Advertisement
ವಿಶೇಷ ವರದಿಗಳು

ಅಡಿಕೆಗೆ ಹೊಸ ಬಗೆಯ ಕೀಟ ಬಾಧೆ | ಸುಳ್ಯದಲ್ಲಿ ಬೆಳಕಿಗೆ ಬಂದ ಕೀಟ | ವರದಿ ಮಾಡಿದ ಸಿಪಿಸಿಆರ್‌ಐ ವಿಜ್ಞಾನಿಗಳು | ಅಂತರಾಷ್ಟ್ರೀಯ ಜರ್ನಲ್ ಇನ್ಸೆಕ್ಟ್ಸ್ ನಲ್ಲಿ ಪ್ರಕಟ | ಅಡಿಕೆ ಗುಣಮಟ್ಟದ ಮೇಲೆ ಪರಿಣಾಮ |

Share

ಅಡಿಕೆಗೆ ಹೊಸ ಬಗೆಯ ಕೀಟವೊಂದು ಕಾಟ ಕೊಡುತ್ತಿರುವ ಬಗ್ಗೆ ಸಿಪಿಸಿಐಆರ್‌ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದರಿಂದ ಅಡಿಕೆ  ಗುಣಮಟ್ಟ ಕಡಿಮೆಯಾಗುವುದು ಕಂಡುಬರುತ್ತದೆ. ಸಣ್ಣ ಜೀರುಂಡೆಯಾದ ಕ್ಸಿಲೋಸಾಂಡ್ರಸ್ ಕ್ರಾಸಿಯಸ್ಕುಲಸ್‌ ಎಂಬ ಜೀರುಂಡೆ ಮಾದರಿಯ ಕೀಟ ದಾಳಿಯನ್ನು ಮಾಡುತ್ತಿರುವುದು  ಪತ್ತೆಯಾಗಿದೆ.ಪ್ರಸ್ತುತ ಇದು ತುಂಬಾ ಗಂಭೀರವಾದ ಸಂಗತಿಯಾಗಿಲ್ಲ. ಆದರೆ ಅಡಿಕೆ ಮಾರುಕಟ್ಟೆ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಭವಿಷ್ಯದಲ್ಲಿ ವಾತಾವರಣದ ಕಾರಣದಿಂದ ಗಂಭೀರ ಸಮಸ್ಯೆಯಾಗುವ ಆತಂಕ ಇದೆ. 

Advertisement
Advertisement

ಅಡಿಕೆಗೆ ಸಾಮಾನ್ಯವಾಗಿ ರಸ ಹೀರುವ ಕೀಟಗಳ ಕಾಟ ಇರುತ್ತದೆ. ಈಗಾಗಲೇ ಹಲವು ಕಡೆಗಳಲ್ಲಿ ಪೆಂಟಾಟೊಮಿಡ್ ಬಗ್ ಮತ್ತು ಪೆರಿಯಾಂತ್ ಮೈಟ್  ಎಳೆ ಅಡಿಕೆಯನ್ನು ಮುತ್ತಿಕ್ಕುವ ಪ್ರಮುಖ ಕೀಟಗಳಾಗಿವೆ. ಮಲೆನಾಡು ಹಾಗೂ ಬಯಲು ಸೀಮೆಯ ಹಲವು ಕಡೆಗಳಲ್ಲಿ ಈಗಾಗಲೇ ಈ ಕೀಟಗಳು ಕಂಡುಬರುತ್ತವೆ. ಇದರಿಂದ ಎಳೆ ಅಡಿಕೆ ಬೀಳುವುದು ಕಂಡುಬಂದಿದೆ. ಇದೀಗ ವಿಟ್ಲದ ಸಿಪಿಸಿಆರ್‌ಐ ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳ ತಂಡವು ಅಡಿಕೆ ಬೆಳೆಗಾರರ ತೋಟದಲ್ಲಿ  ಅಡಿಕೆಗೆ ಬಾಧಿಸುವ ಹೊಸ ಕೀಟವನ್ನು ಗುರುತಿಸಿದ್ದಾರೆ.

