ಅನುಕ್ರಮ

ಹಕ್ಕಿಗಳ ಲೋಕದಲ್ಲಿ ನಮ್ಮ “ಚಿಲಿಪಿಲಿ”

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ರಕೃತಿಯೊಂದಿಗೆ ಬದುಕುವುದು ಇಷ್ಟವಾದ ಸಂಗತಿ. ಅದೆಷ್ಟೋ ಬಗೆಯ ಪ್ರಾಣಿ, ಪಕ್ಷಿಗಳು ಪರಿಸರದಲ್ಲಿ  ಕಾಣಸಿಗುತ್ತವೆ. ಅದರಲ್ಲೂ ಹಕ್ಕಿಗಳು ಎಷ್ಟೋ ಬಗೆಯವು. ಬಣ್ಣ ಬಣ್ಣದ ಹಕ್ಕಿಗಳು ಹಾರಾಡುತ್ತಾ ಸಾಗಿದಾಗ ದಿನವೂ ಹೊಸತು ಹೊಸತು. ಅಂತಹ ಹಕ್ಕಿಗಳ ಛಾಯಾಗ್ರಹಣ ಒಂದು ಹವ್ಯಾಸವಾದರೆ, ಆ ಹಕ್ಕಿಗಳ ಪರಿಚಯ ಇನ್ನೂ ಆಸಕ್ತಿದಾಯಕ. ಈಗ ಅಂತಹದ್ದೊಂದು ಪ್ರಯತ್ನದಲ್ಲಿ ನಾವಿದ್ದೇವೆ.

Advertisement
Advertisement

ಪ್ರಕೃತಿಯ ಹಲವು ಅಚ್ಚರಿಗಳಲ್ಲಿ ಈ ಪಕ್ಷಿ ಪ್ರಪಂಚವೂ ಒಂದು. ಗಮನಿಸಿದಷ್ಟು ಹೊಸ ಹೊಸ ಸಂಗತಿಗಳು .‌ ಪರಿಸರದಲ್ಲಿರುವ ಪ್ರತಿಯೊಂದು ಜೀವಿಗೂ ಅದರದೇ ಮಹತ್ವವಿದೆ. ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಸಣ್ಣ ದೊಡ್ಡ ಪ್ರಾಣಿ , ಪಕ್ಷಿಗಳೆನ್ನದೆ ಎಲ್ಲವೂ ಅನಿವಾರ್ಯ. ಯಾವುದೇ ಒಂದು ಜೀವಿಯ ಅಳಿವು ಅಥವಾ ನಿರ್ನಾಮವಾದರೆ ಪರಿಸರದಲ್ಲಿ ವಿಷಮ ಪರಿಸ್ಥಿತಿ ತಲೆದೋರಬಹುದು. ಆರೋಗ್ಯಯುತ ಪರಿಸರದ ನಿರ್ಮಾಣ ಕಾರ್ಯದಲ್ಲಿ ಪಕ್ಷಿಗಳ ಕೊಡುಗೆ ಅಪಾರ.
ನಮ್ಮ ಪರಿಸರದಲ್ಲಿ ವೈವಿಧ್ಯಮಯ ಪಕ್ಷಿಗಳಿವೆ. ಅವುಗಳ ಹಗುರ ದೇಹ ರಚನೆ, ಬಣ್ಣ, ವಿನ್ಯಾಸ, ಸ್ವರ, ಸಾಮರ್ಥ್ಯ ಎಲ್ಲವೂ ಭಿನ್ನ. ಪ್ರತಿಯೊಂದು ಅದರದೇ ಶೈಲಿಯಲ್ಲಿ ಆಹಾರ ಸಂಗ್ರಹಿಸುತ್ತವೆ. ಗೂಡು ಕಟ್ಟುತ್ತವೆ. ಇವುಗಳ ಜೀವನ ಕ್ರಮವೇ ಅಧ್ಯಯನ ಯೋಗ್ಯವಾದುದು.

