ದೇಶವು ಡಿಜಿಟಲ್ ವ್ಯವಹಾರ ಆರಂಭವಾಗಿ ವರ್ಷಗಳು ಉರುಳಿದವು. ನೋಟ್ ಬ್ಯಾನ್ ಬಳಿಕ ಕ್ಯಾಶ್ ಲೆಸ್ ವ್ಯವಹಾರಕ್ಕೆ ಸರ್ಕಾರವು ಆದ್ಯತೆ ನೀಡಿತ್ತು. ಇದೀಗ ಜಾತ್ರೆಯಲ್ಲೂ ಡಿಜಿಟಲ್ ವ್ಯವಹಾರ ಆರಂಭಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯದ ಜಾತ್ರಾ ಉತ್ಸವದ ವೇಳೆ ಡಿಜಿಟಲ್ ವ್ಯವಹಾರ ಗಮನ ಸೆಳೆಯಿತು.
ಡಿಜಿಟಲ್ ವ್ಯವಹಾರ ಆರಂಭಗೊಂಡಾಗ ಅನೇಕರು ಗಾಬರಿಗೊಂಡರು. ಬೀದಿ ಬದಿಯ ವ್ಯಾಪಾರಿಗಳು ಡಿಜಿಟಲ್ ವ್ಯವಸ್ಥೆಗೆ ಬರುವುದು ಕಷ್ಟ ಎಂದು ಹೇಳಿಕೊಂಡಿದ್ದರು. ಆದರೆ ನಿರೀಕ್ಷೆಗೂ ಮೀರಿ ಇದೀಗ ಡಿಜಿಟಲ್ ವ್ಯವಹಾರದಲ್ಲಿ ಬೀದಿ ಬದಿಯ ವ್ಯಾಪಾರಿಗಳು, ಸಂತೆ, ಜಾತ್ರೆಯ ವ್ಯವಹಾರದಲ್ಲೂ ಈಗ ಡಿಜಿಟಲ್ ವ್ಯವಹಾರ ಆರಂಭಗೊಂಡಿದೆ. ಜನರೂ ಪಾವತಿಗೆ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ ವೇಳೆ ರಸ್ತೆ ಬದಿ ಮಾಲೆ ಇತ್ಯಾದಿ ಮಾರಾಟ ಮಾಡುವ ವ್ಯಾಪರಸ್ಥರಲ್ಲೂ ಪೋನ್ಪೇ, ಗೂಗಲ್ಪೇ ಮುಂತಾದ ಕ್ಯಾಶ್ ಲೆಸ್ ವ್ಯವಸ್ಥೆ ಜಾರಿಗೆ ಬಂದಿತ್ತು.
ಜಾತ್ರೆ, ಸಂತೆ ಇತ್ಯಾದಿಗಳಲ್ಲಿ ಈಗ ಡಿಜಿಟಲ್ ವ್ಯವಹಾರ, ಕ್ಯೂಆರ್ ಕೋಡ್ ಬಳಕೆ ಮಾಡದೇ ಇದ್ದರೆ ವ್ಯವಹಾರವೂ ಕಡಿಮೆ ಎನ್ನುವ ಸ್ಥಿತಿ ಬಂದಿದೆ ಎನ್ನುತ್ತಾರೆ ವ್ಯಾಪಾರಿ ಸೀತಮ್ಮ. ಹಿಂದೆಲ್ಲಾ ಜನರು ಸಂತೆಗೆ ಬರುವಾಗ ಹಣ ತರುತ್ತಿದ್ದರು. ಈಗ ಮೊಬೈಲ್ ತರುತ್ತಾರೆ, ಅದರಲ್ಲೇ ಹಣ ಪಾವತಿ ಮಾಡುತ್ತಾರೆ. ಕ್ಯೂ ಆರ್ ಕೋಡ್, ಡಿಜಿಟಲ್ ವ್ಯವಸ್ಥೆ ನಮ್ಮಲ್ಲಿ ಇಲ್ಲದೇ ಇದ್ದರೆ ವ್ಯವಹಾರ ಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ವ್ಯಾಪಾರಿ ಬಸಪ್ಪ.
ಹಣ ಕಳೆದು ಹೋಗುವ ಭಯ, ಕಳ್ಳರ ಭಯ, ಪಿಕ್ ಪಾಕೆಟ್ ಇತ್ಯಾದಿಗಳಿಂದ ತಪ್ಪಿಸಿಕೊಳ್ಳಲೂ ಡಿಜಿಟಲ್ ವ್ಯವಹಾರ ಅನುಕೂಲವಾಗಿದೆ. ತುಂಬಾ ಜನರು ಸೇರಿದಾಗ ನೆಟ್ವರ್ಕ್ ಸಮಸ್ಯೆ ಕಂಡುಬರುತ್ತದೆ. ಆಗ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಇಂತಹ ಜಾತ್ರೆಗಳಲ್ಲಿ ಈಗ ನೆಟ್ವರ್ಕ್ ಕಡೆಗೂ ಗಮನ ಹರಿಸಬೇಕಾಗಿದೆ.
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…