ಸುದ್ದಿಗಳು

ಇದೆಂಥ ಪೈಶಾಚಿಕ….! | ಅನ್ನ ನೀರು ಕೊಡದೆ 1,000 ನಾಯಿಗಳನ್ನು ಕೊಂದ ಕ್ರೂರಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇದೊಂದು ಅತ್ಯಂತ ಭಯಾನಕ ಘಟನೆ.  ದಕ್ಷಿಣ ಕೊರಿಯಾದಲ್ಲಿ 60 ವರ್ಷದ ವ್ಯಕ್ತಿ 1,000 ಕ್ಕೂ ಹೆಚ್ಚು ನಾಯಿಗಳ ಸಾವಿಗೆ ಕಾರಣನಾಗಿದ್ದಾನೆ. ಪ್ರಾಣಿ ಕಿರುಕುಳ ಪ್ರಕರಣದ ತನಿಖೆ ನಡೆಸುತ್ತಿರುವ ದಕ್ಷಿಣ ಕೊರಿಯಾ ಪೊಲೀಸರು ಜನರು ಕೈಬಿಟ್ಟ ನಾಯಿಗಳನ್ನು ಸಾಕುವುದಾಗಿ ತೆಗೆದುಕೊಂಡು ಹೋಗಿ ಆ ನಾಯಿಗಳನ್ನು ಸಾಯುವವರೆಗೂ ಹಸಿವಿನಿಂದ ಬಳಲಿಸಿ ಸಾಯಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಕೊರಿಯಾ ಹೆರಾಲ್ಡ್ ವರದಿ ಮಾಡಿದೆ.

Advertisement
ಆದರೆ ಪ್ರಾಣಿಹಕ್ಕುಗಳ ಕಾರ್ಯಕರ್ತರಿಗೆ ಈತನು ಹೇಳುವ ಕಥೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದರ ಹಿಂದೆ ನಾಯಿಗಳನ್ನು ಬೆಳೆಸಿ ಮಾರಾಟ ಮಾಡುವ ಡಾಗ್ ಬ್ರೀಡರ್ಸ್‌ಗಳ ಕೈವಾಡ ಇದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಸಂತಾನೋತ್ಪತ್ತಿ ವಯಸ್ಸು ಮೀರಿದ ಹಾಗೂ ಅವುಗಳಿಂದ ತಮಗೆ ಯಾವುದೇ ವಾಣಿಜ್ಯಾತ್ಮಕ ಲಾಭ ಸಿಗದ ನಾಯಿಗಳನ್ನು ಸಾಕುವ ಹೊಣೆಯಿಂದ ತಪ್ಪಿಸಿಕೊಳ್ಳಲು ಅವರು ಈ ವ್ಯಕ್ತಿಗೆ ಹಣ ನೀಡಿ, ಅವುಗಳಿಂದ ಮುಕ್ತಿ ಪಡೆಯುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.. 2020ರಿಂದ ಪ್ರತಿ ನಾಯಿಗೆ ಅವುಗಳನ್ನು ಆರೈಕೆ ಮಾಡಲು 10,000 ವನ್‌ ಹಣವನ್ನು ಆತನಿಗೆ ನೀಡಲಾಗಿದೆ. “ಆದರೆ ಆತ ಆರೈಕೆ ನೋಡಿಕೊಳ್ಳುವುದರ ಬದಲು ಅವುಗಳನ್ನು ಲಾಕ್ ಮಾಡಿ ಕೂಡಿಟ್ಟು ಅವುಗಳು ಹಸಿವಿನಿಂದ ಸಾವಿಗೀಡಾಗುವಂತೆ ಮಾಡಿದ್ದಾನೆ ಎಂದು ಪ್ರಾಣಿ ಹಕ್ಕುಗಳ ಗುಂಪಿನ ಆರೈಕೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದ ಅತ್ಯಂತ ಜನನಿಬಿಡ ಪ್ರದೇಶವಾದ ಯಾಂಗ್‌ಪ್ಯೆಯಾಂಗ್‌ನಲ್ಲಿ ಕಂಡುಬಂದ ಈ ಘಟನೆ ಭಯಾನಕವಾಗಿದೆ. ತನ್ನ ಕಳೆದುಹೋದ ನಾಯಿಯನ್ನು ಹುಡುಕುತ್ತಿದ್ದ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಈ ಭಯಾನಕ ದೃಶ್ಯ ಕಂಡುಬಂದಿತ್ತು. ನಂತರ ಈ ಬಗ್ಗೆ ಆತ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಹಸಿವಿನಿಂದ ನರಳಿ ಮೃತಪಟ್ಟ ನಾಯಿಗಳ ಕಳೇಬರಗಳು ನೆಲದ ಮೇಲೆಯೇ ಅಂಟಿಕೊಂಡು ಒಂದು ಪದರವನ್ನೇ ಸೃಷ್ಟಿಸಿದ್ದವು. ಮತ್ತೊಂದು ಪದರ ನಿರ್ಮಾಣವಾಗುವಂತೆ ಮತ್ತಷ್ಟು ಮೃತ ನಾಯಿಗಳನ್ನು ಅವುಗಳ ಮೇಲೆ ಹಾಕಲಾಗಿತ್ತು. ಇನ್ನೂ ಸಾಯಬೇಕಿದ್ದ ನಾಯಿಗಳನ್ನು ಪಂಜರಗಳು, ಚೀಲಗಳು ಮತ್ತು ರಬ್ಬರ್ ಬಾಕ್ಸ್‌ಗಳಲ್ಲಿ ತುಂಬಿ ಇರಿಸಲಾಗಿತ್ತು.

ಈ ವಾರ ಸತ್ತ ನಾಯಿಗಳನ್ನು ಅಲ್ಲಿಂದ ತೆರವು ಮಾಡಲಾಗುವುದು ಎಂದು ಯಾಂಗ್‌ಪಿಯಾಂಗ್‌ನ ಸ್ಥಳೀಯ ಸರ್ಕಾರ ಹೇಳಿದೆ. ನಾಲ್ಕು ನಾಯಿಗಳು ಇಂತಹ ಹಿಂಸಾತ್ಮಕ ಸಂದರ್ಭಗಳಲ್ಲಿಯೂ ಬದುಕುಳಿಯುವಲ್ಲಿ ಯಶಸ್ವಿಯಾದವು ಮತ್ತು ಅಪೌಷ್ಟಿಕತೆ ಮತ್ತು ಚರ್ಮದ ಕಾಯಿಲೆಗಾಗಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿವೆ. ನಾಲ್ಕು ನಾಯಿಗಳಲ್ಲಿ ಎರಡು ಗಂಭೀರ ಸ್ಥಿತಿಯಲ್ಲಿವೆ ಎಂದು ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ದಕ್ಷಿಣ ಕೊರಿಯಾದಲ್ಲಿ ಕಟ್ಟುನಿಟ್ಟಾದ ಪ್ರಾಣಿ ಸಂರಕ್ಷಣಾ ಕಾನೂನುಗಳಿವೆ. ಪ್ರಾಣಿಗಳನ್ನು ಆಹಾರ ಅಥವಾ ನೀರು ನೀಡಲು ವಿಫಲವಾದರೆ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ 30 ಮಿಲಿಯನ್ ವನ್‌ ದಂಡ ಹಾಕುತ್ತಾರೆ. ಆದಾಗ್ಯೂ ದೇಶದಲ್ಲಿ ಪ್ರಾಣಿ ದೌರ್ಜನ್ಯದ ಪ್ರಕರಣಗಳು ಏರಿಕೆ ಕಾಣುತ್ತಿವೆ ಎಂದು ವರದಿ ಹೇಳಿದೆ.
2010 ಮತ್ತು 2019 ರ ನಡುವಿನ ಒಂಬತ್ತು ವರ್ಷಗಳ ಅವಧಿಯಲ್ಲಿ ಪ್ರಾಣಿ ಕಿರುಕುಳ ಪ್ರಕರಣಗಳು 69 ರಿಂದ 914 ಕ್ಕೆ ಏರಿದೆ ಎಂದು ಮಿರರ್ ವರದಿ ಮಾಡಿದೆ. ಕೃಷಿ ಸಚಿವಾಲಯದ ಪ್ರಾಣಿ ಮತ್ತು ಸಸ್ಯ ಸಂಪರ್ಕತಡೆಯನ್ನು ಏಜೆನ್ಸಿಯ ಪ್ರಕಾರ, ಪ್ರಾಣಿಗಳನ್ನು ತ್ಯಜಿಸುವ ಘಟನೆಗಳು ಸುಮಾರು 40,000ದಷ್ಟು ಏರಿಕೆಯಾಗಿದೆ.
 
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |

ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.

2 hours ago

ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ

ಖಾಸಗಿಯವರಿಂದ ಒತ್ತುವರಿಯಾಗಿರುವ  ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…

9 hours ago

ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ

ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…

9 hours ago

ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…

9 hours ago

ಶುಕ್ರ ಮತ್ತು ರಾಹು ಮೀನ ರಾಶಿಯಲ್ಲಿ ಸಂಯೋಗ | 5 ರಾಶಿಚಕ್ರಗಳಲ್ಲಿ ವಿಶೇಷ ಪ್ರಭಾವ |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

9 hours ago

ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ | ಜಿಲ್ಲೆಯ ಅತ್ಯುತ್ತಮ ಕೃಷಿ ಸಖಿ ಪ್ರಶಸ್ತಿ ಸಂಪಾಜೆ ಮೋಹಿನಿ ವಿಶ್ವನಾಥ್ ಅವರಿಗೆ

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ…

19 hours ago