ತಾಳ್ಮೆ , ಕಲಿಯುವ ಉತ್ಸಾಹ, ಪಕ್ಷಿಗಳ ಕುರಿತು ಒಂದು ಪುಟ್ಟ ಕುತೂಹಲವಿದ್ದರೆ ಪಕ್ಷಿಗಳು ಆಸಕ್ತಿದಾಯಕ ವಿಷಯ. ಸುಮ್ಮನೆ ಕುಳಿತು ಹಕ್ಕಿಗಳನ್ನು ವೀಕ್ಷಿಸಿದರೂ ಆನಂದವೇ. ಫೋಟೋಗ್ರಫಿಯನ್ನು ಹವ್ಯಾಸವಾಗಿ ರೂಡಿಸಿಕೊಂಡವರು ಹಕ್ಕಿಗಳ ಜೀವನದ ಹೆಚ್ಚಿನ ವಿಷಯಗಳನ್ನು ಆಸಕ್ತಿದಾಯಕವಾಗಿ ಸೆರೆ ಹಿಡಿಯ ಬಲ್ಲರು. ಅವುಗಳ ದಿನನಿತ್ಯದ ಚಟುವಟಿಕೆಗಳನ್ನು ಸೂಕ್ಷ್ಮ ವಾಗಿ ಅಭ್ಯಸಿಸಿ ಹೇಳಬಲ್ಲರು. ಪಕ್ಷಿಗಳ ಸುಂದರ ಪ್ರಪಂಚದತ್ತ ಸ್ವಲ್ಪ ‌ಇಣುಕಿ ನೋಡುವ ಪ್ರಯತ್ನವನ್ನು ಲೇಖಕಿ, ಗೃಹಿಣಿ, ಪರಿಸರ ಆಸಕ್ತಿಯನ್ನು ಹೊಂದಿರುವ ಅಶ್ವಿನಿಮೂರ್ತಿ ಅಯ್ಯನಕಟ್ಟೆ ಅವರು ರೂರಲ್‌ ಮಿರರ್‌ ನಲ್ಲಿ ಚಿಲಿಪಿಲಿ ಅಂಕಣದ ಮೂಲಕ ಬರೆಯುತ್ತಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿಯಲ್ಲಿ ಹೆಚ್ಚಿನ ಇಳುವರಿಗಾಗಿ ಎಐ ಕೃಷಿ ನೀತಿ | ಅನುಷ್ಠಾನಕ್ಕಾಗಿ ಸರ್ಕಾರ 500 ಕೋಟಿ ಮೀಸಲು

ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕೃಷಿಯಲ್ಲಿ ಎಐ, ಡ್ರೋನ್‌ಗಳು ಮತ್ತು…

41 minutes ago

ಭರದಿಂದ ನಡೆಯುತ್ತಿದೆ ಎತ್ತಿನಹೊಳೆ ಯೋಜನೆ | 2027ರೊಳಗೆ ಎತ್ತಿನಹೊಳೆ ನೀರು ಕೋಲಾರ ಭಾಗಕ್ಕೆ

ಎತ್ತಿನ ಹೊಳೆ  ಯೋಜನೆಯ  ಮೂಲಕ  ಬರಪೀಡಿತ ಜಿಲ್ಲೆಗಳಾದ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ…

2 hours ago

ಮಕರ ರಾಶಿಯಲ್ಲಿ ಚಂದ್ರ, ಈ 3 ರಾಶಿಗೆ ಯಶಸ್ಸು, ಸಂಪತ್ತು

ಹೆಚ್ಚಿನ ಮಾಹಿತಿ ಬೇಕಾದರೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago

ಬದುಕು ಪುರಾಣ | ನಾವ್ಯಾಕೆ ‘ಶಕುನಿ’ಗಳಾಗುತ್ತಿದ್ದೇವೆ?

ಎಲ್ಲಾದರೂ ನೋಡಿದ್ದೀರಾ.. ಧರ್ಮರಾಯ, ಕೃಷ್ಣ, ಕರ್ಣ, ಭೀಷ್ಮ.. ಮೊದಲಾದ ಹೆಸರುಗಳನ್ನು ನಂನಮ್ಮ ಸಾಧನೆಗಳಿಗೆ…

4 hours ago

ಯಾವುದೇ ಕ್ಷಣದಲ್ಲಿ ಕೆ.ಆರ್.ಎಸ್. ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.…

12 hours ago

ಕೃಷಿಗೆ ತಂತ್ರಜ್ಞಾನ ಏಕೆ ಬೇಕು..? | ಗ್ರಾಮೀಣ ಭಾಗದ ಈ ಕೃಷಿ ಕಾರ್ಮಿಕ ನೀಡಿದ ಸಂದೇಶ

ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು ಅಡಿಕೆಗೆ…

14 hours ago