Exclusive - Mirror Hunt

ಚೆಂಬು-ಸಂಪಾಜೆಯಲ್ಲಿ “ಚಾರ್ಲಿ” ನೆನಪು.. ! | ಮನೆಯವರ ಜೊತೆಗೇ ಓಡುವ ನಾಯಿ…. ! |ಭೂಕಂಪನದ ಭಯದ ನಡುವೆ ಈ ಸಂಬಂಧಗಳಿಗೆ ಏನು ಹೇಳೋಣ…. ? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಳೆದ ಕೆಲವು ದಿನಗಳಿಂದ ಕೊಡಗಿನ ಚೆಂಬು, ಸುಳ್ಯದ ಸಂಪಾಜೆ ಸೇರಿದಂತೆ ಆಸುಪಾಸಿನ ಪ್ರದೇಶದಲ್ಲಿ  ಭಯದ ವಾತಾವರಣ ಇದೆ. ಹೀಗಾಗಿ ಉದ್ಯೋಗದಲ್ಲಿ ಇರುವ ಕೆಲವರು ತಮ್ಮ ಮನೆಯಲ್ಲಿರುವ ಸಾಮಾಗ್ರಿಗಳ ಸಾಗಾಟ ಮಾಡುತ್ತಿದ್ದಾರೆ. ನಗರ ಪ್ರದೇಶದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಾಕು ಪ್ರಾಣಿಗಳ ಒಡನಾಟ ವಿವರಿಸಲು ಸಾಧ್ಯವಿಲ್ಲ. ಈ ವೇಳೆ ಚಾರ್ಲಿ ಸಿನಿಮಾ ನೆನಪಿಗೆ ಬರುತ್ತಿದೆ.

Advertisement
Advertisement
ಎಂ ಚೆಂಬು ಪ್ರದೇಶದಲ್ಲಿ ಕೃಷಿ ಭೂಮಿ ಹೊಂದಿದ್ದ ಕುಟುಂಬವೊಂದು ಕಳೆದ ಕೆಲವು ದಿನಗಳ ಭೂಕಂಪನ ಹಾಗೂ ಭಾರೀ ಮಳೆಯ ಕಾರಣದಿಂದ ಕೃಷಿ ಹಾಗೂ ಮನೆಯನ್ನು ಮಳೆಗಾಲ ಮುಗಿಯುವರೆಗೆ ಬಿಟ್ಟು ನಗರದಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿತು. ಹೀಗಾಗಿ ಮನೆಯಲ್ಲಿರುವ ವಸ್ತುಗಳ ಸಾಗಾಟವನ್ನು ಮಾಡುತ್ತಿದ್ದಾಗ ಸಂಜೆ ವೇಳೆ ಮನೆಯವರು ಅಟೋ ಮೂಲಕ ಸಾಗಿದರು. ಈ ಸಮಯದಲ್ಲಿ  ಮನೆಯ ಸಾಕು ನಾಯಿ ಅಟೋ ಜೊತೆ ಸುಮಾರು ಮೂರು ಕಿಮೀ ದೂರ ಓಡುತ್ತಾ ಸಾಗಿತು.ಬಳಿಕ ಮನೆಯವರು ನಾಯಿಯನ್ನೂ ಜೊತೆಯಲ್ಲಿ ಕರೆದೊಯ್ದರು. ಈ ದೃಶ್ಯ ಶ್ವಾನ ಪ್ರೀತಿಯನ್ನು ಮತ್ತೆ ಸಾಕ್ಷೀಕರಿಸುತ್ತದೆ.

ಚೆಂಬು ಪ್ರದೇಶದಲ್ಲಿ  ಹಲವಾರು ಮಂದಿಯಲ್ಲಿ ಆತಂಕ ಇದ್ದರೂ ಅನಿವಾರ್ಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಖಾಸಗಿ ಉದ್ಯೋಗ ಇದ್ದು ನಗರದಲ್ಲಿ ಕೆಲಸ ಮಾಡುವವರು ತಾತ್ಕಾಲಿಕವಾಗಿ ವಾಸ್ತವ್ಯ ಸ್ಥಳಾಂತರಕ್ಕೆ ಚಿಂತನೆ ನಡೆಸಿದ್ದಾರೆ. ಸಾಕು ಪ್ರಾಣಿಗಳು ಇರುವ ಮಂದಿ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ. ಈಗಾಗಲೇ ಈ ಪ್ರದೇಶದಲ್ಲಿ ಅಡಿಕೆ ಹಳದಿ ರೋಗ ಕಂಡುಬಂದು ಕೃಷಿ ನಾಶವಾದ ಕಾರಣ ಹೈನುಗಾರಿಕೆ ಸೇರಿದಂತೆ ವಿವಿಧ ಕೃಷಿಯಲ್ಲಿ  ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಹೈನುಗಾರಿಕೆ ಇರುವವರು ಧೈರ್ಯದಿಂದಲೇ ಬದುಕು ಸಾಗಿಸುತ್ತಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ

30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

13 hours ago

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…

20 hours ago

ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…

20 hours ago

14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ

ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…

20 hours ago

ಭ್ರಷ್ಟಾಚಾರ  ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ – ಉಪಲೋಕಾಯುಕ್ತ ಬಿ. ವೀರಪ್ಪ

ಭ್ರಷ್ಟಾಚಾರ  ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ  ಉಪಲೋಕಾಯುಕ್ತ ಬಿ.…

20 hours ago