Advertisement
Photo and source : insects journal,13(67), 2022
Photo and source : insects journal, 13(67), 2022

ಈಚೆಗೆ ಕೃಷಿಕರ ತೋಟಗಳಿಗೆ ಭೇಟಿ ನೀಡುವ ಸಂದರ್ಭ ಸುಳ್ಯ ತಾಲೂಕಿನ  ಮರ್ಕಂಜ ಗ್ರಾಮ ಮತ್ತು ಕಡಬ ತಾಲೂಕಿನ ಕಾಣಿಯೂರು ಗ್ರಾಮದಲ್ಲಿ ಎಳೆ ಅಡಿಕೆ ಬೀಳುತ್ತಿರುವ ಬಗ್ಗೆ ಅಧ್ಯಯನ ನಡೆಸಲು ವಿಜ್ಞಾನಿಗಳ ತಂಡವು ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ  ಈ ಹೊಸ ಬಗೆಯ ಕೀಟ ಇರುವುದು  ಬೆಳಕಿಗೆ ಬಂದಿದೆ. ಸುಮಾರು 2.5-2.8 ಮಿಮೀ ಅಳತೆಯ ಜೀರುಂಡೆಯಾಕಾರದ ಕೀಟ  ಕ್ಸಿಲೋಸಾಂಡ್ರಸ್ ಕ್ರಾಸಿಯಸ್ಕುಲಸ್‌ ಇರುವುದು  ದೃಢಪಟ್ಟಿದೆ. ಈ ಕೀಟದ  ವಯಸ್ಕ ಹೆಣ್ಣು ಜೀರುಂಡೆ 1.06-2.39 ಮಿಮೀ ಅಗಲದಲ್ಲಿ  ಅಡಿಕೆಯನ್ನು ತೂತು ಮಾಡಿ ಒಳಗೆ ಪ್ರವೇಶಿಸುತ್ತದೆ. ಇದು ಅಡಿಕೆಯ ಒಳಗೆ ಪ್ರವೇಶ ಮಾಡುತ್ತಿರುವಂತೆಯೇ ಶಿಲೀಂದ್ರ ಕೂಡಾ ಜೊತೆಗೇ ಅಡಿಕೆಗೆ ಸೇರುತ್ತದೆ.  ಅಡಿಕೆಯ ಒಳಗೆ ಈ ಕೀಟವು ಸಂತಾನೋತ್ಪತ್ತಿ ಮಾಡುತ್ತದೆ. ಕೀಟದ ಜೊತೆಗೆ ಒಳಹೋಗುವ ಶಿಲೀಂದ್ರ ಈ ಜೀರುಂಡೆಯ ಆಹಾರವೂ ಆಗಿರುತ್ತದೆ. ಇದರಿಂದ ಅಡಿಕೆಯ ಗುಣಮಟ್ಟ ಕಡಿಮೆಯಾಗುತ್ತದೆ. ಕೀಟದಿಂದ ಮಾಡಿದ ರಂಧ್ರ ಮತ್ತು ಕೊರೆತ ರಂಧ್ರದಿಂದ ಹೊರಬರುವ ಪುಡಿಯಿಂದ ಅಂದರೆ ಹಿಕ್ಕೆಯಿಂದ ಅಡಿಕೆ ಮೇಲೆ ಕೀಟ ಮಾಡಿರುವ ಧಾಳಿಯನ್ನು ತಿಳಿಯಬಹುದಾಗಿದೆ.

