Advertisement
MIRROR FOCUS

ಕಳೆನಾಶಕ ಸಿಂಪಡಣೆಯಿಂದ ಇಬ್ಬರು ಬಲಿ | ಹಲವು ದೇಶಗಳಲ್ಲಿ ಕಳೆನಾಶಕ ಬಳಕೆ ನಿಷೇಧ | ಭಾರತದಲ್ಲೂ ನಿಷೇಧ ಸಾಧ್ಯ ಇದೆಯೇ…?

Share

ಕಳೆನಾಶಕ ಸಿಂಪಡಣೆ ಅಪಾಯಕಾರಿಯಾಗಿ ಕಾಣಿಸತೊಡಗಿದೆ. ಹಾಸನದಲ್ಲಿ  ಯುವಕನೊಬ್ಬ ಅಸ್ವಸ್ಥಗೊಂಡು ಮೃತಪಟ್ಟರೆ, ಕೆಲವು ಸಮಯದ ಹಿಂದೆ  ಕುಮಟಾದಲ್ಲಿ ಉಪವಲಯ ಅರಣ್ಯಾಧಿಕಾರಿಯೊಬ್ಬರು ಬಲಿಯಾಗಿದ್ದರು. ಕಳೆನಾಶಕ ಆರೋಗ್ಯದ ಮೇಲೆ, ಪರಿಸರದ ಮೇಲೆ ಅಪಾಯ ಇದೆ ಎಂದು ಕೆಲವು ದೇಶಗಳು ನಿಷೇಧ ಮಾಡಿದ್ದವು. ಆರೋಗ್ಯದ ಅಪಾಯಗಳನ್ನು ಉಲ್ಲೇಖಿಸಿ ಸಾಮಾನ್ಯ ಕಳೆನಾಶಕ ಗ್ಲೈಫೋಸೇಟ್ ಬಳಕೆಯನ್ನು ಕೇಂದ್ರವು ನಿರ್ಬಂಧಿಸುವ ಬಗ್ಗೆ ಕಳೆದ ವರ್ಷ ಚರ್ಚೆಯಾಗಿತ್ತು.  ತಜ್ಞರು ಈ ಕ್ರಮವನ್ನು ಸ್ವಾಗತಿಸಿದ್ದರು. ಆದರೆ ನಿಯಂತ್ರಿಕ ಔಷಧವಾಗಿ ಬಳಕೆಯಲ್ಲಿದೆ.

ಹಾಸನದಲ್ಲಿ ಕೀರ್ತಿ ಎಂಬ 23 ವರ್ಷದ ಯುವಕ ಸತತ 1 ವಾರ ಶುಂಠಿಗೆ ಕಳೆನಾಶಕ ಸಿಂಪಡಿಸಿದ್ದರು. ಬಳಿಕ ದಿಢೀರನೆ ವಾಂತಿ, ಸುಸ್ತಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿ 4 ದಿನಗಳ ಬಳಿಕ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ರಕ್ತದ ಪರೀಕ್ಷೆ ವೇಳೆ ಕೀರ್ತಿ ದೇಹದಲ್ಲಿ ವಿಷ ಇರೋದು ದೃಢವಾಗಿತ್ತು.

ಹುಬ್ಬಳ್ಳಿಯ ಹಳಿಯಾಳ ವಿಭಾಗದ ಕುಳಗಿ ಶಾಖೆಯ ವಿರ್ನೋಲಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಉಪ ವಲಯ ಅರಣ್ಯಾಧಿಕಾರಿಯೊಬ್ಬರು ಕೀಟನಾಶಕದ ಅಂಶ ದೇಹಕ್ಕೆ ತಗುಲಿ ಸಾವನ್ನಪ್ಪಿರುವ  ಘಟನೆ ಕೆಲವು ಸಮಯದ ಹಿಂದೆ ನಡೆದಿತ್ತು. ಸಾಗವಾನಿ ಮಡಿಗೆ ಕಳೆನಾಶಕ ಹಾಕುವ ವೇಳೆ ಈ ಘಟನೆ ಸಂಭವಿಸಿತ್ತು.

ಕಳೆದ ಕೆಲವು ವರ್ಷಗಳಿಂದ ಕಳೆನಾಶಕ ಸಿಂಪಡಣೆ ಹಾಗೂ ಆರೋಗ್ಯ, ಪರಿಸರದ ಮೇಲಿನ ಅಪಾಯದ ಬಗ್ಗೆ ಚರ್ಚೆಯಾಗುತ್ತಿತ್ತು. ಕೆಲವು ದೇಶಗಳಲ್ಲಿ ಕಳೆನಾಶಕ ಬಳಕೆ ನಿಷೇಧ ಮಾಡಲಾಗಿದೆ. ಅದರಲ್ಲೂ ಆರೋಗ್ಯದ ಅಪಾಯಗಳನ್ನು ಉಲ್ಲೇಖಿಸಿ ಸಾಮಾನ್ಯ ಕಳೆನಾಶಕ ಗ್ಲೈಫೋಸೇಟ್ ಬಳಕೆಯನ್ನು ನಿಷೇಧ ಮಾಡಲಾಗಿತ್ತು. ಭಾರತದಲ್ಲೂ ನಿಷೇಧದ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ಚರ್ಚೆಯಾಗಿತ್ತು. ಈ ಕ್ರಮವನ್ನು ತಜ್ಞರು ಸ್ವಾಗತಿಸಿದ್ದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 2022 ರ ಅಕ್ಟೋಬರ್ 21 ರಂದು ಗ್ಲೈಫೋಸೇಟ್, ವ್ಯಾಪಕವಾಗಿ ಬಳಸಲಾಗುವ ಸಸ್ಯನಾಶಕಗಳ ಬಳಕೆಯನ್ನು ನಿರ್ಬಂಧಿಸುವ ಸೂಚನೆಯನ್ನು ನೀಡಿತ್ತು. ಮಾನವರು ಮತ್ತು ಪ್ರಾಣಿಗಳ ಆರೋಗ್ಯದ ಅಪಾಯಗಳನ್ನು ಉಲ್ಲೇಖಿಸಿತ್ತು.

ಸುಮಾರು 35 ದೇಶಗಳು ಗ್ಲೈಫೋಸೇಟ್ ಬಳಕೆಯನ್ನು ನಿರ್ಬಂಧಿಸಿವೆ. ಇವುಗಳಲ್ಲಿ ಶ್ರೀಲಂಕಾ, ನೆದರ್ಲ್ಯಾಂಡ್ಸ್, ಫ್ರಾನ್ಸ್, ಕೊಲಂಬಿಯಾ, ಕೆನಡಾ, ಇಸ್ರೇಲ್ ಮತ್ತು ಅರ್ಜೆಂಟೀನಾ ಸೇರಿವೆ. ಗ್ಲೈಫೋಸೇಟ್‌ನ ಆರೋಗ್ಯದ ಪರಿಣಾಮಗಳು ಕ್ಯಾನ್ಸರ್, ಸಂತಾನೋತ್ಪತ್ತಿ ಮತ್ತು  ಊತ, ಚರ್ಮದ ಸುಡುವಿಕೆ, ಮೂಗಿನ ಅಸ್ವಸ್ಥತೆ, ಅಹಿತಕರ ರುಚಿ ಮತ್ತು ಮಸುಕಾದ ದೃಷ್ಟಿ ಇತ್ಯಾದಿಗಳು ಕಾಣುತ್ತವೆ.

ಈಗ ಭಾರತದಲ್ಲಿ 20ಕ್ಕೂ ಹೆಚ್ಚು ಬೆಳೆಗಳಲ್ಲಿ ಗ್ಲೈಫೋಸೇಟ್ ಬಳಸುತ್ತಿರುವುದು ಕಂಡುಬಂದಿದೆ. ಕಳೆನಾಶಕವನ್ನು ಬಳಸುವವರಲ್ಲಿ ಹೆಚ್ಚಿನವರು  ತರಬೇತಿ ಪಡೆದಿಲ್ಲ ಮತ್ತು ಸೂಕ್ತ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಹೊಂದಿಲ್ಲ ಎಂದು ಅಂದು ವರದಿ ಮಾಡಲಾಗಿತ್ತು. ಇಂದಿಗೂ ನಿಯಂತ್ರಿತ ಔಷಧವಾಗಿ ಸಿಂಪಡಣೆ ಮಾಡಲಾಗುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜೂನ್‌ನಲ್ಲಿ 40% ಮಳೆ ಕೊರತೆ – ಜುಲೈನಲ್ಲಿ ಮುಂಗಾರು ಭರ್ಜರಿ..! ದೇಶಾದ್ಯಂತ ಮಳೆ ಚುರುಕು

ಜೂನ್‌ನಲ್ಲಿ ದಾಖಲಾಗಿದ್ದ ಮಳೆ ಕೊರತೆ ಜುಲೈ ಆರಂಭದ ಭಾರೀ ಮಳೆಯಿಂದ ವೇಗವಾಗಿ ಕಡಿಮೆಯಾಗುತ್ತಿದೆ.…

5 hours ago

ರಾಜ್ಯದ 9 ಜಿಲ್ಲೆಗಳಲ್ಲಿ ಜುಲೈ 9 ರಿಂದ 11ರವರೆಗೆ ಭಾರೀ ಮಳೆ ಸಾಧ್ಯತೆ – IMD ಯೆಲ್ಲೋ ಅಲರ್ಟ್

ಜುಲೈ 9ರಿಂದ 11ರವರೆಗೆ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ…

6 hours ago

E20 ಪೆಟ್ರೋಲ್‌ನಿಂದ ಮೈಲೇಜ್ ಕಡಿಮೆಯಾಗುತ್ತದೆಯೇ? ಹಳೆಯ ವಾಹನಗಳಿಗೆ ಅಪಾಯ ಇದೆಯೇ?

E20 ಪೆಟ್ರೋಲ್ ಬಳಕೆಯಿಂದ ಸುಮಾರು 3–5% ಮೈಲೇಜ್ ಕುಸಿಯುವ ಸಾಧ್ಯತೆ ಇದೆ. ಆದರೆ…

10 hours ago

ಹವಾಮಾನ ವರದಿ | 06-07-2026 | ಕರ್ನಾಟಕದಲ್ಲಿ ಮಳೆ ಮತ್ತಷ್ಟು ಕಡಿಮೆಯಾಗುವ ಸೂಚನೆ | ಜುಲೈ 10ರಿಂದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಸಾಧ್ಯತೆ

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜುಲೈ…

11 hours ago

ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ

ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…

1 day ago