Advertisement
ಸುದ್ದಿಗಳು

ಎರಡು ಪ್ಯಾಕೆಟ್ ಅಡಿಕೆ‌ ಹುಡಿ ಸಾಗಾಟ | ಟರ್ಕಿಯಲ್ಲಿ ಬಂಧನವಾಗಿದ್ದ ಪಾಕಿಸ್ತಾನಿ ಪ್ರಜೆ ಬಿಡುಗಡೆ | ಟರ್ಕಿಗೆ ಅಡಿಕೆ-ಸುಪಾರಿ ಸಾಗಾಟ ಶಾಶ್ವತವಾಗಿ ನಿಷೇಧ…! |

Share

ತನ್ನ ಪ್ರವಾಸದ ಸಂದರ್ಭ ಮಿತ್ರರಿಗೆ ಉಡುಗೊರೆಯಾಗಿ ಅಡಿಕೆ ಪ್ಯಾಕೆಟ್‌ ಸಾಗಾಟ ಮಾಡಿದ ಆರೋಪದ ಮೇಲೆ ಟರ್ಕಿಯಲ್ಲಿ ಬಂಧಿಸಲ್ಪಟ್ಟಿದ್ದ ಪಾಕಿಸ್ತಾನದ ಲಾಹೋರ್‌ನ 26 ವರ್ಷದ ನಿವಾಸಿ ಮುಹಮ್ಮದ್ ಅವೈಸ್ ಬಿಡುಗಡೆಯ ಜೊತೆಗೆ ಟರ್ಕಿಗೆ ಅಡಿಕೆಯನ್ನು ಶಾಶ್ವತವಾಗಿ ಸಾಗಾಟ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.

ಪಾಕಿಸ್ತಾನದ ಮುಹಮ್ಮದ್ ಅವೈಸ್ ತನ್ನ ಪ್ರವಾಸದ ವೇಳೆ ಮಿತ್ರರಿಗೆ ಎರಡು ಅಡಿಕೆ ಪ್ಯಾಕೆಟ್‌ ಸಾಗಾಟ ಮಾಡುತ್ತಿದ್ದ. ಈ ಸಂದರ್ಭ ಟರ್ಕಿಯಲ್ಲಿ ವಿಮಾನ ಇಳಿಯುತ್ತಿದ್ದಂತೆ ನಾಗರಿಕ ವಿಮಾನಯಾನ ಪ್ರಾಧಿಕಾರದ ತಪಾಸಣೆಯ ವೇಳೆ ಸಿಕ್ಕಿಹಾಕಿಕೊಂಡು ಬಂಧಿಸಲ್ಪಟ್ಟಿದ್ದ. ಪಾಕಿಸ್ತಾನದಲ್ಲಿ ಅಡಿಕೆ ನಿಷೇಧ ಇಲ್ಲ, ಆದರೆ ಟರ್ಕಿಯಲ್ಲಿ ಅಡಿಕೆಯು ಮಾದಕವಸ್ತು/ಡ್ರಗ್ಸ್ ವರ್ಗದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಅಡಿಕೆ ಸಾಗಾಟ,ಬಳಕೆ ನಿಷೇಧವಾಗಿತ್ತು. ಈ ಬಗ್ಗೆ ಅರಿವು ಇರದ ಪಾಕಿಸ್ತಾನದ ಪ್ರಜೆ ಅಡಿಕೆ ಸಾಗಾಟ ಮಾಡಿದ್ದ. ದೇಶದ ಕಾನೂನು ಪ್ರಕಾರ ಟರ್ಕಿಯಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ್ದರು.

ಬಳಿಕ ಇಸ್ತಾನ್‌ಬುಲ್‌ನಲ್ಲಿರುವ ಪಾಕಿಸ್ತಾನಿ ದೂತಾವಾಸದ ಸತತ ಪ್ರಯತ್ನಗಳ ನಂತರ, ಇಸ್ತಾನ್‌ಬುಲ್‌ನ ಸ್ಥಳೀಯ ನ್ಯಾಯಾಲಯವು  ಬಂಧನದಲ್ಲಿರುವ ಪಾಕಿಸ್ತಾನಿ ಪ್ರಜೆಯನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೇ ಮುಂದೆ ಟರ್ಕಿಯಲ್ಲಿ ಅಡಿಕೆ ಸಾಗಾಟ, ಬಳಕೆ ಮಾಡದಂತೆ ಪಾಕಿಸ್ತಾನಿ ಪ್ರಜೆಗೆ ಎಚ್ಚರಿಕೆ ನೀಡಿ ಶಾಶ್ವತವಾಗಿ ಅಡಿಕೆ ಸಾಗಾಟವನ್ನು ನಿಷೇಧ ಮಾಡಿದೆ.

ಕೆಲವು ದೇಶಗಳಲ್ಲಿ ಅಡಿಕೆ ಬಳಕೆ ಹಾಗೂ ಸಾಗಾಟಕ್ಕೆ ನಿರ್ಬಂಧ ಇದೆ. ದೇಶದ ಕಾನೂನು ಪ್ರಕಾರ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅಡಿಕೆ ಪತ್ತೆಯಾದರೆ ಬಂಧಿಸಲಾಗುತ್ತದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಎಲೆಯ ಫೋಟೋ ತೆಗೆದರೆ AI ಕೀಟ ಯಾವುದೆಂದು ಹೇಳುತ್ತದೆ…! – 73 ಬೆಳೆಗಳ ಮೇಲೆ ಭಾರತದ ಹೊಸ ಕೃಷಿ ಕಣ್ಗಾವಲು

ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…

4 hours ago

ಹವಾಮಾನ ವರದಿ | 24-08-2026 | ಕರಾವಳಿಯಲ್ಲಿ ಮಳೆ ಮುಂದುವರಿಕೆ – ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗೆ..?

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…

14 hours ago

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

19 hours ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

1 day ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

1 day ago