Advertisement
MIRROR FOCUS

ಜೂ.30 ಬೆಳೆ ವಿಮೆ ಮಾಡಿಸಲು ಕೊನೆಯ ದಿನ | ಸಹಕಾರಿ ಸಂಘಗಳಲ್ಲಿ ಹೆಚ್ಚಿದ ಒತ್ತಡ | ಸಹಕಾರಿ ಸಂಘಗಳಿಗೆ 15 ದಿನಗಳ ಕಾಲಾವಕಾಶ |

Share

ಈಗ ಬೆಳೆವಿಮೆಯ ತುರ್ತಿನಲ್ಲಿ ಸಹಕಾರಿ ಸಂಘಗಳು ಕೆಲಸ ಮಾಡುತ್ತಿವೆ. ತಡರಾತ್ರಿಯವರೆಗೂ ಇದೇ ಕೆಲಸದಲ್ಲಿ  ಸಿಬಂದಿಗಳು ನಿರತರಾಗಿದ್ದಾರೆ. ಬೆಳೆಗಾರರ, ಕೃಷಿಕರ ಹಿತಕ್ಕಾಗಿ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ  ಸಿಬಂದಿಗಳು ಕೆಲಸ ಮಾಡುತ್ತಿದ್ದಾರೆ. ಜೂ.30  ಬೆಳೆ ವಿಮೆ ಮಾಡಿಸಲು ಕೊನೆಯ ದಿನವಾದರೆ ಸಹಕಾರಿ ಸಂಘಗಳು ಮುಂದಿನ  15 ದಿನಗಳ ಒಳಗಾಗಿ ವೆಬ್‌ ಸೈಟ್‌ ಗೆ ಅಪ್ ಲೋಡ್‌ ಮಾಡಲು ಕಾಲಾವಕಾಶ ಇದೆ.

Advertisement
Advertisement
Advertisement
Advertisement

ಇಂತಹದ್ದೊಂದು ಮಾಹಿತಿ ಕ್ಲಬ್‌ ಹೌಸ್‌ ಸಂವಾದಲ್ಲಿ  ಶುಕ್ರವಾರ ಲಭ್ಯವಾಗಿದೆ.

Advertisement

Agriculuturist  ಬಳಗದ ವತಿಯಿಂದ ಕಳೆದ ಕೆಲವು ದಿನಗಳಿಂದ ಕ್ಲಬ್‌ ಹೌಸ್‌ ನಲ್ಲಿ ಕೃಷಿ ವಿಚಾರವಾಗಿ ವಿಚಾರವಿನಿಮಯ ನಡೆಯುತ್ತಿದೆ. ಇದಕ್ಕೆ ಆಯಾ ಕ್ಷೇತ್ರದ ಪ್ರಮುಖರು ಮಾಹಿತಿ ನೀಡುತ್ತಿದ್ದಾರೆ. ಶುಕ್ರವಾರ ಬೆಳೆವಿಮಯ ಅಗತ್ಯತೆ, ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಸಂವಾದ ನಡೆಯಿತು.ವಿವಿಧ ಸಹಕಾರಿ ಸಂಘಗಳ ಸಿಇಒ ಹಾಗೂ ಅಧ್ಯಕ್ಷರುಗಳು , ನಿರ್ದೇಶಕರು , ಸಿ ಎಸ್‌ ಸಿ ಕೇಂದ್ರದ ಪ್ರಮುಖರು, ಕೃಷಿಕರು ಹಾಗೂ ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಭಾಗವಹಿಸಿದ್ದರು.

Advertisement

ಬೆಳೆ ವಿಮೆಯ ಅಗತ್ಯತೆಯ ಬಗ್ಗೆ ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಅವರು  ಮಾಹಿತಿ ನೀಡಿದರು. ಈ ಸಂದರ್ಭ ಸಹಕಾರಿ ಸಂಘಗಳಲ್ಲಿನ ಸಮಸ್ಯೆಯ ಬಗ್ಗೆಯೂ ಮಾತುಕತೆ ನಡೆಸಲಾಯಿತು.

