ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು

May 8, 2025
7:21 AM
ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ ಸಂದರ್ಭದಲ್ಲಿ ಕನಿಷ್ಟ ಬರಹಗಾರರು, ಪತ್ರಕರ್ತರು, ಸಾಮಾಜಿಕ ಜಾಲತಾಣಗಳಲ್ಲಿ ಇರುವ ಮಾಹಿತಿದಾರರು, ಸಂಶೋಧಕರು ಇವರನ್ನೆಲ್ಲ ಪ್ರೋತ್ಸಾಹಿಸೋಣ

ಎಷ್ಟೋ ಬಾರಿ ಈ ಬಗ್ಗೆ ಬರೆಯಬೇಕು ಎಂಬ ಆಸೆ ಬಂದಿತ್ತು.ಆದರೆ ಇದು ನನಗೆ ಸಂಬಂಧ ಪಟ್ಟದ್ದಲ್ಲ ಎಂದು ಸುಮ್ಮನಾದೆ. ಮೊನ್ನೆ ಒಂದು ವಾರದ ಹಿಂದೆ ಓರ್ವ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿಯಿಂದ ಬರೆಯುವ ಪತ್ರಕರ್ತ ನನ್ನಲ್ಲಿ ತನ್ನ ಅಳಲನ್ನು ತೋಡಿಕೊಂಡ ಪ್ರಕಾರ ತಾನು ಕೃಷಿಕರ ಪರವಾಗಿ ಆಗಿಂದಾಗ್ಗೆ ಬರಹಗಳನ್ನು ಬರೆಯುತ್ತೇನೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಬಗ್ಗೆ ಅನಾವಶ್ಯಕ ಕಮ್ಮೆಂಟುಗಳು ಬರುತ್ತಿವೆ.ಇದು ನನಗೆ ಮುಂದೆ ಬರೆಯುವುದೇ ಬೇಡ ಎನಿಸುತ್ತಿದೆ ಎಂದು.…..ಮುಂದೆ ಓದಿ….

Advertisement
Advertisement

ಒಂದಿಪ್ಪತ್ತು ವರ್ಷಗಳ ಹಿಂದೆ ಶಿರಸಿಯ ಓರ್ವ ಅಡಿಕೆಯ ಮೌಲ್ಯ ವರ್ಧನೆ ಕುರಿತು ಸಂಶೋಧನೆ ಮಾಡುತ್ತಿದ್ದರು, ಹಿರಿಯರು ತಮಗೆ ಬಂದ ಕಮೆಂಟುಗಳ ಬಗ್ಗೆ ಇದೇ ರೀತಿ ಹೇಳಿದ್ದರು.ರಾಜ್ಯದ ಹಲವು ಕೃಷಿ ಸಂಶೋಧಕರು ತಮ್ಮ ಸಂಶೋಧನೆಗಳ ಫಲಿತಾಂಶಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದಾಗ ಅವರಿಗೂ ಇದೇ ರೀತಿಯ ಅನುಭವ ಆದ್ದನ್ನು ನನ್ನಲ್ಲಿ ಹಂಚಿಕೊಂಡಿದ್ದರು.ಇದರಿಂದಾಗಿ ಅವರು ಬರೆಯುವುದನ್ನೇ ನಿಲ್ಲಿಸಿದರು.ಅವರಿಂದು ಏನಿದ್ದರೂ ಆಂಗ್ಲ ಭಾಷೆಯಲ್ಲಿ ಮಾತ್ರ ಬರೆಯುತ್ತಿದ್ದಾರೆ.

ಕೃಷಿ-ಕೃಷಿ ಮಾರುಕಟ್ಟೆ, ಕೃಷಿ ಕ್ಷೇತ್ರದ ಬಗ್ಗೆ ಬರಹಗಳನ್ನು ಓದಲು ” ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

ನಾನು ಈ ಕ್ಷೇತ್ರದ ಬಗ್ಗೆ ಬರೆಯುವುದು ಆರಂಭ ಮಾಡಿ 42 ವರ್ಷಗಳ ಕಳೆದವು. ನನಗೂ ಮೇಲೆ ತಿಳಿಸಿದ ಅನುಭವ ಹಲವು ಬಾರಿ ಆಗಿದೆ. ಹಲವು ಬೆದರಿಕೆ ಕರೆಗಳೂ ಬಂದಿವೆ. ಆದರೆ ನನ್ನನ್ನು ಬೆಳೆಸಿದ ಈ ಕ್ಷೇತ್ರದ ಬಗ್ಗೆ ಬರೆಯುವುದು ಬಿಟ್ಟಿಲ್ಲ.ಇದನ್ನೇ ನಾನು ಅವರಿಗೆ ತಿಳಿ ಹೇಳಿದೆ. ಕಲಿತ ವಿದ್ಯೆಯನ್ನು ನಮ್ಮ ಮೂಲದ ಒಳಿತಿಗಾಗಿ ನಾವು ಬಳಸಬೇಕೆಂಬ ಕಿವಿ ಮಾತನ್ನು ಹೇಳಿದೆ.

ಕೃಷಿಕರು ಅಲ್ಲದ ಅದೆಷ್ಟೋ ಬರಹಗಾರರು, ಪತ್ರಕರ್ತರು ಹಾಗೂ ಸಂಶೋಧಕರು ಕೃಷಿಕರ ಬಗ್ಗೆ ಕಾಳಜಿಯಿಂದ ಬರೆದವರಿದ್ದಾರೆ, ಬರೆಯುತ್ತಲೇ ಇದ್ದಾರೆ. ಇವರಿಗೂ ಇದೇ ಅನುಭವ.ಇಲ್ಲೂ ಅವರಿಗೆ ನಾನು ಹೇಳಿದ್ದೊಂದೇ ಮಾತು ಅವಹೇಳನ ಯಾವತ್ತೂ ಒಳ್ಳೆಯದು, ಅವು ನಮ್ಮ ಬೆಳವಣಿಗೆಗೆ ಪೂರಕ ಎಂಬುದು.

Advertisement

ಬರವಣಿಗೆಯಿಂದ ಆಗುವ ಲಾಭಗಳೇನು?:

  1. ಇವು ಕೃಷಿಕರ ಪರವಾದ ಧ್ವನಿ ಆಗಿರುತ್ತದೆ. ಇವನ್ನು ಆಡಳಿತಗಾರರು, ನೀತಿ ಮಾಡುವವರು ಗಣನೆಗೆ ತೆಗೆದುಕೊಂಡು ಪರಿಹಾರ ಕೊಡಲು ಸಾಧ್ಯ. ಉದಾಹರಣೆಗೆ 2000 ನೆ ಇಸವಿಯಲ್ಲಿ ಅಡಿಕೆ ಧಾರಣೆ ಕುಸಿದಾಗ ಸರಕಾರ ಮಾರುಕಟ್ಟೆ ಮಧ್ಯಪ್ರವೇಶ ಸಾಧ್ಯ ಎಂದಿದ್ದೆ.ಈ ವಿಚಾರ ಪತ್ರಿಕೆಗಳಲ್ಲಿ ಬಂದು ಅದು ಸರಕಾರಕ್ಕೆ ತಲಪಿ ಮುಂದೆ ಅದು ಅನುಷ್ಠಾನ ಆದ್ದು ಈಗ ಇತಿಹಾಸ.ಅದೇ ರೀತಿ ನಾನು ರೈತರಿಗೆ ಬಡ್ಡಿ ರಹಿತ ಸಾಲ ಕೊಡಬೇಕೆಂದು ಪತ್ರಿಕೆಗಳಲ್ಲಿ ಬಂದು ಅದೂ ಜ್ಯಾರಿಗೆ ಬಂದದ್ದು ಎಲ್ಲರಿಗೂ ತಿಳಿದ ವಿಷಯ. ಹಲವು ವರ್ಷಗಳ ಕಾಲ ಉಪಯೋಗ ಇಲ್ಲದೆ ಇದ್ದ ಪುತ್ತೂರಿನ ಎಪಿಎಂಸಿ ಬಗ್ಗೆ ಹೈಕೋರ್ಟ್ ಅಲ್ಲಿ ದಾವೆ ಆಗುತ್ತಿದ್ದಾಗ ಅಂತಿಮವಾಗಿ ತೀರ್ಪು ನೀಡುವಾಗ ನನ್ನ ಆಂಗ್ಲ ಭಾಷೆಯ ಲೇಖನವನ್ನು ಉಲ್ಲೇಖಿಸಿ ತೀರ್ಪು ಬಂದದ್ದು ಬರಹಗಳ ಮಹತ್ವವನ್ನು ತಿಳಿಸುತ್ತದೆ. ಇದೇ ರೀತಿ ನಾನು ಬರೆದ ಹಲವು ಕೃಷಿ ಪರ ಲೇಖನಗಳು ಪಾರ್ಲಿಮೆಂಟರಿ ಡಾಕುಮೆಂಟೇಷನ್ ಗೆ ಸೇರಿದ್ದು ಅವನ್ನು ನೀತಿ ರೂಪಿಸುವಾಗ ಸರಕಾರ ಬಳಸಿಕೊಂಡಿದೆ.ಇದರೊಂದಿಗೆ fao of the United nations nanna ಪ್ರಕಟಿತ ಆಂಗ್ಲ ಭಾಷೆಯ ಲೇಖನವನ್ನು ದಾಖಲೆಯಾಗಿ ಸ್ವೀಕರಿಸಿದೆ.ಇವೆಲ್ಲಾ ಬರಹಗಳ ಮಹತ್ವವನ್ನು ತಿಳಿಸುತ್ತದೆ.
  2. .ಬರವಣಿಗೆಗಳು ಕೃಷಿಕರಿಗೆ ದಾರಿ ದೀಪ ಆಗುತ್ತವೆ. ಹಲವು ಬರಹಗಳು ಅನುಭವಿ ಕೃಷಿಕರ ದ್ವನಿಗಳಾಗಿದ್ದು ಇವು ಉಳಿದವರಿಗೆ ಮಾರ್ಗದರ್ಶನ ನೀಡಬಲ್ಲದು.
  3. ಕೃಷಿಗೆ ಪೂರಕವಾದ ನೀತಿ ನಿಯಮಗಳ ಬಗ್ಗೆ ಮಾಹಿತಿ.
  4. ಕೃಷಿ ಕ್ಷೇತ್ರದಲ್ಲಿ ಆಗುವ ಬದಲಾವಣೆಗಳ ಬಗ್ಗೆ ನಿರಂತರ ಮಾಹಿತಿ.ಉದಾಹರಣೆಗೆ ತಂತ್ರಜ್ಞಾನದ ಬಗ್ಗೆ,ಬೇಡಿಕೆ ಮತ್ತು ಪೂರೈಕೆ ಬಗ್ಗೆ ಇತ್ಯಾದಿ.
  5. ಈಗಿನ ಹಾಗೂ ಭವಿಷ್ಯದ ಸಂಶೋಧಕರಿಗೆ ಈ ಬರಹಗಳು ತಮ್ಮ ಸಂಶೋಧನೆಗಳಿಗೆ ಆಹಾರ ಆಗುತ್ತದೆ.

ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಕೃಷಿ ಕ್ಷೇತ್ರದಲ್ಲಿ ಸಮಸ್ಯೆಗಳು ಬಂದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಿಭಾಗಗಳು ಮಾದ್ಯಮಗಳಲ್ಲಿ ಬಂದ ಲೇಖನಗಳು ಮತ್ತು ವರದಿಗಳು ಮಾತ್ರವಲ್ಲದೆ ಸಂಶೋಧಕರ ಲೇಖನಗಳು ಹಾಗೂ ಅಭಿಪ್ರಾಯಗಳನ್ನು ಪಡೆದು ಪರಿಹಾರಗಳನ್ನು ಸೂಚಿಸುತ್ತವೆ.

ಕೃಷಿ-ಕೃಷಿ ಮಾರುಕಟ್ಟೆ, ಕೃಷಿ ಕ್ಷೇತ್ರದ ಬಗ್ಗೆ ಬರಹಗಳನ್ನು ಓದಲು ” ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

ಇವಲ್ಲದೆ ಇನ್ನಷ್ಟು ಪ್ರಯೋಜನೆಗಳು ಕೃಷಿ ಕ್ಷೇತಕ್ಕಿದ್ದು ಈ ನಿಟ್ಟಿನಲ್ಲಿ ನಾವು ಮೇಲೆ ಹೆಸರಿಸಿದವರನ್ನು ಪ್ರೋತ್ಸಾಹಿಸಬೇಕು.ಎಲ್ಲಾ ಬರಹಗಳು ಕೃಷಿಕರ ಅನುಭವ, ಅವರ ಹಿತಾಸಕ್ತಿಗೆ ಪೂರಕ ಆಗಿರದೆ ಇದ್ದರೂ ಇವರನ್ನು ಹೀಯಾಳಿಸುವುದು ಇಲ್ಲವೇ ಆಪಾದನೆ ಮಾಡುವುದು ಇತ್ಯಾದಿಗಳನ್ನು ಇನ್ನಾದರೂ ಬಿಡಬೇಕು. ನಮ್ಮಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ ಸಂದರ್ಭದಲ್ಲಿ ಕನಿಷ್ಟ ಬರಹಗಾರರು, ಪತ್ರಕರ್ತರು, ಸಾಮಾಜಿಕ ಜಾಲತಾಣಗಳಲ್ಲಿ ಇರುವ ಮಾಹಿತಿದಾರರು, ಸಂಶೋಧಕರು ಇವರನ್ನೆಲ್ಲ ಪ್ರೋತ್ಸಾಹಿಸೋಣ. ಯಾವುದೇ ಬರಹಗಳು ಪುಸ್ತಕದ ಬದನೇಕಾಯಿ ಅಲ್ಲ, ಅವಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕಾರಿ. ಇನ್ನು ಕೆಲಸವಿಲ್ಲದೆ ಯಾರೂ ಕೃಷಿಕರ ಪರವಾಗಿ ಧ್ವನಿ ಎತ್ತುವುದಿಲ್ಲ. ಪ್ರತೀ ಒಂದು ಉದ್ಯೋಗ ಇಲ್ಲವೇ ಕೆಲಸದಲ್ಲಿ ಅದರದ್ದೇ ಆದ ತತ್ವಗಳಿರುತ್ತದೆ, ನಿಯಮಗಳಿರುತ್ತವೆ ಇವನ್ನ ಮೀರಿ ಬರಹಗಳು ಬರುವುದು ಅಪರೂಪ. ಬಹು ಪಾಲು ಬರಹಗಾರರು, ಪತ್ರಕರ್ತರು ಹಾಗೂ ಸಂಶೋಧಕರು ಅಧ್ಯಯನ ಮಾಡಿಯೇ ಬರಹಗಳನ್ನು ಪ್ರಕಟಿಸುವುದು ರೂಢಿ. ಆದ್ದರಿಂದ ಇವರನ್ನು ಅನಾವಶ್ಯಕವಾಗಿ ಕಾಮೆಂಟ್ ಮಾಡುವುದನ್ನು ಇನ್ನಾದರೂ ನಿಲ್ಲಿಸಿ ಕೃಷಿಪರ ಕಾಳಜಿ ಇರುವ ಇವರನ್ನು ಬೆಂಬಲಿಸಿ ಕೃಷಿ ಕ್ಷೇತ್ರದ ಅಭಿವೃದ್ಧಿ,ಬೆಳವಣಿಗೆ ಹಾಗೂ ಪ್ರಗತಿಯನ್ನು ಸಾಧಿಸೋಣ. ಲ್ಯಾಬ್ ಟೂ ಲ್ಯಾಂಡ್ ಯಾಕಾಗುವುದಿಲ್ಲ ಎಂಬುದಕ್ಕೂ ಮೇಲೆ ತಿಳಿಸಿದ ಮಾಹಿತಿಗಳೇ ಕಾರಣ.

ಕೃಷಿ-ಕೃಷಿ ಮಾರುಕಟ್ಟೆ, ಕೃಷಿ ಕ್ಷೇತ್ರದ ಬಗ್ಗೆ ಬರಹಗಳನ್ನು ಓದಲು ” ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

Advertisement

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ

ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ
May 22, 2025
9:45 PM
by: ದ ರೂರಲ್ ಮಿರರ್.ಕಾಂ
ಅಕಾಲಿಕ ಮಳೆ | ಮಾವು ಇಳುವರಿ ಕುಸಿತ | ಬೆಲೆ ಕುಸಿತ | ರೈತರಿಗೆ ನಿರಾಸೆ |
May 22, 2025
7:33 AM
by: The Rural Mirror ಸುದ್ದಿಜಾಲ
ಛದ್ಮ ವೇಷದಲ್ಲಿ ನಮ್ಮ ಪ್ರಜಾಪ್ರಭುತ್ವ
May 22, 2025
6:53 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group