Advertisement
ಅನುಕ್ರಮ

ಚಿಲಿಪಿಲಿ | ಹಕ್ಕಿಗಳ ಕೂಗನ್ನು ಅನುಕರಣೆ ಮಾಡಬಲ್ಲ ಕಾಜಾಣ ಹಕ್ಕಿ..! |

Share

ನಮ್ಮ ಸುತ್ತಲೂ ಹಲವು ಹಕ್ಕಿಗಳ ಕಲರವ ಕೇಳುತ್ತಿರುತ್ತವೆ. ಒಂದೊಂದು ಹಕ್ಕಿಯ ದನಿಯೂ ಬೇರೆ ಬೇರೆ. ಕೆಲವೊಮ್ಮೆ ಹೋಲಿಕೆ ಇದ್ದು ನಮ್ಮನ್ನು ಬೆಸ್ತು ಬೀಳಿಸುವ ಹಕ್ಕಿಗಳೂ ಇವೆ. ಹೊಸ ಹಕ್ಕಿಯ ದನಿಯೆಂದು ಬೆಂಬತ್ತಿ ಹೋದರೆ ಹೊಸ ದನಿಯೊಡೆಯನನ್ನು ಕಾಣದೆ ವಾಪಾಸ್ ಆಗ ಬೇಕಾದೀತು. ಕೆಲವು ಹಕ್ಕಿಗಳು ಹಲವು ರೀತಿಯಲ್ಲಿ ಕೂಗ ಬಲ್ಲವು. ಅಂತಹ ವಿಶಿಷ್ಟ ಹಕ್ಕಿಗಳ ಸಾಲಿನಲ್ಲಿ ಈ ಕಾಜಾಣ ಹಕ್ಕಿಯೂ ನಿಲ್ಲುತ್ತದೆ. ಹತ್ತಕ್ಕೂ ಮಿಕ್ಕಿ ಇತರ ಹಕ್ಕಿಗಳ ಕೂಗನ್ನು ಅನುಕರಣೆ ಮಾಡ ಬಲ್ಲುದು.

Advertisement
Advertisement

ಮೈನಾ ಗಾತ್ರದ (31 cm-35 ಛcm) ಈ ಹಕ್ಕಿ ನೀಲಿಗಪ್ಪಿನ ಬಣ್ಣದ್ದಾಗಿದೆ. ತಲೆಯಲ್ಲಿ ಪುಟ್ಟ ಜುಟ್ಟಿನಂತ ರಚನೆಯಿದೆ. ಗಟ್ಟಿಗಂಟಲಿನ ಹಕ್ಕಿಯಾಗಿದೆ. ಭಾರತ , ಬಾಂಗ್ಲಾ, ಬರ್ಮಾ ಮೊದಲಾದ ಕಡೆಗಳಲ್ಲಿ ಕಂಡು ಬರುತ್ತವೆ. ಹತ್ತಾರು ಉಪಜಾತಿಗಳು ಕಾಜಾಣದಲ್ಲಿವೆ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸ ಗಳಿಲ್ಲ. ಆಕ್ರಮಣಕಾರಿ ಹಕ್ಕಿಯಾಗಿದ್ದು ರಾಜ ಕಾಗೆ ಎಂಬ ಹೆಸರೂ ಇದೆ. ವೈರಿ ಎಷ್ಟೇ ಪ್ರಬಲವಾಗಿದ್ದರೂ ಅದರ ಮೇಲೆ ಎಗರಿ ಬೀಳುವ ಧೈರ್ಯಶಾಲಿ ಹಕ್ಕಿಯಾಗಿದೆ. ಒಂಟಿ ಅಥವಾ ಜೋಡಿಯಾಗಿರುತ್ತದೆ. ಗುಂಪಿನಲ್ಲಿರುವುದು ಅಪರೂಪ. ಒಮ್ಮೆಗೆ 3-5 ಮೊಟ್ಟೆಗಳನ್ನಿಡುತ್ತವೆ. ಮರಿಗಳ ಜವಾಬ್ದಾರಿಯನ್ನು ಎರಡೂ ಹಕ್ಕಿಗಳು ಹಂಚಿಕೊಳ್ಳುತ್ತವೆ. ಕೀಟಗಳು, ಹಣ್ಣುಗಳು, ಇವುಗಳ ಆಹಾರವಾಗಿದೆ.
ಬರಹ :
# ಅಶ್ವಿನಿಮೂರ್ತಿ ಅಯ್ಯನಕಟ್ಟೆ # ಛಾಯಾಚಿತ್ರ :ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

9 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

9 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

9 hours ago

ಮಾಯಾಮೃಗ ಮಾಯಾಮೃಗ….

ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…

9 hours ago

ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ  ಅಗತ್ಯ ಕ್ರಮ…

10 hours ago

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ

ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?.  ಈ ಪ್ರಶ್ನೆಗೆ ಹಲವರದು ಹಲವು…

20 hours ago