ಸುಳ್ಯದಲ್ಲಿ ಸಂಚಲನ ಮೂಡಿಸಿದ ಗ್ರಾಮೀಣ ಪರಿಸ್ಥಿತಿ | ಗಾಯಗೊಂಡ ಮಹಿಳೆಯನ್ನು ಹೊತ್ತುಕೊಂಡು ಹೊಳೆಯಲ್ಲಿ ಸಾಗಿಸುವ ದಯನೀಯ ಸ್ಥಿತಿ….! |

July 14, 2021
10:43 PM

ಎಲ್ಲಿದೆ ಆಡಳಿತ ? ಅಭಿವೃದ್ಧಿಯೇ ಮೂಲಮಂತ್ರ ಎನ್ನುವ ಜನಪ್ರತಿನಿಧಿಗಳು ಎಲ್ಲಿದ್ದಾರೆ ? ಗ್ರಾಮೀಣ ಭಾಗವೇ ಅಭಿವೃದ್ಧಿ ಎನ್ನುವ ಘೋಷಣೆಗಳು ಎಲ್ಲಿವೆ ? ಇಂತಹ ಪ್ರಶ್ನೆಗಳು ಈಗ ಸುಳ್ಯದಲ್ಲಿ  ಹೆಚ್ಚಾಗಿದೆ. ಕಾರಣ ಇಷ್ಟೇ, ಈಗ ಅಭಿವೃದ್ಧಿಗಳ ಪ್ರತಿಫಲನ ಆರಂಭವಾಗಿದೆ. ಇದೀಗ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಮರಸಂಕ ಪ್ರದೇಶದ ದಯನೀಯ ಸ್ಥಿತಿ ಬೆಳಕಿಗೆ ಬಂದಿದೆ. ಇದರ ಸ್ಟೋರಿ ಇಲ್ಲಿದೆ.

Advertisement
Advertisement

Advertisement

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಪಂ ವ್ಯಾಪ್ತಿಯ ಮರಸಂಕ ಎಂಬಲ್ಲಿ ಮಹಿಳೆಯೊಬ್ಬರಿಗೆ ಅನಾರೋಗ್ಯ ಕಂಡುಬಂದಾಗ ಆಸ್ಪತ್ರೆಗೆ ಸಾಗಿಸಲು ಹೊಳೆಯಲ್ಲಿ  ಸ್ಟ್ರೆಚರ್‌ ಮೂಲಕ ಸಾಗಾಟ ಮಾಡುವ ವಿಡಿಯೋ ಹಾಗೂ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು , ಅತ್ಯಂತ ದಯನೀಯ ಸ್ಥಿತಿಯ ದರ್ಶನವಾಗಿದೆ. ಸಚಿವ ಎಸ್‌ ಅಂಗಾರ ಅವರ ತವರು ಕ್ಷೇತ್ರದಲ್ಲಿ  ಈ ದೃಶ್ಯ ಕಂಡುಬಂದಿರುವುದು ದುರಂತವಾಗಿದೆ. ಕಳೆದ  25 ವರ್ಷಗಳಿಂದ ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ  ಇಂತಹದ್ದೊಂದು ಸಮಸ್ಯೆ ಇದ್ದೂ ಪರಿಹಾರ ಆಗದೇ ಇರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. 

