Advertisement
ಅನುಕ್ರಮ

ಚಿಲಿಪಿಲಿ | ಹಕ್ಕಿಗಳ ಕೂಗನ್ನು ಅನುಕರಣೆ ಮಾಡಬಲ್ಲ ಕಾಜಾಣ ಹಕ್ಕಿ..! |

Share

ನಮ್ಮ ಸುತ್ತಲೂ ಹಲವು ಹಕ್ಕಿಗಳ ಕಲರವ ಕೇಳುತ್ತಿರುತ್ತವೆ. ಒಂದೊಂದು ಹಕ್ಕಿಯ ದನಿಯೂ ಬೇರೆ ಬೇರೆ. ಕೆಲವೊಮ್ಮೆ ಹೋಲಿಕೆ ಇದ್ದು ನಮ್ಮನ್ನು ಬೆಸ್ತು ಬೀಳಿಸುವ ಹಕ್ಕಿಗಳೂ ಇವೆ. ಹೊಸ ಹಕ್ಕಿಯ ದನಿಯೆಂದು ಬೆಂಬತ್ತಿ ಹೋದರೆ ಹೊಸ ದನಿಯೊಡೆಯನನ್ನು ಕಾಣದೆ ವಾಪಾಸ್ ಆಗ ಬೇಕಾದೀತು. ಕೆಲವು ಹಕ್ಕಿಗಳು ಹಲವು ರೀತಿಯಲ್ಲಿ ಕೂಗ ಬಲ್ಲವು. ಅಂತಹ ವಿಶಿಷ್ಟ ಹಕ್ಕಿಗಳ ಸಾಲಿನಲ್ಲಿ ಈ ಕಾಜಾಣ ಹಕ್ಕಿಯೂ ನಿಲ್ಲುತ್ತದೆ. ಹತ್ತಕ್ಕೂ ಮಿಕ್ಕಿ ಇತರ ಹಕ್ಕಿಗಳ ಕೂಗನ್ನು ಅನುಕರಣೆ ಮಾಡ ಬಲ್ಲುದು.

ಮೈನಾ ಗಾತ್ರದ (31 cm-35 ಛcm) ಈ ಹಕ್ಕಿ ನೀಲಿಗಪ್ಪಿನ ಬಣ್ಣದ್ದಾಗಿದೆ. ತಲೆಯಲ್ಲಿ ಪುಟ್ಟ ಜುಟ್ಟಿನಂತ ರಚನೆಯಿದೆ. ಗಟ್ಟಿಗಂಟಲಿನ ಹಕ್ಕಿಯಾಗಿದೆ. ಭಾರತ , ಬಾಂಗ್ಲಾ, ಬರ್ಮಾ ಮೊದಲಾದ ಕಡೆಗಳಲ್ಲಿ ಕಂಡು ಬರುತ್ತವೆ. ಹತ್ತಾರು ಉಪಜಾತಿಗಳು ಕಾಜಾಣದಲ್ಲಿವೆ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸ ಗಳಿಲ್ಲ. ಆಕ್ರಮಣಕಾರಿ ಹಕ್ಕಿಯಾಗಿದ್ದು ರಾಜ ಕಾಗೆ ಎಂಬ ಹೆಸರೂ ಇದೆ. ವೈರಿ ಎಷ್ಟೇ ಪ್ರಬಲವಾಗಿದ್ದರೂ ಅದರ ಮೇಲೆ ಎಗರಿ ಬೀಳುವ ಧೈರ್ಯಶಾಲಿ ಹಕ್ಕಿಯಾಗಿದೆ. ಒಂಟಿ ಅಥವಾ ಜೋಡಿಯಾಗಿರುತ್ತದೆ. ಗುಂಪಿನಲ್ಲಿರುವುದು ಅಪರೂಪ. ಒಮ್ಮೆಗೆ 3-5 ಮೊಟ್ಟೆಗಳನ್ನಿಡುತ್ತವೆ. ಮರಿಗಳ ಜವಾಬ್ದಾರಿಯನ್ನು ಎರಡೂ ಹಕ್ಕಿಗಳು ಹಂಚಿಕೊಳ್ಳುತ್ತವೆ. ಕೀಟಗಳು, ಹಣ್ಣುಗಳು, ಇವುಗಳ ಆಹಾರವಾಗಿದೆ.
ಬರಹ :
# ಅಶ್ವಿನಿಮೂರ್ತಿ ಅಯ್ಯನಕಟ್ಟೆ # ಛಾಯಾಚಿತ್ರ :ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ

ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

5 hours ago

ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ

ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…

5 hours ago

ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!

ಏಪ್ರಿಲ್ 4ರವರೆಗೆ ಮಳೆ ಮುಂದುವರಿಯಲಿದೆ, ಬಳಿಕ ತಾತ್ಕಾಲಿಕ ಕಡಿಮೆ. ಏಪ್ರಿಲ್ 10ರಿಂದ ಮತ್ತೆ…

21 hours ago

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

1 day ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

1 day ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

1 day ago