Advertisement
ಸುದ್ದಿಗಳು

ಎಳೆ ಅಡಿಕೆ ಬೀಳುವ ಸಮಸ್ಯೆ | ಪೆಂತಿ ಕೀಟದ ಹಾವಳಿ | ರಾಸಾಯನಿಕ ರಹಿತ ಪರಿಹಾರದ ಅಧ್ಯಯನ ಪ್ರಾರಂಭಗೊಳಿಸಿದ ವಿಜ್ಞಾನಿಗಳು |

Share

ಅಡಿಕೆ ಬೆಳೆಗಾರರಿಗೆ ಬೀಸಿಗೆ ಕಾಲ ಕಳೆದು ಮಳೆಗಾಲದ ಆರಂಭದ ವೇಳೆ ವಿಪರೀತವಾಗಿ ಕಾಡುವ ಸಮಸ್ಯೆ ಎಳೆ ಅಡಿಕೆ ಬೀಳುವುದು. ಇದಕ್ಕೆ ಬಹುಪಾಲು ಕಾರಣ ಪೆಂತಿ ಕೀಟ. ಇದೀಗ ಈ ಕೀಟಿ ನಿಯಂತ್ರಣಕ್ಕೆ ರಾಸಾಯನಿಕ ರಹಿತವಾಗಿ ನಿಯಂತ್ರಣ ಮಾಡುವ ಅಧ್ಯಯನವನ್ನು ಸಿಪಿಸಿಆರ್‌ಐ ವಿಜ್ಞಾನಿಗಳು ಆರಂಭಿಸಿದ್ದಾರೆ.

ಪುತ್ತೂರಿನ ಬಲ್ನಾಡಿನ ಕೃಷಿಕ ಸುರೇಶ್‌ ಭಟ್‌ ಅವರ ಕೃಷಿ ಭೂಮಿಯಲ್ಲಿ ಸಿಪಿಸಿಆರ್‌ ಐ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ.ಮಧು ಅವರು ಮಾಹಿತಿ ನೀಡಿದರು. ಅಡಿಕೆ ಬೀಳುವುದಕ್ಕೆ ಮುಖ್ಯವಾದ ಕಾರಣ ಪೆಂತಿ ಕೀಟ. ಹೆಚ್ಚಾಗಿ ಈ ಕೀಟವು ಅಲಸಂಡೆಯಲ್ಲಿರುತ್ತದೆ, ತಾತ್ಕಾಲಿಕವಾಗಿ ಅಡಿಕೆ ಹಿಂಗಾರಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಕೀಟವು ಅಡಿಕೆ ರಸ ಹೀರುವ ಕಾರಣದಿಂದ ಅಡಿಕೆ ಬೀಳುತ್ತದೆ. ಸದ್ಯ ರಾಸಾಯನಿಕ ಮಾತ್ರವೇ ಪರಿಹಾರವಾಗಿದೆ. ಹೆಚ್ಚುರಾಸಾಯನಿಕ ಸಿಂಪಡಣೆ ಮಾಡುವುದು  ಕೃಷಿ ಬೆಳವಣಿಗೆ ದೃಷ್ಟಿಯಿಂದ ಹಾನಿಕಾರಕವಾದ ಕಾರಣ ಇದೀಗ ರಾಸಾಯನಿಕ ರಹಿತವಾದ ಪ್ರಯೋಗ ನಡೆಯುತ್ತಿದೆ. ರಾಸಾಯನಿಕ ರಹಿತವಾದ ಅಧ್ಯಯನ ಪ್ರಾರಂಭವಾಗಿದೆ. ಈ ಫಲಿತಾಂಶ ಬರಲು ಸಮಯ ಇದೆ, ಪ್ರಾರಂಭದ ಹಂತದಲ್ಲಿ ಈ ಪ್ರಯೋಗ ಇದೆ. ಮುಂದಿನ ದಿನಗಳಲ್ಲಿ ಕೃಷಿಕರಿಗೆ  ಸಿಗಬಹುದು ಎಂದು ಡಾ.ಮಧು ಹೇಳಿದರು.

ಅನಗತ್ಯವಾಗಿ ರಾಸಾಯನಿಕ ಸಿಂಪಡಣೆ ಮಾಡುವುದು ಕಡಿಮೆ ಮಾಡಬೇಕಿದೆ. ವಿಷ  ಸಿಂಪಡಣೆಯಿಂದ ಇತರ ಕೀಟಗಳೂ ನಾಶವಾಗುತ್ತದೆ. ಅನೇಕ ಕೀಟಗಳು ನಮಗೆ ಮಿತ್ರವಾಗಿರುತ್ತದೆ. ವಾತಾವರಣ ಶುದ್ಧತೆ ಹೆಚ್ಚಾಗಬೇಕು, ಆಗ ಆಹಾರ ಸರಪಳಿಯೂ ಬೆಳೆಯುತ್ತದೆ. ವಿಷ ಸಿಂಪಡಣೆಯ ಕಾರಣದಿಂದ ಗೊತ್ತಿಲ್ಲದೇ ಯಾವುದೋ ಒಂದು ಜಾತಿಯ ಕೀಟ ನಾಶವಾಗುತ್ತದೆ. ಟಾರ್ಗೆಟ್‌ ಕೀಟದ ಜೊತೆ ಇನ್ನೊಂದು ಕೀಟವೂ ನಾಶವಾಗುತ್ತದೆ.

ನಿಮ್ಮ ಅಭಿಪ್ರಾಯಗಳಿಗೆ :
ನಿಮ್ಮ ಅಭಿಪ್ರಾಯಗಳಿಗೆ :

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ

2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…

4 hours ago

ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ

ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…

4 hours ago

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

22 hours ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

1 day ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

2 days ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

2 days ago