Advertisement

ಜಾಲ್ಸೂರು ಗ್ರಾಮದ ಮರಸಂಕ ಪ್ರದೇಶದಲ್ಲಿ  ಸುಮಾರು 9  ಮನೆಗಳು ಇವೆ. ಇಲ್ಲಿನ ಜನರು ಜಾಲ್ಸೂರಿಗೆ ಬರಬೇಕಾದರೆ ಇದೇ ಮರಸಂಕದ ಹೊಳೆ ದಾಟಿ ಬರಬೇಕಾಗಿದೆ. ಆದರೆ ಇಲ್ಲಿ ಸಮರ್ಪಕವಾದ ಸೇತುವೆ ಇಲ್ಲ. ಇಲ್ಲೊಂದು ಕಿಂಡಿಅಣೆಕಟ್ಟು ಸಹಿತವಾದ ದಾರಿ ಇದೆ. ಆದರೆ ಮಳೆಗಾಲದಲ್ಲಿ  ಇದರಲ್ಲಿ  ಪಾಚಿ ಹಿಡಿದ ಸ್ಥಿತಿಯಲ್ಲಿ ದಾಟಿ ಬರಲು ಕಷ್ಟವಾಗುತ್ತದೆ. ಅಲ್ಲದೆ ಮರಸಂಕದಿಂದ ಸ್ವಲ್ಪ ದೂರದಲ್ಲಿ ಈ ಕಿಂಡಿಅಣೆಕಟ್ಟು ಇದೆ, ಮಹಿಳೆಯರಿಗೆ , ಮಕ್ಕಳಿಗೆ, ಅನಾರೋಗ್ಯ ಪೀಡಿತರಿಗೆ ಇಲ್ಲಿ ಹೋಗಲು ಕಷ್ಟವಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಯಾವುದೇ ವಾಹನಗಳು ಇಲ್ಲಿನ 9  ಮನೆಗಳಿಗೆ ಸಂಪರ್ಕ ಮಾಡುವುದಿಲ್ಲ. ಹೀಗಾಗಿ ತುರ್ತು ಸಂದರ್ಭದಲ್ಲಿ ಸಂಕಷ್ಟ ಎದುರಿಸಬೇಕಾಗಿತ್ತು. ಇದಕ್ಕಾಗಿ ಹಲವು ಬಾರಿ ಜನಪ್ರತಿನಿಧಿಗಳಿಗೆ ಇಲಾಖೆಗಳಿಗೆ ಇಲ್ಲಿನ ಜನರು ಮನವಿ ಮಾಡಿದ್ದರು. ಪ್ರತೀ ಬಾರಿ ಚುನಾವಣೆಯ ಸಂದರ್ಭ ಭರವಸೆಗಳು ಸಿಗುತ್ತವೆ, ಆದರೆ ಅದಾದ ಬಳಿಕ ಭರವಸೆಗಳು ಮರೆಯಾಗುತ್ತವೆ ಎನ್ನುತ್ತಾರೆ ಇಲ್ಲಿನ ಜನ. ಹೀಗಾಗಿ ಈಗ ಭರವಸೆಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದಾರೆ ಇಲ್ಲಿನ ಜನ. ಕಳೆದ ಬಾರಿ ಕೂಡಾ ಭರವಸೆ ದೊರೆತು ಕಾಮಗಾರಿ ನಡೆಸಲಾಗುತ್ತದೆ ಎನ್ನುವ ಹೊತ್ತಿಗೆ ಅನುದಾನಗಳು ಸಾಕಾಗದು ಎಂದು ನೆನೆಗುದಿಗೆ ಬಿದ್ದಿತ್ತು. ಸ್ಥಳೀಯ ಪಂಚಾಯತ್‌ನಲ್ಲಿ ಕೂಡಾ ಈ ಬಗ್ಗೆ ಪ್ರಸ್ತಾಪವಾಗಿತ್ತು. ಅನೇಕ ವರ್ಷಗಳಿಂದಲೂ ಈ ಸಮಸ್ಯೆ ಇದೆ. ಆದರೆ ಇದುವರೆಗೂ ಪರಿಹಾರ ಮಾತ್ರಾ ಆಗಿಲ್ಲ.

ಕಳೆದ ಅನೇಕ ವರ್ಷಗಳಿಂದ ನಮಗೊಂದು ಸೇತುವೆ ಮಾಡಿಕೊಡಿ ಎಂದು ಮನವಿ ಮಾಡುತ್ತಲೇ ಇದ್ದೇವೆ, ಆದರೆ ಇದುವರೆಗೂ ಭರವಸೆ ಮಾತ್ರಾ ಸಿಕ್ಕಿದೆ, ಪೂರ್ಣಪ್ರಮಾಣದ ಸೇತುವೆ ಅಗತ್ಯವಿದೆ  ಎನ್ನುತ್ತಾರೆ ಸ್ಥಳೀಯರಾದ ಸತೀಶ್‌ ನಾಯ್ಕ್.‌ 

Advertisement

ಸುಳ್ಯದಲ್ಲಿ  ಅನೇಕ ಕಡೆಗಳಲ್ಲಿ ಈ ರೀತಿಯ ಭರವಸೆಗಳು ಮಾತ್ರಾ ಲಭ್ಯವಾಗುತ್ತಿದೆ. ಪ್ರಧಾನಿಗಳಿಗೆ ಪತ್ರ ಬರೆದರೂ ಇಲ್ಲಿ ಯಾವುದೇ ಫಲಿತಾಂಶಗಳು ಲಭ್ಯವಾಗುತ್ತಿಲ್ಲ. ಸುಳ್ಯದಲ್ಲಿ  ಮಾತ್ರಾ ಹೀಗೇಕೆ ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಸಚಿವರ ಕ್ಷೇತ್ರದಲ್ಲಿ  ಬೆಟ್ಟದಷ್ಟು ಸಮಸ್ಯೆಗಳಿದ್ದರೂ ಏಕೆ ಸೂಕ್ತ ರೀತಿಯ ಸ್ಪಂದನೆ ಸಿಗುತ್ತಿಲ್ಲ ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ.

Advertisement

 

 

Advertisement

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror