Exclusive - Mirror Hunt

ಶಿವಮಯವಾದ ಜಗವು | ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿ ದಾರಿದ್ರ್ಯ- ದುಃಖದಹನ ಶಿವಸ್ತೋತ್ರ | ಇಲ್ಲಿದೆ ಕೇಳಿ ಈ ಸ್ತೋತ್ರ…

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಶಿವರಾತ್ರಿ. ಈ ದಿನ ಜಗವೆಲ್ಲಾ ಶಿವಮಯವಾಗಿದೆ. ರಾತ್ರಿ ಇಡೀ ಜಾಗರಣೆ ಸಹಿತ ಶಿವಾರ್ಚನೆ ನಡೆಯುತ್ತದೆ. ಈ ಸಂದರ್ಭ ವಸಿಷ್ಠರಿಂದ ರಚಿಸಲ್ಪಟ್ಟ ದಾರಿದ್ರ್ಯ ದುಃಖದಹನ ಶಿವಸ್ತೋತ್ರ ಕೇಳುವುದರಿಂದ ಮತ್ತು ಪಠಿಸುವುದರಿಂದ  ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿಯಾಗುತ್ತದೆ ಎನ್ನುವುದು  ನಂಬಿಕೆ. ಇದೀಗ ಈ ಸ್ತೋತ್ರ ಗಮನ ಸೆಳೆದಿದೆ. ಸತ್ಯನಾರಾಯಣ ಭಟ್ರಕೋಡಿ ಅವರು ಹಾಡಿರುವ ಈ ಸ್ತೋತ್ರ ಶಿವ ಭಕ್ತಿಗೆ ಬೆಳಕಾಗಿದೆ.
ಸತ್ಯನಾರಾಯಣ ಭಟ್ರಕೋಡಿ

ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯೂ ಬಯಸುವುದು ಆನಂದ ಮತ್ತು ಸುಖವನ್ನು. ಮಾನವನೂ ಅಷ್ಟೆ, ತನ್ನ ಐಹಿಕ ಬದುಕಿಗಾಗಿ ಸಂಪತ್ತನ್ನು ಗಳಿಸುವುದಕ್ಕಾಗಿ ದುಡಿಯುತ್ತಾನಾದರೂ ಆತನ ಅಂತಿಮ ಉದ್ದೇಶ ಆನಂದ ಮತ್ತು ಸುಖಮಯ ಬದುಕು. ಆದರೆ ನಾವು ಗಳಿಸುವ ಆಸ್ತಿ ಅಂತಸ್ತು ಸಂಪತ್ತುಗಳು ನಿಜವಾದ ಸುಖವನ್ನು ನೀಡಲಾರವು. ಈ ಲೌಕಿಕ ಜೀವನದಲ್ಲಿ ನಮ್ಮ ಕರ್ಮಗಳ ಫಲವಾಗಿ ದುಃಖ, ದಾರಿದ್ರ್ಯಗಳು ನಮ್ಮನ್ನು ಅಂಟಿಕೊಳ್ಳುತ್ತವೆ. ಇವುಗಳಿಂದ ಪಾರಾಗಬೇಕಾದರೆ ಪರಮೇಶ್ವನ ಮೊರೆಹೋಗುವುದೊಂದೇ ದಾರಿ.

Advertisement

‘ಶಿವ’ ಎಂದರೆ ಆನಂದ. ಮಹಾಶಿವರಾತ್ರಿಯಂದು ಮುಕ್ತೇಶ್ವರನಾದ ಮಹಾಶಿವನನ್ನು ಪ್ರಾರ್ಥಿಸಿಕೊಂಡರೆ ಕರುಣಾಮಯನಾದ ಮುಕ್ಕಣ್ಣ ನಮ್ಮೆಲ್ಲ ಪಾಪಗಳನ್ನು ಪರಿಹರಿಸಿ, ದುಃಖ ದಾರಿದ್ರ್ಯಗಳಿಂದ ನಮ್ಮನ್ನು ಮುಕ್ತನಾಗಿಸುವನು.

ಮಾಯೆಯ ಪ್ರಭಾವದಿಂದ ಮಾನವನು ಯಾವುದನ್ನು ಸುಖವೆಂದು ಭ್ರಮಿಸುತ್ತಾನೋ ಮತ್ತು ಅದರ ಪ್ರಾಪ್ತಿಗಾಗಿ ಆತನು ಏನೆಲ್ಲ ವ್ಯವಹಾರಗಳನ್ನು ಮಾಡುತ್ತಾನೋ, ಅವುಗಳ ಮೂಲಕ ಉಂಟಾಗುವ ಕರ್ಮಲೇಪದಿಂದ ದುಃಖ ಮತ್ತು ದಾರಿದ್ರ್ಯಗಳಿಂದ ಪೀಡಿತನಾಗುತ್ತಾನೆ.  ವಸಿಷ್ಠರಿಂದ ರಚಿಸಲ್ಪಟ್ಟ ಈ ದಾರಿದ್ರ್ಯ ದುಃಖದಹನ ಶಿವಸ್ತೋತ್ರವು ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿ.
ಸರ್ವಪಾಪಗಳಿಂದ ವಿಶುದ್ಧಾತ್ಮರಾಗಿಸಿ, ಶಿವಸಾಯುಜ್ಯವನ್ನು ನೀಡಬಲ್ಲ ದಾರಿದ್ರ್ಯ ದುಃಖದಹನ ಶಿವಸ್ತೋತ್ರವು ಶಿವರಾತ್ರಿಯ ಉಪಾಸನೆಗೆ ಅತ್ಯಂತ ಪ್ರಶಸ್ತವಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

1 day ago

ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649

1 day ago

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ

ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

1 day ago

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

2 days ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

2 days ago

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 days ago