Advertisement
ಸುದ್ದಿಗಳು

ಎಳೆ ಅಡಿಕೆ ಬೀಳುವ ಸಮಸ್ಯೆ | ಪೆಂತಿ ಕೀಟದ ಹಾವಳಿ | ರಾಸಾಯನಿಕ ರಹಿತ ಪರಿಹಾರದ ಅಧ್ಯಯನ ಪ್ರಾರಂಭಗೊಳಿಸಿದ ವಿಜ್ಞಾನಿಗಳು |

Share

ಅಡಿಕೆ ಬೆಳೆಗಾರರಿಗೆ ಬೀಸಿಗೆ ಕಾಲ ಕಳೆದು ಮಳೆಗಾಲದ ಆರಂಭದ ವೇಳೆ ವಿಪರೀತವಾಗಿ ಕಾಡುವ ಸಮಸ್ಯೆ ಎಳೆ ಅಡಿಕೆ ಬೀಳುವುದು. ಇದಕ್ಕೆ ಬಹುಪಾಲು ಕಾರಣ ಪೆಂತಿ ಕೀಟ. ಇದೀಗ ಈ ಕೀಟಿ ನಿಯಂತ್ರಣಕ್ಕೆ ರಾಸಾಯನಿಕ ರಹಿತವಾಗಿ ನಿಯಂತ್ರಣ ಮಾಡುವ ಅಧ್ಯಯನವನ್ನು ಸಿಪಿಸಿಆರ್‌ಐ ವಿಜ್ಞಾನಿಗಳು ಆರಂಭಿಸಿದ್ದಾರೆ.

ಪುತ್ತೂರಿನ ಬಲ್ನಾಡಿನ ಕೃಷಿಕ ಸುರೇಶ್‌ ಭಟ್‌ ಅವರ ಕೃಷಿ ಭೂಮಿಯಲ್ಲಿ ಸಿಪಿಸಿಆರ್‌ ಐ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ.ಮಧು ಅವರು ಮಾಹಿತಿ ನೀಡಿದರು. ಅಡಿಕೆ ಬೀಳುವುದಕ್ಕೆ ಮುಖ್ಯವಾದ ಕಾರಣ ಪೆಂತಿ ಕೀಟ. ಹೆಚ್ಚಾಗಿ ಈ ಕೀಟವು ಅಲಸಂಡೆಯಲ್ಲಿರುತ್ತದೆ, ತಾತ್ಕಾಲಿಕವಾಗಿ ಅಡಿಕೆ ಹಿಂಗಾರಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಕೀಟವು ಅಡಿಕೆ ರಸ ಹೀರುವ ಕಾರಣದಿಂದ ಅಡಿಕೆ ಬೀಳುತ್ತದೆ. ಸದ್ಯ ರಾಸಾಯನಿಕ ಮಾತ್ರವೇ ಪರಿಹಾರವಾಗಿದೆ. ಹೆಚ್ಚುರಾಸಾಯನಿಕ ಸಿಂಪಡಣೆ ಮಾಡುವುದು  ಕೃಷಿ ಬೆಳವಣಿಗೆ ದೃಷ್ಟಿಯಿಂದ ಹಾನಿಕಾರಕವಾದ ಕಾರಣ ಇದೀಗ ರಾಸಾಯನಿಕ ರಹಿತವಾದ ಪ್ರಯೋಗ ನಡೆಯುತ್ತಿದೆ. ರಾಸಾಯನಿಕ ರಹಿತವಾದ ಅಧ್ಯಯನ ಪ್ರಾರಂಭವಾಗಿದೆ. ಈ ಫಲಿತಾಂಶ ಬರಲು ಸಮಯ ಇದೆ, ಪ್ರಾರಂಭದ ಹಂತದಲ್ಲಿ ಈ ಪ್ರಯೋಗ ಇದೆ. ಮುಂದಿನ ದಿನಗಳಲ್ಲಿ ಕೃಷಿಕರಿಗೆ  ಸಿಗಬಹುದು ಎಂದು ಡಾ.ಮಧು ಹೇಳಿದರು.

ಅನಗತ್ಯವಾಗಿ ರಾಸಾಯನಿಕ ಸಿಂಪಡಣೆ ಮಾಡುವುದು ಕಡಿಮೆ ಮಾಡಬೇಕಿದೆ. ವಿಷ  ಸಿಂಪಡಣೆಯಿಂದ ಇತರ ಕೀಟಗಳೂ ನಾಶವಾಗುತ್ತದೆ. ಅನೇಕ ಕೀಟಗಳು ನಮಗೆ ಮಿತ್ರವಾಗಿರುತ್ತದೆ. ವಾತಾವರಣ ಶುದ್ಧತೆ ಹೆಚ್ಚಾಗಬೇಕು, ಆಗ ಆಹಾರ ಸರಪಳಿಯೂ ಬೆಳೆಯುತ್ತದೆ. ವಿಷ ಸಿಂಪಡಣೆಯ ಕಾರಣದಿಂದ ಗೊತ್ತಿಲ್ಲದೇ ಯಾವುದೋ ಒಂದು ಜಾತಿಯ ಕೀಟ ನಾಶವಾಗುತ್ತದೆ. ಟಾರ್ಗೆಟ್‌ ಕೀಟದ ಜೊತೆ ಇನ್ನೊಂದು ಕೀಟವೂ ನಾಶವಾಗುತ್ತದೆ.

ನಿಮ್ಮ ಅಭಿಪ್ರಾಯಗಳಿಗೆ :
ನಿಮ್ಮ ಅಭಿಪ್ರಾಯಗಳಿಗೆ :

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

6 hours ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

13 hours ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

13 hours ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

14 hours ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

24 hours ago

ಗುಟ್ಕಾ ನಿಷೇಧದ ಹೆಸರಿನಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಲಿ

ಗುಟ್ಕಾ ಮತ್ತು ಪಾನ್‌ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…

1 day ago