಕಿಗೆ ಅಡಿಕೆ-ಸುಪಾರಿ ಸಾಗಾಟ ಶಾಶ್ವತವಾಗಿ ನಿಷೇಧ…! |

Share

ತನ್ನ ಪ್ರವಾಸದ ಸಂದರ್ಭ ಮಿತ್ರರಿಗೆ ಉಡುಗೊರೆಯಾಗಿ ಅಡಿಕೆ ಪ್ಯಾಕೆಟ್‌ ಸಾಗಾಟ ಮಾಡಿದ ಆರೋಪದ ಮೇಲೆ ಟರ್ಕಿಯಲ್ಲಿ ಬಂಧಿಸಲ್ಪಟ್ಟಿದ್ದ ಪಾಕಿಸ್ತಾನದ ಲಾಹೋರ್‌ನ 26 ವರ್ಷದ ನಿವಾಸಿ ಮುಹಮ್ಮದ್ ಅವೈಸ್ ಬಿಡುಗಡೆಯ ಜೊತೆಗೆ ಟರ್ಕಿಗೆ ಅಡಿಕೆಯನ್ನು ಶಾಶ್ವತವಾಗಿ ಸಾಗಾಟ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.

Advertisement
Advertisement

ಪಾಕಿಸ್ತಾನದ ಮುಹಮ್ಮದ್ ಅವೈಸ್ ತನ್ನ ಪ್ರವಾಸದ ವೇಳೆ ಮಿತ್ರರಿಗೆ ಎರಡು ಅಡಿಕೆ ಪ್ಯಾಕೆಟ್‌ ಸಾಗಾಟ ಮಾಡುತ್ತಿದ್ದ. ಈ ಸಂದರ್ಭ ಟರ್ಕಿಯಲ್ಲಿ ವಿಮಾನ ಇಳಿಯುತ್ತಿದ್ದಂತೆ ನಾಗರಿಕ ವಿಮಾನಯಾನ ಪ್ರಾಧಿಕಾರದ ತಪಾಸಣೆಯ ವೇಳೆ ಸಿಕ್ಕಿಹಾಕಿಕೊಂಡು ಬಂಧಿಸಲ್ಪಟ್ಟಿದ್ದ. ಪಾಕಿಸ್ತಾನದಲ್ಲಿ ಅಡಿಕೆ ನಿಷೇಧ ಇಲ್ಲ, ಆದರೆ ಟರ್ಕಿಯಲ್ಲಿ ಅಡಿಕೆಯು ಮಾದಕವಸ್ತು/ಡ್ರಗ್ಸ್ ವರ್ಗದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಅಡಿಕೆ ಸಾಗಾಟ,ಬಳಕೆ ನಿಷೇಧವಾಗಿತ್ತು. ಈ ಬಗ್ಗೆ ಅರಿವು ಇರದ ಪಾಕಿಸ್ತಾನದ ಪ್ರಜೆ ಅಡಿಕೆ ಸಾಗಾಟ ಮಾಡಿದ್ದ. ದೇಶದ ಕಾನೂನು ಪ್ರಕಾರ ಟರ್ಕಿಯಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ್ದರು.

Advertisement

ಬಳಿಕ ಇಸ್ತಾನ್‌ಬುಲ್‌ನಲ್ಲಿರುವ ಪಾಕಿಸ್ತಾನಿ ದೂತಾವಾಸದ ಸತತ ಪ್ರಯತ್ನಗಳ ನಂತರ, ಇಸ್ತಾನ್‌ಬುಲ್‌ನ ಸ್ಥಳೀಯ ನ್ಯಾಯಾಲಯವು  ಬಂಧನದಲ್ಲಿರುವ ಪಾಕಿಸ್ತಾನಿ ಪ್ರಜೆಯನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೇ ಮುಂದೆ ಟರ್ಕಿಯಲ್ಲಿ ಅಡಿಕೆ ಸಾಗಾಟ, ಬಳಕೆ ಮಾಡದಂತೆ ಪಾಕಿಸ್ತಾನಿ ಪ್ರಜೆಗೆ ಎಚ್ಚರಿಕೆ ನೀಡಿ ಶಾಶ್ವತವಾಗಿ ಅಡಿಕೆ ಸಾಗಾಟವನ್ನು ನಿಷೇಧ ಮಾಡಿದೆ.

ಕೆಲವು ದೇಶಗಳಲ್ಲಿ ಅಡಿಕೆ ಬಳಕೆ ಹಾಗೂ ಸಾಗಾಟಕ್ಕೆ ನಿರ್ಬಂಧ ಇದೆ. ದೇಶದ ಕಾನೂನು ಪ್ರಕಾರ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅಡಿಕೆ ಪತ್ತೆಯಾದರೆ ಬಂಧಿಸಲಾಗುತ್ತದೆ.

Advertisement

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

1 day ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

1 day ago

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

2 days ago

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

2 days ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

3 days ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

3 days ago