Advertisement
ಅನುಕ್ರಮ

“ಚಿಲಿಪಿಲಿ” ಹಕ್ಕಿ ನೀಡುವ ರಾಧಾಕೃಷ್ಣ ರಾವ್ ಬಾಳಿಲ

Share
ರೂರಲ್‌ ಮಿರರ್‌ ಹೊಸತೊಂದು ಅಂಕಣ ಶುರು ಮಾಡುತ್ತಿದೆ. ಹಕ್ಕಿಗಳ ಲೋಕವನ್ನು ಪರಿಚಯ ಮಾಡುವ ಚಿಲಿಪಿಲಿ ಅಂಕಣ ಇದು. ಬರಹಗಾರ್ತಿ ಅಶ್ವಿನಿಮೂರ್ತಿ ಬಾಳಿಲ ಈ ಅಂಕಣ ಬರೆಯುವರು. ಹಕ್ಕಿಗಳ ಪರಿಚಯ ಮಾಡುವರು. ಇದಕ್ಕೆ ಚಿತ್ರವನ್ನು ನೀಡುವವರು  ರಾಧಾಕೃಷ್ಣ ರಾವ್ ಯು ಬಾಳಿಲ. ಫೋಟೋಗ್ರಫಿ ಒಂದು ತಪಸ್ಸು. ಅದರಲ್ಲೂ ಹಕ್ಕಿ, ಪರಿಸರದ ಛಾಯಾಚಿತ್ರ ತೆಗೆಯುವುದು  ಎಂದರೆ ಅದು ಬಹುದೊಡ್ಡ ತಪಸ್ಸು.
ಸಾವಿರ ಶಬ್ದಗಳಲ್ಲಿ ಹೇಳಲಾಗದ್ದನ್ನು ಒಂದು ಛಾಯಾಚಿತ್ರ ಅರ್ಥಮಾಡಿಸಿ ಬಿಡುತ್ತದೆ. ಮಾತನಾಡುವ ಫೋಟೋವನ್ನು ತೆಗೆಯುವುದೂ ಒಂದು ಕಲೆ. ಛಾಯಾಗ್ರಹಣ ಕಲೆಯನ್ನು ಒಲಿಸಿಕೊಂಡವರಲ್ಲಿ ಪ್ರಮುಖರಾಗಿ ಕಂಡು ಬರುವವರು ರಾಧಾಕೃಷ್ಣ ರಾವ್ ಯು ಬಾಳಿಲ ಅವರು. ಇವರು ಸೆರೆ ಹಿಡಿಯುವ ಪ್ರತಿ ಫೋಟೋ ವೂ ಒಂದು ಸಂಭಾಷಣೆಯೇ. ಅದರಲ್ಲೂ ಪಕ್ಷಿ ಚಿತ್ರಣವಂತೂ ಅದ್ಭುತ.  ಕೃಷಿಕರಾಗಿರುವ ಇವರು ವನ್ಯಜೀವಿ ಛಾಯಾಗ್ರಾಹಕರು.  ಅಪಾರ ಶ್ರದ್ಧೆ, ಪರಿಶ್ರಮ , ತಾಳ್ಮೆ, ಹಾಗೂ ನೂತನ ತಂತ್ರಜ್ಞಾನದ ಅರಿವು ವನ್ಯಜೀವಿ ಛಾಯಾಗ್ರಹಣಕ್ಕೆ ಬಹಳ ಅಗತ್ಯ. ಕೆಲವೊಂದು ಫೋಟೋಗಳನ್ನು ತೆಗೆಯಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಹಕ್ಕಿಗಳ ಮನಸ್ಥಿಯನ್ನು ಅರ್ಥಮಾಡಿಕೊಂಡು , ವಿವಿಧ ಭಂಗಿಗಳನ್ನು ಸಮರ್ಥವಾಗಿ ಸೆರೆಹಿಡಿಯ ಬಲ್ಲರು. ಇವರು ತೆಗೆದ ಪ್ರತಿಯೊಂದು ಹಕ್ಕಿಗಳ ಛಾಯಾಚಿತ್ರವೂ ಏನನ್ನೋ ಧ್ವನಿಸುತ್ತದೆ. ಬರಿಗಣ್ಣಿನಲ್ಲಿ ಗೋಚರಿಸದ ಸೂಕ್ಷ್ಮ ಸಂಗತಿಗಳು ಕ್ಯಾಮರಾ ಕಣ್ಣಿನಿಂದ ತಪ್ಪಿಸಿ ಕೊಳ್ಳಲಾಗದು.  ಇವರ ಫೋಟೋಗಳು ಪಕ್ಷಿ ಲೋಕದ ಸುಂದರ‌ ಚಿತ್ರಣಗಳು. ಇವರು ಅಶ್ವಿನಿಮೂರ್ತಿ ಅವರಿಗೆ ಹಕ್ಕಿಗಳ ಲೋಕವನ್ನು ಪರಿಚಯಿಸುವ ಉದ್ದೇಶದಿಂದ ಛಾಯಾಚಿತ್ರಗಳನ್ನು ನೀಡುತ್ತಾರೆ.
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ನಿಷೇಧ ಇಲ್ಲ – ಈಗ ಅಡಿಕೆ ಬಳಕೆಯ ನಿಯಂತ್ರಣದತ್ತ ಫೋಕಸ್

ಅಡಿಕೆ ನಿಷೇಧಕ್ಕಿಂತ ಬಳಕೆಯ ನಿಯಂತ್ರಣವೇ ಪರಿಣಾಮಕಾರಿ ಎಂದು WHO ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದ…

4 hours ago

ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…

9 hours ago

ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ

ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…

9 hours ago

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

19 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

19 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

19 hours ago