Photo and source : insects journal, 13(67), 2022

ಈಗ ಪತ್ತೆಯಾದ ಕ್ಸೈಲೋಸಾಂಡ್ರಸ್ ಕ್ರಾಸಿಯಸ್ಕುಲಸ್‌ ಕೀಟವು ಆಂಬ್ರೋಸಿಯೆಲ್ಲಾ ರೋಪೆರಿ ಎಂಬ ಶಿಲೀಂಧ್ರಗಳ ಸಹಜೀವನವೂ ಇಲ್ಲಿ ಪ್ರಮುಖವಾಗಿ ಕಂಡುಬಂದಿದೆ. ವಿಜ್ಞಾನಿಗಳು ಈ ಬಗ್ಗೆಯೂ ಗಮನಹರಿಸಿದಾಗ  ಕುತೂಹಲಕಾರಿಯಾದ ಅಂಶವು ಬೆಳೆಕಿಗೆ ಬಂದಿದೆ. ಈ ಶಿಲೀಂಧ್ರವು ಕೀಟದ ಲಾರ್ವಾಗಳು ಮತ್ತು ಕೀಟಗಳಿಗೆ ಪೌಷ್ಟಿಕಾಂಶದ ಆಹಾರದ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಶಿಲೀಂಧ್ರವು ಅಡಿಕೆಯ ಒಳಗೆ  ಕಪ್ಪು ಕಲೆಗಳನ್ನು ಉಂಟುಮಾಡುತ್ತದೆ ಮತ್ತು ಬೂದು ಮಿಶ್ರಿತ ಶಿಲೀಂಧ್ರಗಳ  ಸಮೃದ್ಧ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಅಡಿಕೆಯ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು  ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

Advertisement

ದಕ್ಷಿಣ ಕನ್ನಡ ಹಾಗೂ ಅಡಿಕೆಯ ಪ್ರದೇಶದಲ್ಲಿ ಸದ್ಯ ಕ್ಸೈಲೋಸಾಂಡ್ರಸ್ ಕ್ರಾಸಿಯಸ್ಕುಲಸ್‌ನ ಮೊದಲ ವರದಿಯಾಗಿದೆ. ಹೀಗಾಗಿ  ಈ ಕೀಟದ ಬಗ್ಗೆ  ವಿಟ್ಲದ ಸಿಪಿಸಿಐಆರ್‌ ನ ಯುವ ವಿಜ್ಞಾನಿಗಳಾದ  ಡಾ. ಶಿವಾಜಿ ತುಬೆ ನೇತೃತ್ವದ ತಂಡವು ವರದಿ ಮಾಡಿದೆ. ಡಾ.ತವಪ್ರಕಾಶ ಪಾಂಡಿನ್ ಮತ್ತು ಡಾ.ಭವಿಷ್ಯ ಇದರ ಸದಸ್ಯರಾಗಿದ್ದರು. ಈ ವರದಿಯನ್ನು ಅಂತರಾಷ್ಟ್ರೀಯ ಜರ್ನಲ್ ಇನ್ಸೆಕ್ಟ್ಸ್ ನಲ್ಲಿ ಪ್ರಕಟಿಸಲಾಗಿದೆ.

ನಮ್ಮ ವಿಜ್ಞಾನಿಗಳು ಅಡಿಕೆಯನ್ನು ಮುತ್ತಿಕೊಂಡಿರುವ ಅಡಿಕೆಯ ಹೊಸಕೀಟವನ್ನು ಗುರುತಿಸಿದ್ದಾರೆ ಮತ್ತು ವರದಿ ಮಾಡಿದ್ದಾರೆ. ಇದಲ್ಲದೆ, ಪರಿಸರ ಸ್ನೇಹಿ ಕಾರ್ಯತಂತ್ರಗಳನ್ನು ಬಳಸಿಕೊಂಡು ಅದರ ನಿರ್ವಹಣೆಯನ್ನು ಅಧ್ಯಯನ ಮಾಡಲಾಗುತ್ತದೆ  ಎಂದು ಸಿಪಿಸಿಐಆರ್‌ ನಿರ್ದೇಶಕಿ  ಡಾ. ಅನಿತಾ ಕರುಣ್ ತಿಳಿಸಿದ್ದಾರೆ.

