Advertisement
Exclusive - Mirror Hunt

ಶಿವಮಯವಾದ ಜಗವು | ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿ ದಾರಿದ್ರ್ಯ- ದುಃಖದಹನ ಶಿವಸ್ತೋತ್ರ | ಇಲ್ಲಿದೆ ಕೇಳಿ ಈ ಸ್ತೋತ್ರ…

Share
ಶಿವರಾತ್ರಿ. ಈ ದಿನ ಜಗವೆಲ್ಲಾ ಶಿವಮಯವಾಗಿದೆ. ರಾತ್ರಿ ಇಡೀ ಜಾಗರಣೆ ಸಹಿತ ಶಿವಾರ್ಚನೆ ನಡೆಯುತ್ತದೆ. ಈ ಸಂದರ್ಭ ವಸಿಷ್ಠರಿಂದ ರಚಿಸಲ್ಪಟ್ಟ ದಾರಿದ್ರ್ಯ ದುಃಖದಹನ ಶಿವಸ್ತೋತ್ರ ಕೇಳುವುದರಿಂದ ಮತ್ತು ಪಠಿಸುವುದರಿಂದ  ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿಯಾಗುತ್ತದೆ ಎನ್ನುವುದು  ನಂಬಿಕೆ. ಇದೀಗ ಈ ಸ್ತೋತ್ರ ಗಮನ ಸೆಳೆದಿದೆ. ಸತ್ಯನಾರಾಯಣ ಭಟ್ರಕೋಡಿ ಅವರು ಹಾಡಿರುವ ಈ ಸ್ತೋತ್ರ ಶಿವ ಭಕ್ತಿಗೆ ಬೆಳಕಾಗಿದೆ.
ಸತ್ಯನಾರಾಯಣ ಭಟ್ರಕೋಡಿ

ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯೂ ಬಯಸುವುದು ಆನಂದ ಮತ್ತು ಸುಖವನ್ನು. ಮಾನವನೂ ಅಷ್ಟೆ, ತನ್ನ ಐಹಿಕ ಬದುಕಿಗಾಗಿ ಸಂಪತ್ತನ್ನು ಗಳಿಸುವುದಕ್ಕಾಗಿ ದುಡಿಯುತ್ತಾನಾದರೂ ಆತನ ಅಂತಿಮ ಉದ್ದೇಶ ಆನಂದ ಮತ್ತು ಸುಖಮಯ ಬದುಕು. ಆದರೆ ನಾವು ಗಳಿಸುವ ಆಸ್ತಿ ಅಂತಸ್ತು ಸಂಪತ್ತುಗಳು ನಿಜವಾದ ಸುಖವನ್ನು ನೀಡಲಾರವು. ಈ ಲೌಕಿಕ ಜೀವನದಲ್ಲಿ ನಮ್ಮ ಕರ್ಮಗಳ ಫಲವಾಗಿ ದುಃಖ, ದಾರಿದ್ರ್ಯಗಳು ನಮ್ಮನ್ನು ಅಂಟಿಕೊಳ್ಳುತ್ತವೆ. ಇವುಗಳಿಂದ ಪಾರಾಗಬೇಕಾದರೆ ಪರಮೇಶ್ವನ ಮೊರೆಹೋಗುವುದೊಂದೇ ದಾರಿ.

‘ಶಿವ’ ಎಂದರೆ ಆನಂದ. ಮಹಾಶಿವರಾತ್ರಿಯಂದು ಮುಕ್ತೇಶ್ವರನಾದ ಮಹಾಶಿವನನ್ನು ಪ್ರಾರ್ಥಿಸಿಕೊಂಡರೆ ಕರುಣಾಮಯನಾದ ಮುಕ್ಕಣ್ಣ ನಮ್ಮೆಲ್ಲ ಪಾಪಗಳನ್ನು ಪರಿಹರಿಸಿ, ದುಃಖ ದಾರಿದ್ರ್ಯಗಳಿಂದ ನಮ್ಮನ್ನು ಮುಕ್ತನಾಗಿಸುವನು.

ಮಾಯೆಯ ಪ್ರಭಾವದಿಂದ ಮಾನವನು ಯಾವುದನ್ನು ಸುಖವೆಂದು ಭ್ರಮಿಸುತ್ತಾನೋ ಮತ್ತು ಅದರ ಪ್ರಾಪ್ತಿಗಾಗಿ ಆತನು ಏನೆಲ್ಲ ವ್ಯವಹಾರಗಳನ್ನು ಮಾಡುತ್ತಾನೋ, ಅವುಗಳ ಮೂಲಕ ಉಂಟಾಗುವ ಕರ್ಮಲೇಪದಿಂದ ದುಃಖ ಮತ್ತು ದಾರಿದ್ರ್ಯಗಳಿಂದ ಪೀಡಿತನಾಗುತ್ತಾನೆ.  ವಸಿಷ್ಠರಿಂದ ರಚಿಸಲ್ಪಟ್ಟ ಈ ದಾರಿದ್ರ್ಯ ದುಃಖದಹನ ಶಿವಸ್ತೋತ್ರವು ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿ.
ಸರ್ವಪಾಪಗಳಿಂದ ವಿಶುದ್ಧಾತ್ಮರಾಗಿಸಿ, ಶಿವಸಾಯುಜ್ಯವನ್ನು ನೀಡಬಲ್ಲ ದಾರಿದ್ರ್ಯ ದುಃಖದಹನ ಶಿವಸ್ತೋತ್ರವು ಶಿವರಾತ್ರಿಯ ಉಪಾಸನೆಗೆ ಅತ್ಯಂತ ಪ್ರಶಸ್ತವಾಗಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…

3 hours ago

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ

ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…

7 hours ago

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

1 day ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

1 day ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

1 day ago

ಗೋಮಯದಿಂದ ಗಣೇಶನ ಮೂರ್ತಿ – ದೇಶದಾದ್ಯಂತ ಸಾವಿರಾರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ

ತಂದೆಯ ನೆನಪಿಗಾಗಿ ಇಂದೋರ್‌ನ ವ್ಯಕ್ತಿಯೊಬ್ಬರು ಗೋಮಯದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ…

1 day ago