#Damayana | ಸುಳ್ಯದ ಹುಡುಗರ “ದಾಮಾಯಣ” | ಸದ್ದು ಮಾಡಲಿರುವ ದಾಮಾಯಣ..! |

July 2, 2023
8:42 PM

ದಾಮಾಯಣ ಇದು ದಾಮಾಯಣ….!! ಇದೆಂತ ಮಾರ್ರೆ ದಾಮಾಯಣ ಅಂತ ಕೇಳ್ತೀರಾ ? ಇದು ಸುಳ್ಯದ ಹುಡುಗರು ನಟಿಸಿರುವ, ತಂಡ ಮಾಡಿರುವ ಸಿನಿಮಾ. ಬಹುನಿರೀಕ್ಷೆಯ ಸಿನಿಮಾ. ದಕ್ಷಿಣ ಕನ್ನಡ ಸೊಗಡಿನ ಭಾಷೆಯಲ್ಲಿ ಬಂದಿರುವ ಸಿನಿಮಾ. ಪಕ್ಕಾ ಲೋಕಲ್‌ ಹುಡುಗನ ದೊಡ್ಡ ಕನಸಿನ ಚಿತ್ರ ಇದು.

Advertisement
Advertisement

Advertisement

ಹೌದು, ಸುಳ್ಯದ ಹುಡುಗರ ಒಂದು ಸಿನಿಮಾ ಸೆಟ್ಟೇರಿದೆ. ಕನಸು ಮತ್ತು ವಾಸ್ತವದ ಮೇಲೆ ಇರುವ ಹೊಸ ಸಿನಿಮಾ ಇದೆ ಜುಲೈ 14ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಮಂಗಳೂರಿನಲ್ಲಿ ಆಡಿಯೋ ಲಾಂಚ್ ಆಗಿದೆ.

ಸುಳ್ಯದ ಉತ್ಸಾಹಿ ಯುವಕ, ಯುವಪ್ರತಿಭೆ ಶ್ರೀಮುಖ ಅವರು ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ದಕ್ಷಿಣ ಕನ್ನಡ ಸೊಗಡಿನ ಕನ್ನಡ ಭಾಷೆಯಲ್ಲಿ ಬಂದಿರುವ ಈ ಚಿತ್ರ ಪಕ್ಕ ಲೋಕಲ್ ಹುಡುಗನ ಕಥೆ ಇರುವ ಸಿನಿಮಾವಾಗಿದೆ. ಪಕ್ಕಾ ತಮಾಷೆಯ ಈಗಿನ ಕಾಲಘಟ್ಟಕ್ಕೆ ಸರಿಹೊಂದುವಂತಹ ಚಲನಚಿತ್ರವಾಗಿದೆ.

Advertisement

ಸುಳ್ಯ, ಪುತ್ತೂರು, ಮಂಗಳೂರು ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ. ಈ ಚಿತ್ರದಲ್ಲಿ 5 ಹಾಡುಗಳಿದ್ದು  ಮಂಗಳೂರಿನಲ್ಲಿ ಹಾಡುಗಳು ಬಿಡುಗಡೆಯಾಗಿದೆ.

Advertisement

ಸೆವೆಂಟಿ ಸೆವೆನ್ ಸ್ಟುಡಿಯೋಸ್ ಮೂಲಕ ರಾಘವೇಂದ್ರ ಕುಡ್ವ ನಿರ್ಮಿಸಿರುವ ಈ ಸಿನಿಮಾಕ್ಕೆ ಸಿದ್ದು ಜಿ.ಎಸ್ ಅವರು ಛಾಯಾಗ್ರಹಣ ಮಾಡಿ, ಕೆ. ಎಂ ಕಾರ್ತಿಕ್ ಅವರ ಸಂಕಲನ, ಕೀರ್ತನ್ ಬಾಳಿಲ ಸಂಗೀತ ನಿರ್ದೇಶನ, ಅಕ್ಷಯ್ ರೇವಂಕರ್ ಅವರು ಸಿನಿಮಾದ ಸಹ ನಿರ್ದೇಶನ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕೆಲ್ಸ ಮಾಡಿದ್ದಾರೆ.

ನಾಯಕಿಯಾಗಿ ನಟಿ ಅನಘ ಭಟ್ ಅವರು ನಟಿಸಿದ್ದಾರೆ. ಜುಲೈ 14ಕ್ಕೆ ಬಿಡುಗಡೆ ಆಗಿ ಯಶಸ್ಸು ಪಡೆಯಲಿದೆ ಎನ್ನುವ ವಿಶ್ವಾಸ ಈ ತಂಡದ್ದು.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 15-05-2024 | ಸದ್ಯ ಮಳೆ ಇದೆ | ಮೇ.21 ರಿಂದ ಮಳೆ ತೀವ್ರತೆ ಕಡಿಮೆ | ಅವಧಿಗೆ ಮುಂಗಾರು ಪ್ರಾರಂಭವಾದೀತೇ..?
May 15, 2024
11:43 AM
by: ಸಾಯಿಶೇಖರ್ ಕರಿಕಳ
ವಳಲಂಬೆಯಲ್ಲಿ ಯಕ್ಷಗಾನ | ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿಯವರಿಗೆ ಗೌರವಾರ್ಪಣೆ | ಕಲಾವಿದರನ್ನು ಗೌರವಿಸುವುದು ಉತ್ತಮ ಕೆಲಸ -ಹರೀಶ್ ಬಳಂತಿಮೊಗರು |
May 14, 2024
10:05 PM
by: ದ ರೂರಲ್ ಮಿರರ್.ಕಾಂ
ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |
May 14, 2024
9:32 PM
by: ದ ರೂರಲ್ ಮಿರರ್.ಕಾಂ
ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |
May 14, 2024
8:28 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror