Advertisement
The Rural Mirror ಕಾಳಜಿ

ಒಂದು ಸಣ್ಣ ಕತೆ | ಶಾಲೆ ಎಂಬ ದೇಗುಲ – ಅಭಿವೃದ್ದಿಯ ಅನಿವಾರ್ಯತೆ | ಇದು ಸುಬ್ರಹ್ಮಣ್ಯದ ಸರಕಾರಿ ಶಾಲೆಯ ಕತೆ |

Share

ಅಭಿವೃದ್ದಿ ಎನ್ನುವ ಅರ್ಥ ವಿಶಾಲವಾದ್ದು. ಅದರಲ್ಲಿ ಮುಖ್ಯವಾಗಿ ಕಾಣುವಂತದ್ದು, ಭೌತಿಕ ಅಭಿವೃದ್ದಿ ಹಾಗೂ ಇನ್ನೊಂದು ಬೌದ್ಧಿಕವಾದ ಅಭಿವೃದ್ಧಿ. ಇದೆರಡೂ ಇಂದು ಅಗತ್ಯವಾಗಿದೆ. ಆದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಅಂತಹದ್ದೊಂದು ಸಂದಿಗ್ಧತೆ ಇದೆ. ಈಗ ಭೌತಿಕ ಅಭಿವೃದ್ಧಿಗೆ ಆದ್ಯತೆಯೋ, ಬೌದ್ಧಿಕ ಅಭಿವೃದ್ಧಿಗೆ ಆದ್ಯತೆಯೋ ಎಂಬುದು  ಪ್ರಶ್ನೆ. ಇಲ್ಲಿ ಎರಡೂ ಮುಖ್ಯವೇ ಆಗಿದೆ.

ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಕುಮಾರಧಾರಾದಿಂದಲೇ ಕಾಂಕ್ರೀಟ್‌ ರಸ್ತೆ ಆರಂಭವಾಗಿದೆ ಮಾಸ್ಟರ್‌ ಪ್ಲಾನ್‌ ಸಮಿತಿಯ ಮೂಲಕ ವಿವಿಧ ಕಾಮಗಾರಿಗಳು ನಡೆಯುತ್ತಿದೆ. ಇದು  ಅಗತ್ಯ ಹಾಗೂ ಅನಿವಾರ್ಯ ಕೂಡಾ. ಕುಕ್ಕೆ ಸುಬ್ರಹ್ಮಣ್ಯ ರಾಷ್ಟ್ರೀಯ ಮಟ್ಟದಲ್ಲಿ  ಸ್ಥಾನ ಪಡೆದಿರುವ ಪುಣ್ಯ ಸ್ಥಳ, ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ, ಹೀಗಾಗಿ ಮೂಲಭೂತವಾದ ಭೌತಿಕ ಅಭಿವೃದ್ಧಿ ಮಾಡಿಸಲೇ ಬೇಕಾದ ಅನಿವಾರ್ಯತೆ ಇದೆ. ಶುಚಿತ್ವ, ಪಾರ್ಕಿಂಗ್‌ ವ್ಯವಸ್ಥೆ ಇದೆಲ್ಲಾ ಆಗಬೇಕಾದ್ದೇ. ಹೀಗೆ ಅಭಿವೃದ್ಧಿಯ ವೇಳೆಗೆ ಈಗ ಸಂಕಷ್ಟದಲ್ಲಿ ಇರುವುದು  ಇಲ್ಲಿನ  ಸರಕಾರಿ ಶಾಲೆ. ಈ ಚಿತ್ರ ನೋಡಿ.. ಎರಡೂ ಕಡೆ ಕಾಂಕ್ರೀಟ್‌ ಬಂದು ನಿಂತಿದೆ.. ಇನ್ಯಾವಾಗ ಶಾಲೆ ಒಡೆಯುವುದು …? ಈ ಚಿತ್ರ ಮನಸಿಗೆ ನಾಟುತ್ತಿದೆ.

 

ಹಾಗೆಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ವಿದ್ಯಾದಾನವೂ ನಡೆಯುತ್ತಿದೆ. ಅನೇಕ ಮಕ್ಕಳಿಗೆ ಉಚಿತ ಶಿಕ್ಷಣ, ಅನ್ನದಾನವೂ ನಡೆಯುತ್ತದೆ, ಗುಣಮಟ್ಟದ ಕಡೆಗೂ ಆದ್ಯತೆ ನೀಡಲಾಗುತ್ತಿದೆ. ಆದರೆ ಈಗ ಎರಡೂ ಕಡೆ ಕಾಂಕ್ರೀಟ್‌ ಆಗಿ ನಿಂತಿರುವ ಶಾಲೆ ಸರಕಾರಿ ಶಾಲೆ. ಸರಕಾರದಿಂದಲೇ ನಡೆಸಲ್ಪಡುವ ಶಾಲೆ ಒಂದು ಕಡೆ ಸರಕಾರದಿಂದಲೇ ಆಡಳಿತಕ್ಕೊಳಪಡುವ ದೇವಸ್ಥಾನದ ಮಾಸ್ಟರ್‌ ಪ್ಲಾನ್‌ ಸಮಿತಿ ಒಂದು ಕಡೆ. ಎರಡೂ ಸರಕಾರವೇ. ಈಗ ಸದ್ಯದ ಮಟ್ಟಿಗೆ ಈ ಶಾಲೆಯ ಮಕ್ಕಳನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಕಾಲೇಜಿನ ಒಂದು ಕೊಠಡಿಯನ್ನು ವಿಭಾಗ ಮಾಡಿ ಅಲ್ಲಿಗೆ ಮಕ್ಕಳನ್ನು, ಶಾಲೆಯನ್ನು ಸ್ಥಳಾಂತರ ಮಾಡಲಾಗುತ್ತದೆ ಎಂಬುದು ಸದ್ಯದ ಮಾಹಿತಿ. ಅದೂ ಸುಮಾರು 1.5 ಕಿಮೀ ಈ ಪುಟ್ಟ ಮಕ್ಕಳು ಕಾಂಕ್ರೀಟ್‌ ರಸ್ತೆಯ ಬದಿಯಲ್ಲಿ  ನಡೆದುಕೊಂಡ ಸಾಗಬೇಕು. ಅಚ್ಚರಿ ಎಂದರೆ ಯಾವುದೇ ವ್ಯಕ್ತಿಗಳೂ ಈ ಬಗ್ಗೆ ಮಾತನಾಡುತ್ತಿಲ್ಲ ಏಕೆಂದರೆ ಇಲ್ಲಿ ಕಲಿಯುವ  ಬಹುತೇಕ ವಿದ್ಯಾರ್ಥಿಗಳು ಬಡವರು. ಹೀಗಾಗಿ ಆ ಮಾತುಗಳಿಗೆ “ವಾಯ್ಸ್”‌ ಇಲ್ಲವಾಗಿದೆ. ಹಾಗಂತ ಭವಿಷ್ಯದಲ್ಲಿ ಮಕ್ಕಳ ಸಮಸ್ಯೆ ಬಗ್ಗೆ ಮಾತನಾಡಿದರೆ ಹೌದು ಎನ್ನುತ್ತಾರೆ, ಶಾಲೆ ಮಚ್ಚಬಹುದು  ಎನ್ನುತ್ತಾರೆ. ಪ್ರತ್ಯೇಕ ಕೊಠಡಿ ಆಗುತ್ತದೆ ಎನ್ನುತ್ತಾರೆ. ಎಲ್ಲವೂ ಹೌದು. ಆದರೆ ಖಚಿತವಾದ ಯಾವುದೇ ನಿರ್ಧಾರಗಳು ಹೊರಬಿದ್ದಿಲ್ಲ ಎನ್ನುವುದು  ವಿಷಾದವಷ್ಟೇ.

 

ಅನಾದಿಕಾಲದಿಂದಲೂ ದೇವಸ್ಥಾನಗಳು ಪ್ರತೀ ವ್ಯಕ್ತಿಯ ಬೌದ್ಧಿಕ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿತ್ತು, ಈಗಲೂ ಬರೆಯುತ್ತಿದೆ. ವಿದ್ಯಾರಂಭವೂ ದೇವಸ್ಥಾನ, ದೇವರ ಮುಂದೆಯೇ ನಡೆಯುತ್ತದೆ. ಮೊದಲ ತುತ್ತು ಕೂಡಾ ಮಕ್ಕಳಿಗೆ ದೇವರ ಮುಂದೆಯೇ ನೀಡಲಾಗುತ್ತದೆ. ಆ ಬಳಿಕ ಪ್ರತೀ ಹೆಜ್ಜೆಯೂ ವ್ಯಕ್ತಿಯ ಬೌದ್ಧಿಕ ಅಭಿವೃದ್ಧಿಗೆ ದೇವಸ್ಥಾನಗಳು ಕಾರಣವಾಗುತ್ತಿತ್ತು. ಇಲ್ಲೂ ಕೂಡಾ ದೇವಸ್ಥಾನದ ವತಿಯಿಂದಲೇ ಕಾಲೇಜು ನಡೆಸಲಾಗುತ್ತಿದೆ, ಅದರ ಜೊತೆಯೇ ಈ ಸರಕಾರಿ ಶಾಲೆಯೂ ಸುಸಜ್ಜಿತವಾಗಿ ನಡೆಯಲಿ, ಇನ್ನಷ್ಟು ಕಲಿಕಾ ವ್ಯವಸ್ಥೆಗಳು ಲಭ್ಯವಾಗಲಿ ಎಂಬುದಷ್ಟೇ ಆಶಯ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ವಿಶ್ಲೇಷಣೆ

ಸಮಾಜದ ಚರ್ಚೆಯ ಪ್ರತಿಬಿಂಬ

Published by
ಮಿರರ್‌ ವಿಶ್ಲೇಷಣೆ

Recent Posts

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

2 hours ago

ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?

ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…

4 hours ago

ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!

ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…

5 hours ago

ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!

2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…

6 hours ago

ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?

ನಾಗಾಲ್ಯಾಂಡ್‌ನಲ್ಲಿ ರಬ್ಬರ್‌ ಕೃಷಿ ಸುಮಾರು 29,794 ಹೆಕ್ಟೇರ್‌ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ಸೂಕ್ತ…

18 hours ago

ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ

ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…

21 hours ago