ಹಸುವಿಗೆ ಕೃತಕ ಕಾಲು ಜೋಡಣೆಯ ಮೂಲಕ ಮೂರು ವರ್ಷದ ಹಸುವನ್ನು ರಕ್ಷಣೆ ಮಾಡಿದ ಘಟನೆ ಕೇರಳದ ತ್ರಿಶೂರ್ ಮಣಲೂರು ಕುಂದುಕುಲಂನಲ್ಲಿ ನಡೆದಿದೆ. ಕೃಷಿಕ ಡೇವಿಸ್ ಮತ್ತು ಅವರ ಕುಟುಂಬದವರು ಈ ಸಂತಸ ಹಾಗೂ ಮಾನವೀಯ ಕಾರ್ಯವನ್ನು ಹಂಚಿಕೊಂಡಿದ್ದಾರೆ.
ಒಂದು ವರುಷದ ಮಣಿಕುಟ್ಟಿ ಎಂಬ ಹಸುವನ್ನು ಮೇಯಿಸಲು ತೆಂಗಿನ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಈ ವೇಳೆಯಲ್ಲಿ ನಾಯಿ ದಾಳಿಯಿಂದ ಹೆದರಿ ತೆಂಗಿನಮರದ ಸುತ್ತಲೂ ಓಡಿತ್ತು. ಆಗ ಹಸುವಿನ ಕಾಲಿಗೆ ಹಗ್ಗ ಸುತ್ತಿ ಬಿದ್ದು ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಚಿಕಿತ್ಸೆಯಲ್ಲಿ ಗಮನಿಸಿದಾಗ ಹಸುವಿನ ಕಾಲು ತುಂಡಾಗಿರುವುದು ತಿಳಿಯಿತು. ಪಶುವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯರು ಕಾಲು ಕತ್ತರಿಸಲು ಸಲಹೆ ನೀಡಿದರು. ನಂತರ, ವೈದ್ಯರ ಸಲಹೆಯಂತೆ ಚಿಕಿತ್ಸೆ ಮಾಡಿ ಬ್ಯಾಂಡೆಜ್ ಹಾಕಿದ್ದರು.
ಬಳಿಕ ಡೇವಿಡ್ ಕುಟುಂಬವು ಹಸುವಿಗೆ ಕೃತಕ ಕಾಲುವನ್ನು ಅಳವಡಿಸುವ ಬಗ್ಗೆ ಯೋಚಿಸಿದರು. ತ್ರಿಶೂರ್ ನಲ್ಲಿರುವ ಕಿಟ್ಕ್ಯಾಟ್ ಅರ್ಥೋಟಿಕ್ಸ್ ಸೆಂಟರ್ನಲ್ಲಿ ಈ ಬಗ್ಗೆ ಮಾತನಾಡಿದರು. ಪ್ರಾಯೋಗಿಕ ಆಧಾರದ ಮೇಲೆ ಕಳೆದ ತಿಂಗಳು ಮಣಿಕುಟ್ಟಿಗೆ ಕೃತಕ ಕಾಲು ಅಳವಡಿಸಲಾಗಿತ್ತು.
ಈಗ ಮಣಿಕುಟ್ಟಿಯು ಅಳವಡಿಸಿಕ ಕೃತಕ ಕಾಲಿನಿಂದ 5೦ ಮೀಟರು ನಡೆಯಲು ಪ್ರಾರಂಭಿಸಿದಳು. ನಿಧಾನವಾಗಿ ಆರಾಮವಾಗಿ ನಡೆಯಲು ಸಹ ಪ್ರಾರಂಭಿಸಿದ್ದಾಳೆ ಎಂದು ಡೇವಿಡ್ ಕುಟುಂಬ ಹೇಳಿದೆ.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…