ಹಕ್ಕಿಗಳ ಲೋಕದಲ್ಲಿ ನಮ್ಮ “ಚಿಲಿಪಿಲಿ”

November 23, 2020
2:16 PM

ಪ್ರಕೃತಿಯೊಂದಿಗೆ ಬದುಕುವುದು ಇಷ್ಟವಾದ ಸಂಗತಿ. ಅದೆಷ್ಟೋ ಬಗೆಯ ಪ್ರಾಣಿ, ಪಕ್ಷಿಗಳು ಪರಿಸರದಲ್ಲಿ  ಕಾಣಸಿಗುತ್ತವೆ. ಅದರಲ್ಲೂ ಹಕ್ಕಿಗಳು ಎಷ್ಟೋ ಬಗೆಯವು. ಬಣ್ಣ ಬಣ್ಣದ ಹಕ್ಕಿಗಳು ಹಾರಾಡುತ್ತಾ ಸಾಗಿದಾಗ ದಿನವೂ ಹೊಸತು ಹೊಸತು. ಅಂತಹ ಹಕ್ಕಿಗಳ ಛಾಯಾಗ್ರಹಣ ಒಂದು ಹವ್ಯಾಸವಾದರೆ, ಆ ಹಕ್ಕಿಗಳ ಪರಿಚಯ ಇನ್ನೂ ಆಸಕ್ತಿದಾಯಕ. ಈಗ ಅಂತಹದ್ದೊಂದು ಪ್ರಯತ್ನದಲ್ಲಿ ನಾವಿದ್ದೇವೆ.

Advertisement
Advertisement

ಪ್ರಕೃತಿಯ ಹಲವು ಅಚ್ಚರಿಗಳಲ್ಲಿ ಈ ಪಕ್ಷಿ ಪ್ರಪಂಚವೂ ಒಂದು. ಗಮನಿಸಿದಷ್ಟು ಹೊಸ ಹೊಸ ಸಂಗತಿಗಳು .‌ ಪರಿಸರದಲ್ಲಿರುವ ಪ್ರತಿಯೊಂದು ಜೀವಿಗೂ ಅದರದೇ ಮಹತ್ವವಿದೆ. ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಸಣ್ಣ ದೊಡ್ಡ ಪ್ರಾಣಿ , ಪಕ್ಷಿಗಳೆನ್ನದೆ ಎಲ್ಲವೂ ಅನಿವಾರ್ಯ. ಯಾವುದೇ ಒಂದು ಜೀವಿಯ ಅಳಿವು ಅಥವಾ ನಿರ್ನಾಮವಾದರೆ ಪರಿಸರದಲ್ಲಿ ವಿಷಮ ಪರಿಸ್ಥಿತಿ ತಲೆದೋರಬಹುದು. ಆರೋಗ್ಯಯುತ ಪರಿಸರದ ನಿರ್ಮಾಣ ಕಾರ್ಯದಲ್ಲಿ ಪಕ್ಷಿಗಳ ಕೊಡುಗೆ ಅಪಾರ.
ನಮ್ಮ ಪರಿಸರದಲ್ಲಿ ವೈವಿಧ್ಯಮಯ ಪಕ್ಷಿಗಳಿವೆ. ಅವುಗಳ ಹಗುರ ದೇಹ ರಚನೆ, ಬಣ್ಣ, ವಿನ್ಯಾಸ, ಸ್ವರ, ಸಾಮರ್ಥ್ಯ ಎಲ್ಲವೂ ಭಿನ್ನ. ಪ್ರತಿಯೊಂದು ಅದರದೇ ಶೈಲಿಯಲ್ಲಿ ಆಹಾರ ಸಂಗ್ರಹಿಸುತ್ತವೆ. ಗೂಡು ಕಟ್ಟುತ್ತವೆ. ಇವುಗಳ ಜೀವನ ಕ್ರಮವೇ ಅಧ್ಯಯನ ಯೋಗ್ಯವಾದುದು.

Advertisement

ತಾಳ್ಮೆ , ಕಲಿಯುವ ಉತ್ಸಾಹ, ಪಕ್ಷಿಗಳ ಕುರಿತು ಒಂದು ಪುಟ್ಟ ಕುತೂಹಲವಿದ್ದರೆ ಪಕ್ಷಿಗಳು ಆಸಕ್ತಿದಾಯಕ ವಿಷಯ. ಸುಮ್ಮನೆ ಕುಳಿತು ಹಕ್ಕಿಗಳನ್ನು ವೀಕ್ಷಿಸಿದರೂ ಆನಂದವೇ. ಫೋಟೋಗ್ರಫಿಯನ್ನು ಹವ್ಯಾಸವಾಗಿ ರೂಡಿಸಿಕೊಂಡವರು ಹಕ್ಕಿಗಳ ಜೀವನದ ಹೆಚ್ಚಿನ ವಿಷಯಗಳನ್ನು ಆಸಕ್ತಿದಾಯಕವಾಗಿ ಸೆರೆ ಹಿಡಿಯ ಬಲ್ಲರು. ಅವುಗಳ ದಿನನಿತ್ಯದ ಚಟುವಟಿಕೆಗಳನ್ನು ಸೂಕ್ಷ್ಮ ವಾಗಿ ಅಭ್ಯಸಿಸಿ ಹೇಳಬಲ್ಲರು. ಪಕ್ಷಿಗಳ ಸುಂದರ ಪ್ರಪಂಚದತ್ತ ಸ್ವಲ್ಪ ‌ಇಣುಕಿ ನೋಡುವ ಪ್ರಯತ್ನವನ್ನು ಲೇಖಕಿ, ಗೃಹಿಣಿ, ಪರಿಸರ ಆಸಕ್ತಿಯನ್ನು ಹೊಂದಿರುವ ಅಶ್ವಿನಿಮೂರ್ತಿ ಅಯ್ಯನಕಟ್ಟೆ ಅವರು ರೂರಲ್‌ ಮಿರರ್‌ ನಲ್ಲಿ ಚಿಲಿಪಿಲಿ ಅಂಕಣದ ಮೂಲಕ ಬರೆಯುತ್ತಿದ್ದಾರೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..
May 18, 2024
12:36 PM
by: ವಿವೇಕಾನಂದ ಎಚ್‌ ಕೆ
ಸಮಾಜಕ್ಕೆ ಸೇವೆ ಮಾಡುವುದು ಎಂದರೆ ಹಲವು ಆಯಾಮಗಳಿವೆ | ಹವಾಮಾನ ಹೇಳುವುದೂ ಒಂದು ಸೇವೆ |
May 17, 2024
11:12 AM
by: ದ ರೂರಲ್ ಮಿರರ್.ಕಾಂ
ಮಲೆನಾಡ ಗಿಡ್ಡ ಗೋತಳಿಗಳನ್ನು ಉಳಿಸಿ ಸಂವರ್ಧಿಸಬೇಕು ಏಕೆ..?
May 15, 2024
2:29 PM
by: ಮುರಲೀಕೃಷ್ಣ ಕೆ ಜಿ
ಶಂಕರರ ಆಕ್ರೋಶಕ್ಕೆ ಹೊರಹೊಮ್ಮಿದ ಭಜಗೋವಿಂದಂ
May 15, 2024
11:34 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror