Advertisement
MIRROR FOCUS

ಚಿಲಿಪಿಲಿ | ಕೆಮ್ಮಂಡೆ ಜೇನ್ನೊಣ ಬಾಕ

Share

ಇವುಗಳು ಕೆಮ್ಮಂಡೆಜೇನ್ನೊಣ ಬಾಕಗಳು.  ಕೆಂದಲೆ ಕಳ್ಳಿಪೀರ ಮೈ ಬಣ್ಣ ಹಸಿರು, ನೆತ್ತಿಯ ಮೇಲೆ ಕಂದು ಬಣ್ಣ, ಮೊನಚಾದ ಕೊಕ್ಕುಗಳು ಇದರ ವಿಶೇಷತೆ.

ತೀಕ್ಷವಾದ ಕಣ್ಣುಗಳಿರುವ ಇವುಗಳು ಬೇಟೆಯನ್ನು ಸುಮಾರು 60 ಮೀಟರ್ ದೂರದಿಂದಲೇ ಗುರುತಿಸುವ ಸಾಮರ್ಥ್ಯ ಹೊಂದಿವೆ. ಆಕಾಶದಲ್ಲಿ ಹಾರುತ್ತಲೇ ಬೇಟೆಯನ್ನು ಹಿಡಿದು ಬಿಡುತ್ತವೆ.  ಗಾತ್ರದಲ್ಲಿ ಪುಟ್ಟಹಕ್ಕಿಯಾಗಿದೆ(21cm)

 

 

ಸಾಮಾನ್ಯವಾಗಿ ಇವುಗಳು ಐದರಿಂದ ಹತ್ತರವರೆಗೆ ಗುಂಪಾಗಿ ಇರುತ್ತವೆ. ಎತ್ತರದ ಅಪಾಯಮುಕ್ತ ಪ್ರದೇಶಗಳಲ್ಲಿ ಗೂಡು ಕಟ್ಟುತ್ತವೆ.  ವಿದ್ಯುತ್ ತಂತಿಗಳ ಮೇಲೆ,  ಎತ್ತರದ ಮರದ ಗೆಲ್ಲುಗಳ ಮೇಲೆ ಕುಳಿತು ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲೋಕಿಸಿ ತಮ್ಮ ಬೇಟೆಯನ್ನು ಹಿಡಿಯುತ್ತವೆ. ಇವುಗಳು ಗಂಟೆಗೆ ನೂರರ ಮೇಲೆ ನೊಣ ಅಥವಾ ಕೀಟಗಳನ್ನು ಭಕ್ಷಿಸುತ್ತವೆ. ಆಹಾರ ಕ್ರಮ ಹಸಿರು ಜೇನ್ನೊಣಬಾಕದಂತೆಯೇ ಇದೆ. ಇದರ ಸ್ವರ ಸಾಮಾನ್ಯವಾಗಿ ನೀಲಿ ಬಾಲದ ಜೇನ್ನೋಣಬಾಕದಂತಿದೆ.

ಇವುಗಳ ಚಲನೆ zig zag  ರೀತಿಯಲ್ಲಿರುತ್ತವೆ. ತನ್ನ ಸೌಂದರ್ಯದೊಂದಿಗೆ ಬುದ್ಧಿವಂತ ಪಕ್ಷಿಯಾಗಿಯೂ ಗುರುತಿಸಿ ಕೊಂಡಿದೆ.  ಈ ಪಕ್ಷಿ  camera friendly ಎಂದೇ ಪ್ರಸಿದ್ಧವಾಗಿದೆ.

#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.

ಛಾಯಾಚಿತ್ರ : ರಾಧಾಕೃಷ್ಣ ರಾವ್ ಯು, ಬಾಳಿಲ. 

ರಾಧಾಕೃಷ್ಣ ರಾವ್‌ ಯು , ಬಾಳಿಲ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 14-03-2026 | ಇಂದು ಕರಾವಳಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ – ರಾಜ್ಯದ ಹಲವೆಡೆ ಗುಡುಗು ಮಳೆ ಮುನ್ಸೂಚನೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಗುಡುಗು…

2 hours ago

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ – ಭಾರತೀಯ ರೈತರಿಗೆ ಏನು ಸಂದೇಶ?

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ ಭಾರತೀಯ ರೈತರಿಗೆ ಬೆಲೆ ಬೆಂಬಲದ ಸೂಚನೆ ನೀಡುತ್ತಿದೆ.…

9 hours ago

ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಗಣಪತಿ ಮೃತಪಟ್ಟಿದ್ದಾರೆ. ಕಾಡಾನೆ ಹಾವಳಿ…

9 hours ago

ಹಾಲಿನಲ್ಲಿ ಕಲಬೆರಕೆ ಪತ್ತೆಗೆ ವಿಶೇಷ ಕಿಟ್‌

ಹಾಲಿನ ಗುಣಮಟ್ಟ ಕಾಪಾಡಲು ಸಹಕಾರ ಸಂಘಗಳಿಗೆ ವಿಶೇಷ ಕಲಬೆರಕೆ ಪತ್ತೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.

9 hours ago

ಸೌದೆ ಬೇಡಿಕೆ ಏರಿಕೆ ಹಿನ್ನೆಲೆ | ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ

ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…

18 hours ago

ಕೃಷಿ ಗುರಿ ಕೇವಲ ‘ಆಹಾರ ಭದ್ರತೆ’ ಅಲ್ಲ, ಅದನ್ನೂ ಮೀರಿದ ಕೃಷಿ ಚಿಂತನೆ ಅಗತ್ಯ

ಕೃಷಿಯ ಮೂಲಕ ಕೇವಲ ಆಹಾರ ಉತ್ಪಾದನೆ ಹೆಚ್ಚಿಸುವುದಕ್ಕಿಂತ ಸಮಾನ ವಿತರಣೆ, ಪರಿಸರ ಸಂರಕ್ಷಣೆ…

18 hours ago