Advertisement
Exclusive - Mirror Hunt

ಶಿವಮಯವಾದ ಜಗವು | ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿ ದಾರಿದ್ರ್ಯ- ದುಃಖದಹನ ಶಿವಸ್ತೋತ್ರ | ಇಲ್ಲಿದೆ ಕೇಳಿ ಈ ಸ್ತೋತ್ರ…

Share
ಶಿವರಾತ್ರಿ. ಈ ದಿನ ಜಗವೆಲ್ಲಾ ಶಿವಮಯವಾಗಿದೆ. ರಾತ್ರಿ ಇಡೀ ಜಾಗರಣೆ ಸಹಿತ ಶಿವಾರ್ಚನೆ ನಡೆಯುತ್ತದೆ. ಈ ಸಂದರ್ಭ ವಸಿಷ್ಠರಿಂದ ರಚಿಸಲ್ಪಟ್ಟ ದಾರಿದ್ರ್ಯ ದುಃಖದಹನ ಶಿವಸ್ತೋತ್ರ ಕೇಳುವುದರಿಂದ ಮತ್ತು ಪಠಿಸುವುದರಿಂದ  ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿಯಾಗುತ್ತದೆ ಎನ್ನುವುದು  ನಂಬಿಕೆ. ಇದೀಗ ಈ ಸ್ತೋತ್ರ ಗಮನ ಸೆಳೆದಿದೆ. ಸತ್ಯನಾರಾಯಣ ಭಟ್ರಕೋಡಿ ಅವರು ಹಾಡಿರುವ ಈ ಸ್ತೋತ್ರ ಶಿವ ಭಕ್ತಿಗೆ ಬೆಳಕಾಗಿದೆ.
ಸತ್ಯನಾರಾಯಣ ಭಟ್ರಕೋಡಿ

ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯೂ ಬಯಸುವುದು ಆನಂದ ಮತ್ತು ಸುಖವನ್ನು. ಮಾನವನೂ ಅಷ್ಟೆ, ತನ್ನ ಐಹಿಕ ಬದುಕಿಗಾಗಿ ಸಂಪತ್ತನ್ನು ಗಳಿಸುವುದಕ್ಕಾಗಿ ದುಡಿಯುತ್ತಾನಾದರೂ ಆತನ ಅಂತಿಮ ಉದ್ದೇಶ ಆನಂದ ಮತ್ತು ಸುಖಮಯ ಬದುಕು. ಆದರೆ ನಾವು ಗಳಿಸುವ ಆಸ್ತಿ ಅಂತಸ್ತು ಸಂಪತ್ತುಗಳು ನಿಜವಾದ ಸುಖವನ್ನು ನೀಡಲಾರವು. ಈ ಲೌಕಿಕ ಜೀವನದಲ್ಲಿ ನಮ್ಮ ಕರ್ಮಗಳ ಫಲವಾಗಿ ದುಃಖ, ದಾರಿದ್ರ್ಯಗಳು ನಮ್ಮನ್ನು ಅಂಟಿಕೊಳ್ಳುತ್ತವೆ. ಇವುಗಳಿಂದ ಪಾರಾಗಬೇಕಾದರೆ ಪರಮೇಶ್ವನ ಮೊರೆಹೋಗುವುದೊಂದೇ ದಾರಿ.

‘ಶಿವ’ ಎಂದರೆ ಆನಂದ. ಮಹಾಶಿವರಾತ್ರಿಯಂದು ಮುಕ್ತೇಶ್ವರನಾದ ಮಹಾಶಿವನನ್ನು ಪ್ರಾರ್ಥಿಸಿಕೊಂಡರೆ ಕರುಣಾಮಯನಾದ ಮುಕ್ಕಣ್ಣ ನಮ್ಮೆಲ್ಲ ಪಾಪಗಳನ್ನು ಪರಿಹರಿಸಿ, ದುಃಖ ದಾರಿದ್ರ್ಯಗಳಿಂದ ನಮ್ಮನ್ನು ಮುಕ್ತನಾಗಿಸುವನು.

ಮಾಯೆಯ ಪ್ರಭಾವದಿಂದ ಮಾನವನು ಯಾವುದನ್ನು ಸುಖವೆಂದು ಭ್ರಮಿಸುತ್ತಾನೋ ಮತ್ತು ಅದರ ಪ್ರಾಪ್ತಿಗಾಗಿ ಆತನು ಏನೆಲ್ಲ ವ್ಯವಹಾರಗಳನ್ನು ಮಾಡುತ್ತಾನೋ, ಅವುಗಳ ಮೂಲಕ ಉಂಟಾಗುವ ಕರ್ಮಲೇಪದಿಂದ ದುಃಖ ಮತ್ತು ದಾರಿದ್ರ್ಯಗಳಿಂದ ಪೀಡಿತನಾಗುತ್ತಾನೆ.  ವಸಿಷ್ಠರಿಂದ ರಚಿಸಲ್ಪಟ್ಟ ಈ ದಾರಿದ್ರ್ಯ ದುಃಖದಹನ ಶಿವಸ್ತೋತ್ರವು ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿ.
ಸರ್ವಪಾಪಗಳಿಂದ ವಿಶುದ್ಧಾತ್ಮರಾಗಿಸಿ, ಶಿವಸಾಯುಜ್ಯವನ್ನು ನೀಡಬಲ್ಲ ದಾರಿದ್ರ್ಯ ದುಃಖದಹನ ಶಿವಸ್ತೋತ್ರವು ಶಿವರಾತ್ರಿಯ ಉಪಾಸನೆಗೆ ಅತ್ಯಂತ ಪ್ರಶಸ್ತವಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

6 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

13 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

1 day ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

2 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

2 days ago