Advertisement

ಇದೊಂದು ಆಸಕ್ತಿದಾಯಕ ಆವಿಷ್ಕಾರವಾಗಿದೆ. ಪ್ರಸ್ತುತ ಇದು ತುಂಬಾ ಗಂಭೀರವಾಗಿಲ್ಲ. ಆದರೆ ಅಡಿಕೆ ಮಾರುಕಟ್ಟೆ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಅಡಿಕೆ ಬೆಳೆಗಾರರ ಕಾಳಜಿಯ ವಿಷಯವಾಗಿದೆ. ಅದರ ನಿರ್ವಹಣೆಗಾಗಿ ಕ್ರಮಗಳ ಬಗ್ಗೆ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ವಿಜ್ಞಾನಿ ಡಾ.ಶಿವಾಜಿ ತುಬೆ ಹೇಳಿದ್ದಾರೆ.

ನಾವು ಈ ಕೀಟಗಳನ್ನು ಹೆಚ್ಚಾಗಿ ಯುವ ಉದ್ಯಾನಗಳಲ್ಲಿನ  ಸಸ್ಯಗಳಲ್ಲಿ ಗಮನಿಸಿದ್ದೇವೆ. ಇಳುವರಿಯನ್ನು ಉಳಿಸಿಕೊಳ್ಳಲು ಮತ್ತು ಕೀಟ ಮತ್ತು ರೋಗಗಳಿಂದ ಬೆಳೆಯನ್ನು ಸಂರಕ್ಷಿಸಲು ಸಮತೋಲಿತ ಪೋಷಣೆ ಬಹಳ ಮುಖ್ಯ ಎಂದು ವಿಜ್ಞಾನಿ ಡಾ. ಭವಿಷ್ಯ ಮಾಹಿತಿ ನೀಡಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!

ಪರಿಸರ ಔಷಧ ಶಾಸ್ತ್ರವು(Environmental Medicine) ಸಾಮಾನ್ಯವಾಗಿ ಮಾನವನ ಆರೋಗ್ಯದ(Human health) ಮೇಲೆ ನಕಾರಾತ್ಮಕ…

15 mins ago

ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ : ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ

ಕರ್ನಾಟಕದಲ್ಲಿ(Karnakta) ಮೊದಲ ಹಂತದ ಚುನಾವಣೆ(Election) ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ(Campaign)…

54 mins ago

ರೈತರ ಪಾಲಿಗೆ ನೆರವಾದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ : 17ನೇ ಕಂತಿನ ಹಣ ರೈತರ ಖಾತೆಗೆ ಯಾವಗ ಬರುತ್ತೆ..?

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌(PM Kisan) ಯೋಜನೆ ಆರಂಭವಾದಗಿಂದಲೂ ರೈತರ(Farmer) ಖಾತೆಗೆ ನೇರವಾಗಿ…

1 hour ago

ಇವರು ಎಲ್ಲಾ ಕುಂದುಕೊರತೆಗಳ ನಡುವೆಯೂ ಮತದಾನ ಮಾಡ್ತಾರೆ…! | ಅವರು ಎಲ್ಲಾ ಸೌಕರ್ಯ ಇದ್ದರೂ ಮತದಾನ ಮಾಡಲಾರರು..!

ನಗರದಲ್ಲಿ ಮತದಾನ ಕಡಿಮೆಯಾಗಿರುವ ಬಗ್ಗೆ ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಪ್ರಬಂಧ…

2 hours ago

Karnataka Weather | 29-04-2024 | ರಾಜ್ಯದ ಹಲವು ಕಡೆ ಅಧಿಕ ತಾಪಮಾನ | ಮಲೆನಾಡು ಭಾಗದ ಕೆಲವು ಕಡೆ ಮಳೆ ನಿರೀಕ್ಷೆ |

ಈಗಿನಂತೆ ಅಧಿಕ ತಾಪಮಾನದ ವಾತಾವರಣದ ಇನ್ನೂ 3 ರಿಂದ 4 ದಿನಗಳ ಕಾಲ…

3 hours ago

ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ನಾಯಕ | ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ

ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ, ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ದಲಿತ…

4 hours ago