ಇಂದಿನ ಆಧುನಿಕ ಯುಗದಲ್ಲಿ ಅಧಿಕ ಕಾರ್ಯ ಒತ್ತಡಗಳಿಂದ ಸಾಮಾನ್ಯವಾಗಿ ಉಂಟಾಗುವ ಸಮಸ್ಯೆ ಅಂದರೆ ಅದುವೇ ಸೊಂಟ ನೋವು. ಬೆನ್ನು ನೋವು ಎಂಬುದು ಎಲ್ಲರಲ್ಲೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಇತ್ತೀಚೆಗೆ ಇದಕ್ಕೆ ವಯಸ್ಸಿನ ಅಂತರವೂ ಸಹ ಇಲ್ಲ. ಇದೇ ಸಮಸ್ಯೆ ಅನೇಕರನ್ನು ನಿರಂತರವಾಗಿ ಕಾಡುತ್ತಿರುತ್ತವೆ.
ಸೊಂಟ ನೋವಿಗೆ ಸಾಮಾನ್ಯ ಕಾರಣಗಳು :
* ದೀರ್ಘಾವಧಿ ಯವರಿಗೆ ಒಂದೇ ಬದಿಯಲ್ಲಿ / ಭಂಗಿಯಲ್ಲಿ ಮಲಗುವುದು
* ಅತಿಯಾದ ಶ್ರಮ / ಪ್ರಯಾಣ
* ವಿಚಿತ್ರವಾದ ಭಂಗಿಯಲ್ಲಿ ಕುಳಿತು ಕೊಳ್ಳುವುದು
* ಅತಿಯಾಗಿ ಬಗ್ಗಿಕೊಂಡೆ ಅತಿ ಕೆಲಸ ಮಾಡುವುದು
* ಉಳುಕು ಮೂಳೆ ಮುರಿತ
* ಏಕಕಾಲದಲ್ಲಿ ಅತಿ ವ್ಯಾಯಾಮ ಮಾಡುವುದು
ಸೊಂಟ ನೋವು ತಡೆಗಟ್ಟಲು ಸುಲಭ ಪರಿಹಾರಗಳು :
* ಸುರಕ್ಷಿತ ಮತ್ತು ಆರೋಗ್ಯಕರ ವ್ಯಾಯಾಮಗಳು
* ಯೋಗಾಸನ
* ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು
* ನೇರವಾಗಿ ನಿಂತುಕೊಳ್ಳುವುದು ನೇರವಾಗಿ ನಡೆಯುವುದು ನೇರವಾಗಿ ಮಲಗುವುದು
* ನೋವಿನ ಪ್ರದೇಶದಲ್ಲಿ ಬಿಸಿ ನೀರಿನ ಶಾಖ ಕೊಡುವುದು
* ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಲಾದ ತೈಲ ಗಳಿಂದ ನೋವಿನ ಜಾಗಕ್ಕೆ ಮಸಾಜ್ ಮಾಡುವುದು.
* ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಒಂದಾದ ಪಂಚಕರ್ಮ ಚಿಕಿತ್ಸೆ ಸೊಂಟ ನೋವಿಗೆ ಉತ್ತಮ ಚಿಕಿತ್ಸೆ ಆಗಿದೆ ಅದರಲ್ಲಿ ಕಟ್ಟಿಬಸ್ತಿ ಚಿಕಿತ್ಸಾ ವಿಧಾನದಿಂದ ಸೊಂಟ ನೋವು ನಿವಾರಣೆ ಮಾಡಬಹುದು.
ನಿಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ನಿಮಗೆ ತೊಂದರೆಗಳಾದಲ್ಲಿ ದಯವಿಟ್ಟು ನಿರ್ಲಕ್ಷಿಸಬೇಡಿ. ನೋವು ಕೆಲವು ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅವರು ನೋವಿನ ಕಾರಣ ಕಂಡುಹಿಡಿಯಬಹುದು ಮತ್ತು ಅದನ್ನು ನಿರ್ವಹಿಸಲು ಯೋಜನೆಯನ್ನು ರೂಪಿಸಬಹುದು. ಸೊಂಟ ನೋವನ್ನು ನಿರ್ಲಕ್ಷಿಸಿದರೆ ಮತ್ತು ಚಿಕಿತ್ಸೆ ನೀಡದೆ ಹೋದಲ್ಲಿ ಅದು ಹೆಚ್ಚಿನ ಗಂಭೀರ ಸಮಸ್ಯೆಗಳಿಗೆ( ಅಂಗವೈಕಲ್ಯಕ್ಕೆ) ಕಾರಣವಾಗಬಹುದು.
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…
ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…