ಅನುಕ್ರಮ

“ಚಿಲಿಪಿಲಿ” ಹಕ್ಕಿ ನೀಡುವ ರಾಧಾಕೃಷ್ಣ ರಾವ್ ಬಾಳಿಲ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ರೂರಲ್‌ ಮಿರರ್‌ ಹೊಸತೊಂದು ಅಂಕಣ ಶುರು ಮಾಡುತ್ತಿದೆ. ಹಕ್ಕಿಗಳ ಲೋಕವನ್ನು ಪರಿಚಯ ಮಾಡುವ ಚಿಲಿಪಿಲಿ ಅಂಕಣ ಇದು. ಬರಹಗಾರ್ತಿ ಅಶ್ವಿನಿಮೂರ್ತಿ ಬಾಳಿಲ ಈ ಅಂಕಣ ಬರೆಯುವರು. ಹಕ್ಕಿಗಳ ಪರಿಚಯ ಮಾಡುವರು. ಇದಕ್ಕೆ ಚಿತ್ರವನ್ನು ನೀಡುವವರು  ರಾಧಾಕೃಷ್ಣ ರಾವ್ ಯು ಬಾಳಿಲ. ಫೋಟೋಗ್ರಫಿ ಒಂದು ತಪಸ್ಸು. ಅದರಲ್ಲೂ ಹಕ್ಕಿ, ಪರಿಸರದ ಛಾಯಾಚಿತ್ರ ತೆಗೆಯುವುದು  ಎಂದರೆ ಅದು ಬಹುದೊಡ್ಡ ತಪಸ್ಸು.
ಸಾವಿರ ಶಬ್ದಗಳಲ್ಲಿ ಹೇಳಲಾಗದ್ದನ್ನು ಒಂದು ಛಾಯಾಚಿತ್ರ ಅರ್ಥಮಾಡಿಸಿ ಬಿಡುತ್ತದೆ. ಮಾತನಾಡುವ ಫೋಟೋವನ್ನು ತೆಗೆಯುವುದೂ ಒಂದು ಕಲೆ. ಛಾಯಾಗ್ರಹಣ ಕಲೆಯನ್ನು ಒಲಿಸಿಕೊಂಡವರಲ್ಲಿ ಪ್ರಮುಖರಾಗಿ ಕಂಡು ಬರುವವರು ರಾಧಾಕೃಷ್ಣ ರಾವ್ ಯು ಬಾಳಿಲ ಅವರು. ಇವರು ಸೆರೆ ಹಿಡಿಯುವ ಪ್ರತಿ ಫೋಟೋ ವೂ ಒಂದು ಸಂಭಾಷಣೆಯೇ. ಅದರಲ್ಲೂ ಪಕ್ಷಿ ಚಿತ್ರಣವಂತೂ ಅದ್ಭುತ.  ಕೃಷಿಕರಾಗಿರುವ ಇವರು ವನ್ಯಜೀವಿ ಛಾಯಾಗ್ರಾಹಕರು.  ಅಪಾರ ಶ್ರದ್ಧೆ, ಪರಿಶ್ರಮ , ತಾಳ್ಮೆ, ಹಾಗೂ ನೂತನ ತಂತ್ರಜ್ಞಾನದ ಅರಿವು ವನ್ಯಜೀವಿ ಛಾಯಾಗ್ರಹಣಕ್ಕೆ ಬಹಳ ಅಗತ್ಯ. ಕೆಲವೊಂದು ಫೋಟೋಗಳನ್ನು ತೆಗೆಯಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಹಕ್ಕಿಗಳ ಮನಸ್ಥಿಯನ್ನು ಅರ್ಥಮಾಡಿಕೊಂಡು , ವಿವಿಧ ಭಂಗಿಗಳನ್ನು ಸಮರ್ಥವಾಗಿ ಸೆರೆಹಿಡಿಯ ಬಲ್ಲರು. ಇವರು ತೆಗೆದ ಪ್ರತಿಯೊಂದು ಹಕ್ಕಿಗಳ ಛಾಯಾಚಿತ್ರವೂ ಏನನ್ನೋ ಧ್ವನಿಸುತ್ತದೆ. ಬರಿಗಣ್ಣಿನಲ್ಲಿ ಗೋಚರಿಸದ ಸೂಕ್ಷ್ಮ ಸಂಗತಿಗಳು ಕ್ಯಾಮರಾ ಕಣ್ಣಿನಿಂದ ತಪ್ಪಿಸಿ ಕೊಳ್ಳಲಾಗದು.  ಇವರ ಫೋಟೋಗಳು ಪಕ್ಷಿ ಲೋಕದ ಸುಂದರ‌ ಚಿತ್ರಣಗಳು. ಇವರು ಅಶ್ವಿನಿಮೂರ್ತಿ ಅವರಿಗೆ ಹಕ್ಕಿಗಳ ಲೋಕವನ್ನು ಪರಿಚಯಿಸುವ ಉದ್ದೇಶದಿಂದ ಛಾಯಾಚಿತ್ರಗಳನ್ನು ನೀಡುತ್ತಾರೆ.
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ

ರಾಮನಗರ ಜಿಲ್ಲೆಯಲ್ಲಿ  ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…

21 hours ago

ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ

ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…

21 hours ago

ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ

ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…

22 hours ago

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ  ಪೂರೈಕೆಯಾಗಿದ್ದು,…

22 hours ago

ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…

22 hours ago

ಅಮರನಾಥ ಯಾತ್ರೆ ಮುಂದುವರಿಕೆ | 9, 482 ಯಾತ್ರಿಕರಿಂದ ಪೂಜೆ ಸಲ್ಲಿಕೆ | 3.52 ಲಕ್ಷ ತಲುಪಿದ ಭಕ್ತರ ಸಂಖ್ಯೆ

ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ  ಸುಮಾರು…

23 hours ago