MIRROR FOCUS

ಜೂ.30 ಬೆಳೆ ವಿಮೆ ಮಾಡಿಸಲು ಕೊನೆಯ ದಿನ | ಸಹಕಾರಿ ಸಂಘಗಳಲ್ಲಿ ಹೆಚ್ಚಿದ ಒತ್ತಡ | ಸಹಕಾರಿ ಸಂಘಗಳಿಗೆ 15 ದಿನಗಳ ಕಾಲಾವಕಾಶ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಈಗ ಬೆಳೆವಿಮೆಯ ತುರ್ತಿನಲ್ಲಿ ಸಹಕಾರಿ ಸಂಘಗಳು ಕೆಲಸ ಮಾಡುತ್ತಿವೆ. ತಡರಾತ್ರಿಯವರೆಗೂ ಇದೇ ಕೆಲಸದಲ್ಲಿ  ಸಿಬಂದಿಗಳು ನಿರತರಾಗಿದ್ದಾರೆ. ಬೆಳೆಗಾರರ, ಕೃಷಿಕರ ಹಿತಕ್ಕಾಗಿ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ  ಸಿಬಂದಿಗಳು ಕೆಲಸ ಮಾಡುತ್ತಿದ್ದಾರೆ. ಜೂ.30  ಬೆಳೆ ವಿಮೆ ಮಾಡಿಸಲು ಕೊನೆಯ ದಿನವಾದರೆ ಸಹಕಾರಿ ಸಂಘಗಳು ಮುಂದಿನ  15 ದಿನಗಳ ಒಳಗಾಗಿ ವೆಬ್‌ ಸೈಟ್‌ ಗೆ ಅಪ್ ಲೋಡ್‌ ಮಾಡಲು ಕಾಲಾವಕಾಶ ಇದೆ.

Advertisement

ಇಂತಹದ್ದೊಂದು ಮಾಹಿತಿ ಕ್ಲಬ್‌ ಹೌಸ್‌ ಸಂವಾದಲ್ಲಿ  ಶುಕ್ರವಾರ ಲಭ್ಯವಾಗಿದೆ.

Agriculuturist  ಬಳಗದ ವತಿಯಿಂದ ಕಳೆದ ಕೆಲವು ದಿನಗಳಿಂದ ಕ್ಲಬ್‌ ಹೌಸ್‌ ನಲ್ಲಿ ಕೃಷಿ ವಿಚಾರವಾಗಿ ವಿಚಾರವಿನಿಮಯ ನಡೆಯುತ್ತಿದೆ. ಇದಕ್ಕೆ ಆಯಾ ಕ್ಷೇತ್ರದ ಪ್ರಮುಖರು ಮಾಹಿತಿ ನೀಡುತ್ತಿದ್ದಾರೆ. ಶುಕ್ರವಾರ ಬೆಳೆವಿಮಯ ಅಗತ್ಯತೆ, ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಸಂವಾದ ನಡೆಯಿತು.ವಿವಿಧ ಸಹಕಾರಿ ಸಂಘಗಳ ಸಿಇಒ ಹಾಗೂ ಅಧ್ಯಕ್ಷರುಗಳು , ನಿರ್ದೇಶಕರು , ಸಿ ಎಸ್‌ ಸಿ ಕೇಂದ್ರದ ಪ್ರಮುಖರು, ಕೃಷಿಕರು ಹಾಗೂ ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಭಾಗವಹಿಸಿದ್ದರು.

ಬೆಳೆ ವಿಮೆಯ ಅಗತ್ಯತೆಯ ಬಗ್ಗೆ ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಅವರು  ಮಾಹಿತಿ ನೀಡಿದರು. ಈ ಸಂದರ್ಭ ಸಹಕಾರಿ ಸಂಘಗಳಲ್ಲಿನ ಸಮಸ್ಯೆಯ ಬಗ್ಗೆಯೂ ಮಾತುಕತೆ ನಡೆಸಲಾಯಿತು.

ಸರಕಾರ ಇದೇ ಜೂನ್ 30 ರ ಒಳಗಾಗಿ ಬೆಳೆ ವಿಮೆ ಮಾಡಿಸಬೇಕೆಂದು ಗಡುವು ನೀಡಿರುತ್ತದೆ .ಇದರ ಜೊತೆ ಎಲ್ಲಾ ಬೆಳೆ ವಿಮೆ ಪಾವತಿ ಯನ್ನು ಕೂಡ ಸಂಬಂಧಪಟ್ಟ ವಿಮಾ ಕಂಪೆನಿಗೆ  ನಮ್ಮ ಸಂಘದಿಂದ ಜೂನ್ 30 ರ ಒಳಗೆ ಅಪ್ ಲೋಡ್ ಮಾಡಬೇಕೆಂದು ಕೂಡಾ ಗಡುವು ನೀಡಿದೆ, ಆದರೆ ಈ ಬಾರಿಯ ನಿಯಮದಂತೆ ಪ್ರತೀ ಸರ್ವೆ ನಂಬರ್‌ ದಾಖಲು ಮಾಡಬೇಕಾದ್ದರಿಂದ ತಡವಾಗುತ್ತಿದೆ, ನೆಟ್ವರ್ಕ್‌ ಸಮಸ್ಯೆ ಕೂಡಾ ಇರುವುರಿಂದ  ಅಪ್‌ ಲೋಡ್‌ ಆಗದೇ ಇರುವುದು ಗೊಂದಲಕ್ಕೆ ಕಾರಣವಾಗಿತ್ತು.

ಇಂತಹ ಯಾವುದೇ ಗೊಂದಲಗಳು ಅಗತ್ಯವಿಲ್ಲ, ಸಹಕಾರಿ ಸಂಘಗಳು  ಜೂನ್ 30 ರ ಒಳಗೆ ಬೆಳೆ ವಿಮೆ ಅರ್ಜಿ ಪಡೆದು ಮುಂದಿನ  15  ದಿನಗಳ ಒಳಗಾಗಿ ಅಪ್‌ ಲೋಡ್‌ ಮಾಡಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಾಶ್‌ ಅವರು ಮಾಹಿತಿ ನೀಡಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 01-05-2025 | ಕೆಲವು ಕಡೆ ಸಂಜೆ ಮಳೆ ನಿರೀಕ್ಷೆ | ಮೇ.6 ರಿಂದ ಮತ್ತೆ ಮಳೆ ಆರಂಭ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…

7 hours ago

ಅಪ್ಪ ಅಮ್ಮ ಇಲ್ಲದ ಪರೀಕ್ಷಾ ನಿಯಮಗಳು

ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…

9 hours ago

ಮೇ 2- 6 | ಮಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ

ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…

12 hours ago

ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮುಕ್ತಾಯ | ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ | ಜೋಗ ಇನ್ನು ಮತ್ತಷ್ಟು ಆಕರ್ಷಕ |

ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ  ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ  ವಿವಿಧ…

13 hours ago

ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |

ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…

1 day ago

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…

1 day ago