ಸರಕಾರ ಇದೇ ಜೂನ್ 30 ರ ಒಳಗಾಗಿ ಬೆಳೆ ವಿಮೆ ಮಾಡಿಸಬೇಕೆಂದು ಗಡುವು ನೀಡಿರುತ್ತದೆ .ಇದರ ಜೊತೆ ಎಲ್ಲಾ ಬೆಳೆ ವಿಮೆ ಪಾವತಿ ಯನ್ನು ಕೂಡ ಸಂಬಂಧಪಟ್ಟ ವಿಮಾ ಕಂಪೆನಿಗೆ  ನಮ್ಮ ಸಂಘದಿಂದ ಜೂನ್ 30 ರ ಒಳಗೆ ಅಪ್ ಲೋಡ್ ಮಾಡಬೇಕೆಂದು ಕೂಡಾ ಗಡುವು ನೀಡಿದೆ, ಆದರೆ ಈ ಬಾರಿಯ ನಿಯಮದಂತೆ ಪ್ರತೀ ಸರ್ವೆ ನಂಬರ್‌ ದಾಖಲು ಮಾಡಬೇಕಾದ್ದರಿಂದ ತಡವಾಗುತ್ತಿದೆ, ನೆಟ್ವರ್ಕ್‌ ಸಮಸ್ಯೆ ಕೂಡಾ ಇರುವುರಿಂದ  ಅಪ್‌ ಲೋಡ್‌ ಆಗದೇ ಇರುವುದು ಗೊಂದಲಕ್ಕೆ ಕಾರಣವಾಗಿತ್ತು.

Advertisement

ಇಂತಹ ಯಾವುದೇ ಗೊಂದಲಗಳು ಅಗತ್ಯವಿಲ್ಲ, ಸಹಕಾರಿ ಸಂಘಗಳು  ಜೂನ್ 30 ರ ಒಳಗೆ ಬೆಳೆ ವಿಮೆ ಅರ್ಜಿ ಪಡೆದು ಮುಂದಿನ  15  ದಿನಗಳ ಒಳಗಾಗಿ ಅಪ್‌ ಲೋಡ್‌ ಮಾಡಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಾಶ್‌ ಅವರು ಮಾಹಿತಿ ನೀಡಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

“ನದಿ ಮತ್ತು ಪರಿಸರ” ಶುದ್ಧತೆ ಉಳಿಸಿಕೊಳ್ಳಬೇಕಾದರೆ ಭಾವನಾತ್ಮಕವಾಗಿ ಅಷ್ಟೇ ಕನೆಕ್ಟ್‌ ಆಗಬೇಕಾದ್ದಲ್ಲ…

ಮಹಾಕುಂಭ ಮೇಳದ ಮೂಲಕ ಹೊಸದೊಂದು ಸಂಕಲ್ಪವನ್ನು ಜನರು ಮಾಡಬೇಕು. ಈ ಬಾರಿ ಕುಂಭಮೇಳದಲ್ಲಿ…

4 hours ago

ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರದ ಕೊಡುಗೆ ಅಪಾರ | ಸರ್ವೇ ಪ್ರಕಾರ ಜಿಡಿಪಿ ದರಕ್ಕೆ ಕೃಷಿ ಕ್ಷೇತ್ರದ ಕೊಡುಗೆ ಶೇ.16 |

ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಸೃಷ್ಠಿಸಲು ಹಾಗೂ ಗ್ರಾಮೀಣ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು…

5 hours ago

ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ 22 ಕೋಟಿ ರೂಪಾಯಿ ಬಿಡುಗಡೆ | ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಚಾಲನೆ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ…

6 hours ago

ಮಹಾಕುಂಭಮೇಳ ಸಂಪನ್ನ | ಮಹಾಶಿವರಾತ್ರಿಯಂದು ಕೊನೆಯ ಪುಣ್ಯಸ್ನಾನ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭಮೇಳ ಶಿವರಾತ್ರಿಯಂದು(ಇಂದು) ಸಂಪನ್ನಗೊಳ್ಳಲಿದೆ.ಈ ಹಿನ್ನೆಲೆಯಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ…

6 hours ago

ಮಹಿಳಾ ಸ್ವಾವಲಂಬನೆಗೆ ಆದ್ಯತೆ | ಶಿವಮೊಗ್ಗದಲ್ಲಿ ‘ಅವ್ವ ಸಂತೆ’ ಆಯೋಜನೆ

ಶಿವಮೊಗ್ಗ ಜಿಲ್ಲೆಯ ಸಾಗರದ  ಜೀವನ್ಮುಖಿ ಸಂಘಟನೆ ಹಾಗೂ ಭೀಮನಕೋಟೆಯ ಚರಕ ಮಹಿಳಾ  ವಿವಿಧೋದ್ದೇಶ…

6 hours ago

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |

ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…

14 hours ago