ಅನುಕ್ರಮ

ಚಿಲಿಪಿಲಿ | ಇದು ಮಡಿವಾಳ ಹಕ್ಕಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

Orintal magpie robin bird, ಮಡಿವಾಳ ಹಕ್ಕಿ.(copsychus saularie)

Advertisement
Advertisement

ಮುಂಜಾವಿನಲ್ಲಿ ಹೂಗಳನ್ನು ಕೊಯ್ಯುತ್ತಿರಬೇಕಾದರೆ, ಅಲ್ಲೇ ತನ್ನಿಷ್ಟದ ಮರದ ಮೇಲೆ ಕುಳಿತು ಈ ಹಕ್ಕಿ ಹಾಡುತ್ತಿದ್ದರೆ ಕತ್ತು ತಿರುಗಿಸಿ ನೋಡದಿರಲಾಗದು. ನೆಲವ ಕೆದಕಿ, ಹುಳು ಹುಪ್ಪಟೆಗಳನ್ನು ತಿನ್ನುತ್ತಾ ನಮ್ಮ ಅಕ್ಕ‌ಪಕ್ಕದಲ್ಲೇ ಕಂಡು ಬರುವ ಹಕ್ಕಿ ಈ ಮಡಿವಾಳ ಹಕ್ಕಿ.

 

Advertisement

ಕಪ್ಪು ಬಿಳುಪಿನ ಬಣ್ಣದಲ್ಲಿ ಸೊಗಸಾಗಿ, ಮಡಿಯಾಗಿ ಕಾಣುತ್ತಿರುವುದರಿಂದಲೇ ಬಹುಶಃ ಮಡಿವಾಳ ಹಕ್ಕಿಯೆಂದು ಹೆಸರು ಬಂದಿದೆಯೇನೋ! ಕೆರೆಕಟ್ಟೆಗಳ ಬದಿಯಲ್ಲಿ ಬಟ್ಟೆ ಒಗೆಯುವ ಕಲ್ಲುಗಳ ಹತ್ತಿರ ಹೆಚ್ಚಾಗಿ ಕಂಡು ಬರುತ್ತವೆ.‌ ಗಾತ್ರದಲ್ಲಿ (19 ರಿಂದ 20 cm) ಇರುತ್ತದೆ. ಮಧುರವಾದ ಸಿಳ್ಳೆಯ ದನಿಯಿಂದ ತನ್ನತ್ತ ಸೆಳೆಯುತ್ತದೆ. ಅಲ್ಲದೆ ಇತರ ಹಕ್ಕಿಗಳ ಸ್ವರಗಳ ಅನುಕರಣೆಯನ್ನೂ ಮಾಡುತ್ತದೆ. ‘ಹಾಡು ಹಕ್ಕಿ’ ಎಂಬ ಹೆಸರೂ ಇದೆ. ಕಪ್ಪು , ಬಿಳುಪು ಈ ಹಕ್ಕಿಯ ಬಣ್ಣ. ಒಂದು ಕಾಲದಲ್ಲಿ ಪಂಜರದಲ್ಲೂ ಈ ಹಕ್ಕಿಯನ್ನು ಸಾಕುತ್ತಿದ್ದುದರಿಂದ ‘ಕೇಜ್ ಬರ್ಡ್ ‘ಎಂದೂ ಹೇಳುತ್ತಾರೆ. ಭಾರತ ಉಪಖಂಡ, ಆಗ್ನೇಯ ಏಷ್ಯಾದ ಭಾಗಗಳಲ್ಲಿ ಕಂಡುಬರುತ್ತವೆ.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಛಾಯಾಚಿತ್ರ : ರಾಧಾಕೃಷ್ಣ ರಾವ್ ಯು ಬಾಳಿಲ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ

ರಾಮನಗರ ಜಿಲ್ಲೆಯಲ್ಲಿ  ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…

1 day ago

ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ

ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…

1 day ago

ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ

ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…

1 day ago

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ  ಪೂರೈಕೆಯಾಗಿದ್ದು,…

1 day ago

ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…

1 day ago

ಅಮರನಾಥ ಯಾತ್ರೆ ಮುಂದುವರಿಕೆ | 9, 482 ಯಾತ್ರಿಕರಿಂದ ಪೂಜೆ ಸಲ್ಲಿಕೆ | 3.52 ಲಕ್ಷ ತಲುಪಿದ ಭಕ್ತರ ಸಂಖ್ಯೆ

ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ  ಸುಮಾರು…

1 day ago