ಅನುಕ್ರಮ

“ಚಿಲಿಪಿಲಿ” ಹಕ್ಕಿ ನೀಡುವ ರಾಧಾಕೃಷ್ಣ ರಾವ್ ಬಾಳಿಲ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ರೂರಲ್‌ ಮಿರರ್‌ ಹೊಸತೊಂದು ಅಂಕಣ ಶುರು ಮಾಡುತ್ತಿದೆ. ಹಕ್ಕಿಗಳ ಲೋಕವನ್ನು ಪರಿಚಯ ಮಾಡುವ ಚಿಲಿಪಿಲಿ ಅಂಕಣ ಇದು. ಬರಹಗಾರ್ತಿ ಅಶ್ವಿನಿಮೂರ್ತಿ ಬಾಳಿಲ ಈ ಅಂಕಣ ಬರೆಯುವರು. ಹಕ್ಕಿಗಳ ಪರಿಚಯ ಮಾಡುವರು. ಇದಕ್ಕೆ ಚಿತ್ರವನ್ನು ನೀಡುವವರು  ರಾಧಾಕೃಷ್ಣ ರಾವ್ ಯು ಬಾಳಿಲ. ಫೋಟೋಗ್ರಫಿ ಒಂದು ತಪಸ್ಸು. ಅದರಲ್ಲೂ ಹಕ್ಕಿ, ಪರಿಸರದ ಛಾಯಾಚಿತ್ರ ತೆಗೆಯುವುದು  ಎಂದರೆ ಅದು ಬಹುದೊಡ್ಡ ತಪಸ್ಸು.
ಸಾವಿರ ಶಬ್ದಗಳಲ್ಲಿ ಹೇಳಲಾಗದ್ದನ್ನು ಒಂದು ಛಾಯಾಚಿತ್ರ ಅರ್ಥಮಾಡಿಸಿ ಬಿಡುತ್ತದೆ. ಮಾತನಾಡುವ ಫೋಟೋವನ್ನು ತೆಗೆಯುವುದೂ ಒಂದು ಕಲೆ. ಛಾಯಾಗ್ರಹಣ ಕಲೆಯನ್ನು ಒಲಿಸಿಕೊಂಡವರಲ್ಲಿ ಪ್ರಮುಖರಾಗಿ ಕಂಡು ಬರುವವರು ರಾಧಾಕೃಷ್ಣ ರಾವ್ ಯು ಬಾಳಿಲ ಅವರು. ಇವರು ಸೆರೆ ಹಿಡಿಯುವ ಪ್ರತಿ ಫೋಟೋ ವೂ ಒಂದು ಸಂಭಾಷಣೆಯೇ. ಅದರಲ್ಲೂ ಪಕ್ಷಿ ಚಿತ್ರಣವಂತೂ ಅದ್ಭುತ.  ಕೃಷಿಕರಾಗಿರುವ ಇವರು ವನ್ಯಜೀವಿ ಛಾಯಾಗ್ರಾಹಕರು.  ಅಪಾರ ಶ್ರದ್ಧೆ, ಪರಿಶ್ರಮ , ತಾಳ್ಮೆ, ಹಾಗೂ ನೂತನ ತಂತ್ರಜ್ಞಾನದ ಅರಿವು ವನ್ಯಜೀವಿ ಛಾಯಾಗ್ರಹಣಕ್ಕೆ ಬಹಳ ಅಗತ್ಯ. ಕೆಲವೊಂದು ಫೋಟೋಗಳನ್ನು ತೆಗೆಯಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಹಕ್ಕಿಗಳ ಮನಸ್ಥಿಯನ್ನು ಅರ್ಥಮಾಡಿಕೊಂಡು , ವಿವಿಧ ಭಂಗಿಗಳನ್ನು ಸಮರ್ಥವಾಗಿ ಸೆರೆಹಿಡಿಯ ಬಲ್ಲರು. ಇವರು ತೆಗೆದ ಪ್ರತಿಯೊಂದು ಹಕ್ಕಿಗಳ ಛಾಯಾಚಿತ್ರವೂ ಏನನ್ನೋ ಧ್ವನಿಸುತ್ತದೆ. ಬರಿಗಣ್ಣಿನಲ್ಲಿ ಗೋಚರಿಸದ ಸೂಕ್ಷ್ಮ ಸಂಗತಿಗಳು ಕ್ಯಾಮರಾ ಕಣ್ಣಿನಿಂದ ತಪ್ಪಿಸಿ ಕೊಳ್ಳಲಾಗದು.  ಇವರ ಫೋಟೋಗಳು ಪಕ್ಷಿ ಲೋಕದ ಸುಂದರ‌ ಚಿತ್ರಣಗಳು. ಇವರು ಅಶ್ವಿನಿಮೂರ್ತಿ ಅವರಿಗೆ ಹಕ್ಕಿಗಳ ಲೋಕವನ್ನು ಪರಿಚಯಿಸುವ ಉದ್ದೇಶದಿಂದ ಛಾಯಾಚಿತ್ರಗಳನ್ನು ನೀಡುತ್ತಾರೆ.
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ

ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಸಂಪಾಜೆ ಗ್ರಾಮ ಪಂಚಾಯತ್…

6 hours ago

ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ

ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 852.6 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದ್ದು,…

6 hours ago

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್

ಬೆಂಗಳೂರಿನಲ್ಲಿ  ಈ ಹಿಂದೆ  ಕಸ ವಿಲೇವಾರಿಗೆ 98 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು. ಈ…

7 hours ago

ರಾಜ್ಯದ ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ

ರಾಜ್ಯದ ಜೇನುತುಪ್ಪಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹಾಗೂ ಮಾರುಕಟ್ಟೆ ಒದಗಿಸಲು ತೋಟಗಾರಿಕಾ ಇಲಾಖೆಯಿಂದ…

7 hours ago

ಬಿಬಿಎಂಪಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸುರಿದ ಮಳೆಗೆ 63 ಕೆರೆಗಳು ಭರ್ತಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಶದಲ್ಲಿ 183 ಕೆರೆಗಳಿದ್ದು, ಕಳೆದ ಒಂದು ವಾರದಿಂದ…

7 hours ago

ವಿದ್ಯುತ್ ಮೇಲಿನ ಬಡ್ಡಿ ಮನ್ನಾ ಮಾಡಲು ನಿರ್ಧಾರ | ಸಂಪುಟ ಅನುಮೋದನೆ

ವಿದ್ಯುತ್ ಸರಬರಾಜು ಕಂಪನಿಗಳಿಗೆ  ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಪಾವತಿಸಬೇಕಾಗಿದ್ದ …

7 hours ago