ಈ ಬಾರಿ ಮುಂಗಾರು ಉತ್ತರ ಕರ್ನಾಟಕದ ಕಡೆ ಇನ್ನೂ ಮಳೆ ಸರಿಯಾಗಿ ಆಗಿಲ್ಲ. ಅದರಲ್ಲೂ ಬಯಲು ಸೀಮೆ ಜಿಲ್ಲೆಗಳಾದ ರಾಯಚೂರು, ಕಲಬುರಗಿ, ಬಿಜಾಪುರ, ಯಾದಗಿರಿ ಕಡೆ ರೈತರು ಮಳೆರಾಯನಿಗಾಗಿ ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದಾರೆ. ಮಳೆ ಬಾರದಿದ್ದರೆ ಬೆಳೆ ಇಲ್ಲ. ಬೆಳೆ ಇಲ್ಲದಿದ್ದರೆ ಜೀವನವೇ ದುಸ್ತರವಾಗಲಿದೆ.
ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ರೈತ ಯಂಕಪ್ಪ ಎಂಬುವವರು ವಿಶೇಷ ಪ್ರಯತ್ನ ಕೈಗೊಂಡಿದ್ದಾರೆ. ರೈತ ಯಂಕಪ್ಪ ಅವರ ಜೋಡೆತ್ತುಗಳ ಸಹಕಾರದಿಂದ ಈ ಸಾಧನೆಯನ್ನು ಮಾಡಿದ್ದಾರೆ. ಮನುಷ್ಯರು ಗಿನ್ನಿಸ್ ರೆಕಾರ್ಡ್ ಗಾಗಿ ಏನೇನೋ ಮಾಡೋದನ್ನು ಕೇಳಿದ್ದೀವಿ. ಆದರೆ ಇಲ್ಲಿ ಜೋಡೆತ್ತುಗಳನ್ನು ಬಳಸಿಕೊಂಡು ಈ ರೈತ ದಾಖಲೆಯನ್ನು ಮಾಡಿದ್ದಾರೆ. ಈ ಸಾಧನೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 11 ಗಂಟೆಯಲ್ಲಿ 18 ಎಕರೆಯ ಕೃಷಿ ಭೂಮಿಯನ್ನು ನಿರಂತರವಾಗಿ ಉಳುಮೆ ಮಾಡಿ ಜೋಡೆತ್ತುಗಳೊಂದಿಗೆ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮೂಷ್ಟುರು ಗ್ರಾಮದ ಜೋಡೆತ್ತುಗಳು ಹೊಸ ದಾಖಲೆ ಬರೆದಿವೆ.
ರೈತ ಯಂಕಪ್ಪ ಎಂಬುವವರ ಸೀಮೆ ತಳಿಯ ಜೋಡೆತ್ತುಗಳೇ ಈ ಸಾಧನೆ ಮಾಡಿದವು. ರಾತ್ರಿ 1 ಗಂಟೆಗೆ ಜೋಡೆತ್ತುಗಳಿಗೆ ನೊಗ ಕಟ್ಟಿದ್ದ ರೈತ ಯಂಕಪ್ಪ ಬೆಳಗ್ಗೆ 11 ಗಂಟೆಗೆ ಹೊತ್ತಿಗೆ ಉಳುಮೆ ಕಾರ್ಯ ಮುಕ್ತಾಯಗೊಳಿಸಿದ್ದಾರೆ. ಉಳುಮೆಗೂ ಮುನ್ನ ಜೋಡೆತ್ತುಗಳಿಗೆ ಭಾರೀ ಆರೈಕೆ ಮಾಡಲಾಗಿತ್ತು. ಆ ನಂತರ ರಾತ್ರಿ 1 ಗಂಟೆಯಿಂದ ಉಳುಮೆಯನ್ನು ರೈತ ಯಂಕಪ್ಪ ಅವರು ಆರಂಭಿಸಿದ್ದಾರೆ.
ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ರೈತ ಯಂಕಪ್ಪ ಅವರು ಈ ಪ್ರಯತ್ನ ಕೈಗೊಂಡಿದ್ದಾರೆ. ಸದ್ಯ ರೈತ ಯಂಕಪ್ಪ ಜೋಡೆತ್ತುಗಳ ಸಾಧನೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತ ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಾತ್ರ ಉತ್ತಮ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ಇತರ ಪ್ರದೇಶಗಳಲ್ಲಿ ಮಳೆಯ ಕೊರತೆ ಕಾಡುತ್ತಿದೆ. ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಮಾತಿನಂತೆ ರೈತ ಯಂಕಪ್ಪ ಅವರ ಪ್ರಯತ್ನ ಮಾತ್ರ ಸ್ಥಳೀಯವಾಗಿ ವೈರಲ್ ಆಗುತ್ತಿದೆ.
(ಸುಳಿವು: ಅಂತರ್ಜಾಲ )
ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…
"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…
ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತದೆ.…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಈಶಾನ್ಯ ರಾಜ್ಯಗಳ ಬಹುತೇಕ ಭಾಗಗಳಲ್ಲಿ ಮುಂದುವರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಮಣಿಪುರ,…