ಬಿಪರ್ ಜಾಯ್ ಚಂಡ ಮಾರುತ | ದೇಶದ ಕರಾವಳಿಯಲ್ಲಿ ಆತಂಕ |

June 13, 2023
12:30 PM

ದೇಶದಲ್ಲಿ ಬಿಪರ್​ಜಾಯ್​ ಚಂಡಮಾರುತ ಅಬ್ಬರ ಜೋರಾಗಿದ್ದು, ಉತ್ತರಭಾರತದ ಹಲವೆಡೆ ಆತಂಕ ಸೃಷ್ಟಿಯಾಗಿದೆ. ಮತ್ತೊಂದೆಡೆ ಚಂಡಮಾರುತದ ಕಾರಣಕ್ಕೆ 67 ರೈಲುಗಳ ಸಂಚಾರ ರದ್ದುಗೊಂಡಿದೆ.

ಗುಜರಾತ್​ನ ಸೌರಾಷ್ಟ್ರ ಮತ್ತು ಕಛ್​ ಭಾಗದಲ್ಲಿ ಈಗಾಗಲೇ ಚಂಡಮಾರುತ ವ್ಯಾಪಿಸುವ ಕುರಿತು ಹವಾಮಾನ ಮುನ್ಸೂಚನೆ ನೀಡಲಾಗಿದೆ. ಅದರಲ್ಲೂ ಜೂ. 15ರ ಸಂಜೆ ಸುಮಾರಿಗೆ ಗುಜರಾತ್​ನ ಜಖಾವು ಬಂದರು ಬಳಿ ಅತಿ ತೀವ್ರ ಚಂಡಮಾರುತ ಬೀಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಗುಜರಾತ್​ಗೆ ಜೂ. 15ರಂದು ಅಪ್ಪಳಿಸಲಿರುವ ಬಿಪರ್​​ಜಾಯ್​ ಚಂಡಮಾರುತದ ಹಿನ್ನೆಲೆಯಲ್ಲಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲೂ ಬಿಪರ್​ಜಾಯ್​ ಚಂಡಮಾರುತದ ಅಬ್ಬರ ಜೋರಾಗಿರಲಿದ್ದು, ಜೂ. 13ರಿಂದ 15ರ ವರೆಗೆ ಜನರು ಕಡಲತೀರಕ್ಕೆ ಹೋಗಬಾರದು ಎಂದು ಪಾಲ್ಘಾರ್ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ‌ ಕಾಲ ಮಳೆಯಾಗುವ ಮುನ್ಸೂಚನೆ ಇದೆ. ರಾಜ್ಯಕ್ಕೆ ಮಾನ್ಸೂನ್ ಎಂಟ್ರಿ ಆಗಿರುವ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ‌ ಭಾರೀ ಪ್ರಮಾಣದ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಎತ್ತಿನಹೊಳೆ ಯೋಜನೆಗೆ ಮತ್ತೆ ಚುರುಕು – ಒಂದು ವಾರದಲ್ಲಿ ಕಾಮಗಾರಿ ಆರಂಭಕ್ಕೆ ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ
May 2, 2026
10:58 AM
by: ಮಿರರ್‌ ಡೆಸ್ಕ್
ಕೆಆರ್ಎಸ್ ಡ್ಯಾಂ ಎಚ್ಚರಿಕೆ- 15 ದಿನಗಳಲ್ಲಿ 8 ಅಡಿ ನೀರು ಕುಸಿತ – ಕಾವೇರಿ ಪ್ರದೇಶದಲ್ಲಿ ನೀರಿನ ಅಭಾವ ಭೀತಿ!
May 2, 2026
10:47 AM
by: ಮಿರರ್‌ ಡೆಸ್ಕ್
ತುಮಕೂರಿನಲ್ಲಿ ನವಿಲುಗಳಿಗೆ H5N1 ಸೋಂಕು ದೃಢ: 4 ಗ್ರಾಮಗಳು ಕಂಟೋನ್ಮೆಂಟ್ ವಲಯ ಘೋಷಣೆ, ಕೋಳಿ ಫಾರಂಗಳ ಮೇಲೆ ಕಣ್ಣಿಟ್ಟ ಅಧಿಕಾರಿಗಳು
May 2, 2026
10:37 AM
by: ಮಿರರ್‌ ಡೆಸ್ಕ್
ಯಾದಗಿರಿ ನೀರಿನ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ – 45 ಗ್ರಾಮಗಳಿಗೆ ಬಾಡಿಗೆ ಕೊಳವೆಬಾವಿ ಮೂಲಕ ನೀರು ಪೂರೈಕೆ
May 2, 2026
10:29 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror